ಸುದ್ದಿಬಿಂದು ಬ್ಯೂರೋ
ಕಾರವಾರ : ಯುವಕನೋರ್ವ ಲಾಡ್ಜ್ ನಲ್ಲಿ ನೇಣು ಬಿಗಿದಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿ ನಡೆದಿದೆ.
ಕಾರವಾರ ನಗರದ ನವತಾರ ಲಾಡ್ಜ್ ನಲ್ಲಿ ಗಜಾನನ ವಿಷ್ಣು ನಾಯ್ಕ(30), ಎಂಬಾತನೆ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ.
ಲಾಡ್ಜ್ ಒಳಗೆ ಇದ್ದ ಯುವ ತಾಯಿ ಬಳಿ ಗಣಪತಿ ನೋಡಿಕೊಂಡು ಹೋಗಿ ಬರುವುದಾಗ ಹೇಳಿ ರೂಂ ನಿಂದ ಹೊರ ಹೋದ ಯುವಕ ರೂಂ ಹೊರಗಡೆ ಇದ್ದ ಕಿಟಕಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವತಾರ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ದೂರು ದಾಖಲಾಗಿದೆ.