suddibindu.in
ಕಾರವಾರ : ಉತ್ತರಕನ್ನಡ ಕನ್ನಡ (uttarkannada) ಜಿಲ್ಲೆಯ ರಾಜಕಾರಣದಲ್ಲಿ ಉಳಿದ ಸಮಾಜವರಂತೆ ಒಕ್ಕಲಿಗರು (Vokkaliga)ಸಹ ಅಷ್ಟೆ ಹಿಡಿತವನ್ನ ಹೊಂದಿದ್ದಾರೆ.ಜಿಲ್ಲೆಯ ಕರಾವಳಿಯಲ್ಲಿ(Karavali) ಇವರ ಹಿಡಿತ ಸಹ ರಾಜಕೀಯ ಪಕ್ಷದ ಮೇಲಿದೆ. ಆದರೆ ಜಿಲ್ಲಾ ಬಿಜೆಪಿ ಪದಾಧಿಕಾರಿಗಳ ಪಟ್ಟಿಯಲ್ಲಿ ಒಕ್ಕಲಿಗ ಸಮುದಾಯದ ಮುಖಂಡರನ್ನ ಸಂಪೂರ್ಣವಾಗಿ ಕಡೆಗಣಿಸಲಾಗಿದ್ದು, ಒಕ್ಕಲಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ಇದನ್ನು ಓದಿ:-ಹೃದಯಾಘಾತ ವಿದ್ಯಾರ್ಥಿನಿ ಸಾವು

ಉತ್ತರಕನ್ನಡ ಜಿಲ್ಲೆಯಲ್ಲಿ(uttar kannada)1.82ಲಕ್ಷ ಒಕ್ಕಲಿಗರ ಜನ ಸಂಖ್ಯೆ ಇದೆ, ಅದರಲ್ಲೂ ಬಿಜೆಪಿಯಲ್ಲಿ (bjp)ಅನೇಕರು ಕಳೆದ ಅನೇಕ ವರ್ಷಗಳಿಂದ ಪಕ್ಷಕ್ಕಾಗಿ ದುಡಿಯತ್ತಾ ಬಂದಿದ್ದಾರೆ, ಆದರೆ ಈ ಹಿಂದೆ ಪದಾಧಿಕಾರಿಗಳ ಆಯ್ಕೆ ವೇಳೆ ಒಕ್ಕಲಿಗರಿಗೂ ಸರಿ ಸಮಾನವಾಗಿರುವ ಸ್ಥಾನವನ್ನ ನೀಡಲಾಗುತ್ತಾ ಬರಲಾಗಿದೆ, ಆದರೆ ಈ ಭಾರಿ ಹೊರ ಬಿದ್ದಿರುವ ಬಿಜೆಪಿಯ ಜಿಲ್ಲಾ ಪದಾಧಿಕಾರಿಗಳ ಪಟ್ಟಿಯಲ್ಲಿ ಯಾವೊಬ್ಬ ಒಕ್ಕಲಿಗ ಮುಖಂಡರಿಗೂ ಈ ಪದಾಧಿಕಾರಿಗಳ ಪಟ್ಟಿಯಲ್ಲಿ ಯಾವುದೇ ಸ್ಥಾನ ನೀಡದಿರುವುದು ಬಿಜೆಪಿಯಲ್ಲಿರುವ ಒಕ್ಕಲಿಗರಿಗೆ ಅನ್ಯಾಯಮಾಡಿದಂತಾಗಿದೆ ಎಂದು ಒಕ್ಕಲಿಗ ಮುಖಂಡರು ಆರೋಪಿಸುತ್ತಿದ್ದಾರೆ.

ಈಗಾಗಲೇ ಜಿಲ್ಲಾ ಅಧ್ಯಕ್ಷರಾಗಿ ನೇಮಕಗೊಂಡಿರುವ ಎನ್‌ ಎಸ್‌ ಹೆಗಡೆ ಅವರು ಬಿಜೆಪಿಯಲ್ಲಿರುವ ಅನೇಕ ಹಿರಿಯರಿಗೆ ಸ್ಥಾನ ನೀಡದೆ ಕಡೆಗಡೆಸಿದ್ದಾರೆ ಎನ್ನುವ ಬಗ್ಗೆ ಜಿಲ್ಲೆಯಲ್ಲಿ ಅಸಮಾಧಾನ ಉಂಟಾಗಿರುವಾಗಲೆ ಒಕ್ಕಲ್ಲಿಗ ಮುಖಂಡರಿಗೂ ಸಹ ಇಲ್ಲ ಕಡೆಗಣಿಸಿರುವುದು ಜಿಲ್ಲಾಧ್ಯಕ್ಷರ ನಡೆಯ ಬಗ್ಗೆ ಪಕ್ಷದಲ್ಲಿ ಇನ್ನಷ್ಟು ವಿರೋಧಕ್ಕೆ ಕಾರಣವಾಗಿದೆ. ಈಗಾಗಲೇ ಬಿಜೆಪಿಯ ಹಿರಿಯ ಮುಖಂಡರು ಸಹ ಪದಾಧಿಕಾರಿಳ ಆಯ್ಕೆ ಹಾಗೂ ಜಿಲ್ಲಾಧ್ಯಕ್ಷರ ನೇಮಕದ ಬಗ್ಗೆ ಆರಂಭದಿಂದಲ್ಲೆ ತಮ್ಮ ಅಸಮಾಧಾನ ಹೊರಹಾಕುತ್ತಲೆ ಬಂದಿದ್ದಾರೆ.

ಈ ನಡುವೆ ಜಿಲ್ಲೆಯ ಅನೇಕ ಹಿರಿಯ ಮುಖಂಡರು ನೂತನವಾಗಿ ನೇಮಕವಾಗಿರುವ ಜಿಲ್ಲಾಧ್ಯಕ್ಷರನ್ನೆ ಬದಲಾವಣೆ ಮಾಡಬೇಕು ಎಂದು ಬಿಜೆಪಿಯ ಹೈಕಮಾಂಡ (BJP high command) ಗಮನಕ್ಕೂ ತಂದಿದ್ದಾರೆ ಎನ್ನುವ ಬಗ್ಗೆ ಬಿಜೆಪಿಯಲ್ಲೇ ಚರ್ಚೆಯಾಗುತ್ತಿದೆ, ಆದರೆ ಲೋಕಸಭಾ ಚುನಾವಣೆ (Lok Sabha Elections) ಹತ್ತಿರದಲ್ಲಿ ಪದಾಧಿಕಾರಿಗಳ ಆಯ್ಕೆ ಅಸಮಧಾನ ಜೋರಾಗುತ್ತಿದ್ದು, ಇದನ್ನ ಸರಿ ಪಡಿಸದೆ ಹೋದರೆ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಪೆಟ್ಟುಬಿಳುವ ಸಾಧ್ಯತೆ ಇರುವಂತೆ ಕಂಡು ಬರುತ್ತಿದೆ.