suddibindu.in
ಭಟ್ಕಳ: ರೆಬಲ್ ಸ್ಟಾರ್ ದಿ.ಅಂಬರೀಶ್ ಹಾಗೂ ಸಿತಾರ ಅಭಿನಯದ ಬೇಟೆಗಾರ ಸಿನಿಮಾ(Betegara Cinema)ದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲಾಗಿದೆ ಎಂದು ಮುರುಡೇಶ್ವರದ ಸತೀಶ್ ನಾಯ್ಕ ಎಂಬುವವರು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ.
ಬೇಟೆಗಾರ ಸಿನಿಮಾದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಸಿತಾರ ಅವರು ಕಳೆದ ಒರೋಬ್ಬರಿ 29 ವರ್ಷದ ಹಿಂದೆ ನಟಿಸಿದ್ದರು. ಆ ಒಂದು ಸಿನಿಮಾದಲ್ಲಿ ರಾಷ್ಟ್ರಧ್ವವನ್ನ ಉಲ್ಟಾ ಮಾಡಿ ಇಡಲಾಗಿದೆ. ಬೇಟೆಗಾರ ಸಿನಿಮಾವನ್ನು ಸೆನ್ಸರ್ ಮಾಡಿದ ಸೆನ್ಸರ್ ಮಂಡಳಿ ವಿರುದ್ಧ ಸತೀಶ್ ನಾಯ್ಕ ದೂರು ನೀಡಿದ್ದಾರೆ.
ಇದನ್ನೂ ಓದಿ
- SSLC ಪರೀಕ್ಷೆ ಬರೆದರೂ ‘ಗೈರು :ಪ್ರಾಧಿಕಾರದ ಎಡವಟ್ಟು
- SSLC ಫಲಿತಾಂಶ: ಕುಮಟಾದ ದಿಶಾಂತ್ ನಾಯ್ಕ ರಾಜ್ಯಕ್ಕೆ ದ್ವಿತೀಯ ಸ್ಥಾನ
- ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ: 94.1% ಪಾಸ್, ದಕ್ಷಿಣ ಕನ್ನಡ ನಂ.1 ಉಡುಪಿ ದ್ವಿತೀಯ, ಉತ್ತರಕನ್ನಡಕ್ಕೆ 3ನೇ ಸ್ಥಾನ
1955 ರಲ್ಲಿ ತೆರೆಕಂಡ ಬೇಟೆಗಾರ ಸಿನಿಮಾ ದಲ್ಲಿ ಕಮಿಷಿನರ್ ಕಚೇರಿಯಲ್ಲಿ ನಟಿ ಸಿತಾರ ಸಂಭಾಷಣೆ ಇದ್ದು ಈ ಸಂಭಾಷಣೆ ನಡೆಯುವ ಕಚೇರಿಯ ಕಮಿಷಿನರ್ ಟೇಬಲ್ ಮೇಲೆ ಇಡಲಾಗಿದ್ದ ರಾಷ್ಟ್ರಧ್ವಜ ಉಲ್ಟಾ ಮಾಡಿ ಇಡಲಾಗಿದೆ. ಈ ದೃಶ್ಯ ಸೆನ್ಸರ್ ಆಗದೇ ಹಾಗೆಯೇ ಬೆಳ್ಳಿ ತೆರೆಯಲ್ಲಿ ಪ್ರದರ್ಶನಗೊಂಡಿದ್ದು 29 ವರ್ಷದ ನಂತರ ಖಾಸಗಿ ವಾಹಿನಿಯಲ್ಲಿ ಪ್ರಕಟವಾದ ಸಿನಿಮಾವನ್ನು ಸತೀಶ್ ನಾಯ್ಕ ರವರು ನೋಡುತ್ತಿರುವಾಗ ಸೂಕ್ಷ್ಮವಾಗಿ ಗಮನಿಸಿದ್ದು ಆಗ ರಾಷ್ಟ್ರಧ್ವಜಕ್ಕೆ ( Indian flag) ಅವಮಾನವಾದ ಘಟನೆ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ 1 ನಿಮಿಷ 13ಸೆಕೆಂಡ್ ತುಣುಕನ್ನು ತೆಗೆದುಹಾಕಬೇಕು. ಈಗಾಗಲೇ YouTube,ಅಂತರ್ಜಾಲ, ಟಿವಿ ಮಾಧ್ಯಮ ಪ್ರದರ್ಶನವಾಗುವ ಮೊದಲು ಈ ದೃಶ್ಯವನ್ನು ತೆಗೆದುಹಾಕಬೇಕು. ಸಿನಿಮಾ ತಂಡ ಹಾಗೂ ಸೆನ್ಸರ್ ಮಂಡಳಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ನೀಡಿದ ಮನವಿಯಲ್ಲಿ ಉಲ್ಲೇಖಿಸಲಾಗಿದೆ.





