ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಕರಾವಳಿಯಲ್ಲಿ ಬಿಜೆಪಿಗೆ ಗಟ್ಟಿ ನೆಲವಾಗಿದ್ದು, ಇಲ್ಲಿ ಜೆಡಿಎಸ್ ಗೆ ಯಾವುದೇ ನೆಲೆ ಇಲ್ಲ. ಮೇಲಾಗಿ ಕಾರವಾರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಪ್ರತಿನಿಧಿಸುವ ವ್ಯಕ್ತಿಗಳು ಕ್ಷೇತ್ರದಿಂದ ಜನರಿಂದ ದೂರವಾಗಿ ದಶಕಗಳೇ ಕಳೆದಿದೆ ಎಂದು ಮಾಜಿ ಶಾಸಕಿ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಇದ್ದರೂ, ಕಾರವಾರ ವಿಧಾನಸಭಾ ಕ್ಷೇತ್ರದ ವಿಷಯದಲ್ಲಿ ಜೆಡಿಎಸ್ಗೆ ಟಿಕೆಟ್ ಸಿಗಲಿದ ಅಸ್ನೋಟಿಕರ್ ಹೇಳಿಕೊಂಡು ಓಡಾಡುತ್ತಿರುವುದು ಕೇವಲ ಭ್ರಮೆ ಎಂದಿದ್ದಾರೆ. , “ರಾಜ್ಯ ಮಟ್ಟದಲ್ಲಿ ಮೈತ್ರಿ ಇದೆ. ಆದರೆ ಕಾರವಾರ ಕ್ಷೇತ್ರದಲ್ಲಿ ಜೆಡಿಎಸ್ಗೆ ಟಿಕೆಟ್ ಕೊಡುವ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟ ಪಡಿಸಿದ್ದಾರೆ.
ಅಸ್ನೋಟಿಕರ್ ಹೇಳಿಕೆಗಳನ್ನೇ ಪ್ರಶ್ನಿಸಿದ ಅವರು, “ಕುಮಾರಸ್ವಾಮಿ ಟಿಕೆಟ್ ಕೊಡುತ್ತಾರೆ ಅಂತಾ ಮಾಧ್ಯಮಗಳಲ್ಲಿ ಹೇಳಿಕೊಂಡು ತಿರುಗೋದು ರಾಜಕೀಯ ನಾಟಕ. ಹಿಂದಿನ ಚುನಾವಣೆಯಲ್ಲಿ ಜೆಡಿಎಸ್ನಲ್ಲಿದ್ದರೂ ಸ್ಪರ್ಧೆ ಮಾಡದೇ ಡಮ್ಮಿ ಅಭ್ಯರ್ಥಿ ಕಣಕ್ಕಿಳಿಸಿ ವಿರೋದ ಪಕ್ಷದ ಅಭ್ಯರ್ಥಿಗೆ ಸಹಾಯ ಮಾಡಿರುಬಹದು ಎಲ್ಲರಿಗೂ ಗೊತ್ತಿದೆ.
“ಜೆಡಿಎಸ್ಗೆ ಟಿಕೆಟ್ ಕೊಡುವ ಬಗ್ಗೆ ಯಾವ ಮಟ್ಟದಲ್ಲೂ ಚರ್ಚೆಯೇ ನಡೆದಿಲ್ಲ. ಅಸ್ನೋಟಿಕರ್ ಹೇಳ್ತಿರುವುದು ಸಂಪೂರ್ಣ ಸುಳ್ಳು. ಕಾರವಾರದಲ್ಲಿ ಜೆಡಿಎಸ್ಗೆ ಅಸ್ತಿತ್ವವೇ ಇಲ್ಲ ಅನ್ನೋದು ಎಲ್ಲರಿಗೂ ಗೊತ್ತು, ಅಸ್ನೋಟಿಕರ್ ಹಿಂದಿನ ಚುನಾವಣೆಯಲ್ಲೇ ಮಾಡಿದಂತೆ ಈ ಸಲವೂ ವಿರೋಧಪಕ್ಷದ ಪ್ರಚಾರವನ್ನೇ ಮಾಡಿಕೊಂಡು ಇರೋದು ಸೂಕ್ತ” ಎಂದಿದ್ದಾರೆ..
ಈ ವಿಚಾರವಾಗಿ ಹೆಚ್ಚಿಗೆ ಮಾತ್ನಾಡೋದಕ್ಕೆ ಮುಂದಾಗದ ರೂಪಾಲಿ ನಾಯ್ಕ ಅವರು ಪತ್ರಿಕಾಗೋಷ್ಠಿ ಮಹಿಳಾ ಮೀಸಲಾತಿ ವಿಷಯಕ್ಕೆ ಸಂಬಂಧಿಸಿರುವುದರಿಂದ ರಾಜಕೀಯ ವಿಚಾರದ ಚರ್ಚೆಯನ್ನ ನಿರಾಕರಿಸಿದರು.

