ಸುದ್ದಿಬಿಂದು ಬ್ಯೂರೋ
ಹುಬ್ಬಳ್ಳಿ : ಮಗಳ ಜೊತೆಗೆ ಯುವಕನೋರ್ವ ಅನೈತಿಕ ಸಂಬಂಧ ಇಟ್ಟುಕೊಂಡಿರುವ ವಿಚಾರವನ್ನ ತಿಳಿದ ತಂದೆ ಯುವಕನನ್ನ ಕೊಲೆ‌ ಮಾಡಿ ತಾನು ನೇಣಿಗೆ ಶರಣಾಗಿರುವ ಘಟನೆ ಹುಬ್ಬಳ್ಳಿಯ ಅಪೂರ್ವನಗರದಲ್ಲಿ ಬೆಳಕಿಗೆ ಬಂದಿದೆ.

ಉತ್ತರ ಕನ್ನಡ ಜಿಲ್ಲೆಯ ಮುಂಡಗೊಡ ತಾಲೂಕಿನ ಮರಗಡಿ ನಿವಾಸಿಯಾದ ಯುವಕ ಮೌಲಾಲಿ, ಗಾರೆ ಕೆಲಸದ ನಿಮಿತ್ತವಾಗಿ ಹುಬ್ಬಳ್ಳಿಯಲ್ಲಿ ವಾಸವಾಗಿದ್ದ ದಿನಗಳೆದಂತೆ ಪರಸಪ್ಪನ ಮಗಳ ಜೊತೆಗೆ ಮೌಲಾಲಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಬಗ್ಗೆ ಪರಸಪ್ಪ ನಿಗೆ ಅನುಮಾನ ಬಂದಿದೆ ಎನ್ನಲಾಗಿದೆ.

ವಿವಾಹಿತ ಮಗಳ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಮೌಲಾಲಿ ವಿರುದ್ಧ ಕೆಂಡಾಮಂಡಲರಾದ ಪರಸಪ್ಪ ನಿರ್ಮಾಣ ಹಂತದ ಕಟ್ಟಡದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನ ಕೊಲೆ ಮಾಡಿದ್ದಾನೆ. ಯುವಕನ ಕೊಲೆ ಮಾಡಿದ್ದ ಆರೋಪಿ ಪರಸಪ್ಪ (50) ಇಂದು ನೇಣಿಗೆ ಶರಣಾಗಿದ್ದಾನೆ.

ಮೂಲತಃ ಗದಗ ಜಿಲ್ಲೆಯ ಲಕ್ಷೇಶ್ವರ ನಿವಾಸಿಯಾಗಿದ್ದ ಪರಸಪ್ಪ ಕುಟುಂಬದ ಜೊತೆಗೆ ನಿರ್ಮಾಣ ಹಂತದಲ್ಲಿ ಇದ್ದ ಕಟ್ಟಡದಲ್ಲಿ ವಾಚ್ ಮೆನ್ ಆಗಿ ಕೆಲಸ ಮಾಡ್ತಾ ವಾಸವಿದ್ದ.ನಿನ್ನೆ ಕೊಲೆ ಮಾಡಿದ ಪರಸಪ್ಪ ಇಂದು ಅಪೂರ್ವ ನಗರದ ಪ್ರಮುಖ ರಸ್ತೆಯಲ್ಲಿರುವ ಗಿಡದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.