ಗೋಕರ್ಣ: ಗೋದಾವರಿ ಸಮೂಹ ಸಂಸ್ಥೆಗಳ ಅಂಗ ಸಂಸ್ಥೆಯಾದ ಗೋದಾವರಿ ಸೌಹಾರ್ದ ಸಹಕಾರಿ ತನ್ನ ಕ್ಷೇತ್ರ ವ್ಯಾಪ್ತಿಯನ್ನು ವಿಭಾಗದಿಂದ ರಾಜ್ಯಮಟ್ಟಕ್ಕೆ ವಿಸ್ತರಿಸಿದೆ.
ಸಹಕಾರಿ ರಂಗದಲ್ಲಿ ನವನವೀನ ಮಾದರಿಗಳು, ಗ್ರಾಹಕರಿಗೆ ಹಲವು ಸೌಲಭ್ಯಗಳು ಸೇರಿದಂತೆ ಆರ್ಥಿಕ ಕ್ಷೇತ್ರದಲ್ಲಿ ಹೊಸದೊಂದು ಹೆಜ್ಜೆಯನಿಟ್ಟು ಈ ಸೌಹಾರ್ದ ಸಹಕಾರಿ ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮಕ್ಕೆ ಅನುಗುಣವಾಗಿದ್ದು ಇವೆಲ್ಲವುಗಳನ್ನು ಪರಿಶೀಲಿಸಿದ ಸಹಕಾರಿಯ ಅಧಿಕಾರಿಗಳು ರಾಜ್ಯಕ್ಕೆ ಇದರ ವ್ಯಾಪ್ತಿ ವಿಸ್ತರಿಸುವಂತೆ ಪರವಾನಿಗೆಯನ್ನು ನೀಡಿದ್ದಾರೆ.
ಇದರಿಂದ ಇನ್ನು ಮುಂದೆ ಗೋದಾವರಿ ಸೌಹಾರ್ದ ಸಹಕಾರಿ ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯನ್ನು ಹೊರತುಪಡಿಸಿ ಉಳಿದ ಯಾವುದೇ ಜಿಲ್ಲೆ ತಾಲೂಕುಗಳಲ್ಲಿ ತನ್ನ ಶಾಖೆಯನ್ನು ತೆರೆದು ವ್ಯವಹರಿಸಬಹುದಾಗಿದೆ. ಗರಿಷ್ಠ 10 ಕೋಟಿಯವರೆಗೆ ಸಾಲವನ್ನು ನೀಡಲುಅಧಿಕೃತ ಅನುಮೋದನೆ ನೀಡಿದ್ದು ಕರ್ನಾಟಕ ರಾಜ್ಯದಲ್ಲಿ ಠೇವಣಿ ಸ್ವೀಕರಿಸಲು ಸಹ ಅವಕಾಶ ದೊರೆತಂತಾಗಿದೆ.

ಗೋದಾವರಿ ಸಮೂಹ ಸಂಸ್ಥೆಗಳ ಅಂಗ ಸಂಸ್ಥೆಯಾದ ಗೋದಾವರಿ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಲಿ..ಗೋಕರ್ಣದಲ್ಲಿ ಪ್ರಧಾನ ಕಚೇರಿಯನ್ನೊ ಳಗೊಂಡು ಜಿಲ್ಲೆಯ ಹಲವು ತಾಲೂಕುಗಳಲ್ಲಿ ತನ್ನ ಶಾಖೆಯನ್ನು ತೆರೆಯುವುದರ ಮೂಲಕ ಸಹಕಾರಿ ಕ್ಷೇತ್ರಗಳಲ್ಲಿ ಹೊಸ ಭಾಷ್ಯ ಬರೆಯುತ್ತಿದೆ. ಈ ಸೌಹಾರ್ದ ಸಹಕಾರಿಯ ಉಪವಿಧಿಗಳ ತಿದ್ದುಪಡಿ ಪ್ರಸ್ತಾವನೆಯನ್ನು ವಾರ್ಷಿಕ ಸಾಮಾನ್ಯ ಸಭೆಯ ಒಪ್ಪಿಗೆ ಪಡೆದು ಉಲ್ಲೇಖಿತ ಪತ್ರದ ಮೂಲಕ ಸಹಕಾರಿಯ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳು ಸಹಕಾರ ಸಂಘಗಳ ನಿಬಂಧಕರು ಸಹಕಾರ ಇಲಾಖೆಗಳ ನಿಬಂಧಕರ ಕಚೇರಿ ಬೆಂಗಳೂರು ಕರ್ನಾಟಕ ಸರಕಾರ, ಸಹಕಾರ ಇಲಾಖೆ ರವರಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು.
ಈ ಮೇಲ್ಕಂಡ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ ದಿನಾಂಕ: 09-09-2024ರಂದು ಹೋಟೆಲ್ ದಿ ಗೋದಾವರಿ ಸಭಾಭವನ ಗೋಕರ್ಣದಲ್ಲಿ ನಡೆದಿರುವ ಸಹಕಾರಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಉಪನಿಯಮಗಳ ತಿದ್ದುಪಡಿಗೆ ಅನುಮೋದನೆ ದೊರೆತಿದ್ದು, ಅಗತ್ಯ ದಾಖಲೆಗಳನ್ನು ಹಾಗೂ ನಿಗಧಿತ ಉಪನಿಯಮ ತಿದ್ದುಪಡಿ ಶುಲ್ಕವನ್ನು ಸರಕಾರದ ಖಜಾನೆಗೆ ಪಾವತಿಸಿ ನಿಗಧಿತ ಕಾಲಾವಧಿಯೊಳಗೆ ಪ್ರಸ್ತಾವನೆಯನ್ನು ಈ ಸಹಕಾರಿಯವರು ಸಲ್ಲಿಸಿ ರುತ್ತಾರೆ. ದಿನಾಂಕ : 27-05-202500 ಆದೇಶ ಸಂಖ್ಯೆ: ಆರ್ ಸಿ ಎಸ್.ಸೌಹಾರ್ದ.ಉ.ಪ.ನಿ 119/2024-25 ಪ್ರಸ್ತಾವನೆಯಲ್ಲಿ ಉಲ್ಲೇಖಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ 1997ರ ಪ್ರಕರಣ I(4) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ.
ಟಿ.ಎಚ್.ಎಮ್. ಕುಮಾರ (ಐ.ಎ.ಎಸ್) ಭಾರತೀಯ ಆಡಳಿತ ಸೇವೆ ಸಹಕಾರ ಸಂಘಗಳ ನಿಬಂಧಕರು(ಕಾನೂನು ಕೋಶ) ಕರ್ನಾಟಕ ರಾಜ್ಯ ಬೆಂಗಳೂರು ರವರು ಗೋದಾವರಿ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಲಿ.ಪ್ರಧಾನ ಕಚೇರಿ ಗೋಕರ್ಣ ಉತ್ತರ ಕನ್ನಡ ಜಿಲ್ಲೆ. ಈ ಸಹಕಾರಿಯು ಸಲ್ಲಿಸಿದ ಸಮಗ್ರ ಉಪವಿಧಿಗಳು ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮಕ್ಕೆ ಅನುಗುಣವಾಗಿದ್ದು ಇವುಗಳನ್ನು ಅನುಮೋದಿಸಿ ನೋಂದಾಯಿಸಿರುತ್ತಾರೆ.
ಗೋದಾವರಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರು ಮತ್ತು ಗೋದಾವರಿ ಸೌಹಾರ್ದ ಸಹಕಾರಿಯ ಅಧ್ಯಕ್ಷರು ಆಗಿರುವ ರಾಘವೇಂದ್ರ ಡಿ ನಾಯಕ ದೇವರಭಾವಿ ಆರ್ಥಿಕ ಕ್ಷೇತ್ರದ ನಿರಂತರ ಅನುಭವ ಮತ್ತು ಸಮೂಹ ಸಂಸ್ಥೆಗಳನ್ನು ಅತ್ಯುತ್ತಮವಾಗಿ ನಡೆಸಿಕೊಂಡು ಬಂದಿರುವುದು,ಗ್ರಾಹಕರೊಂದಿಗೆ ಹೊಂದಿರುವ ಅತ್ಯುತ್ತಮ ಬಾಂಧವ್ಯ, ಸ್ವಾವಲಂಬಿ ಉದ್ಯೋಗಕ್ಕೆ ಸಹಕಾರ, ಶಿಸ್ತು ಸಮಯಪ್ರಜ್ಞೆ, ಅಚ್ಚು ಕಟ್ಟುತನ ಇವೆಲ್ಲವುಗಳನ್ನು ತಮ್ಮ ಸೌಹಾರ್ದ ಸಹಕಾರಿಯಲ್ಲಿ ಅಳವಡಿಸಿದ್ದಾರೆ.
ಸಹಕಾರಿ ಕ್ಷೇತ್ರದಲ್ಲಿ ಮಾಡಿದ ಅತ್ಯುತ್ತಮ ಸಾಧನೆಗೆ ಇವರಿಗೆ ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ಕೊಡ ಮಾಡುವ ರಾಜ್ಯ ಶ್ರೇಷ್ಠ ಸಹಕಾರಿ ಪ್ರಶಸ್ತಿಯು ಭಾಜನವಾಗಿದೆ.ಇನ್ನೂ ಪರಿಸರ ಕಾಳಜಿ ಸಮಾಜದ ವಿದಾಯಕ ಕಾರ್ಯಗಳು ರಾಷ್ಟ್ರೀಯ ಹಬ್ಬಗಳು, ಶೈಕ್ಷಣಿಕ ಕಾಳಜಿ ಕ್ರೀಡಾ ಪ್ರೋತ್ಸಾಹ,ಆರ್ಥಿಕ ಸಂಕಷ್ಟಕ್ಕೆ ಧ್ವನಿಯಾಗುವುದು ಸೇರಿದಂತೆ ಇವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಪ್ರತಿಷ್ಠಿತ ಸಂಸ್ಥೆಯಾಗಿರುವ ವಿಶ್ವವಾಣಿ ಸಂಸ್ಥೆ ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಗ್ಲೋಬಲ್ ಅಚಿವರ್ಸ್ ಅವಾರ್ಡ್ ಗೌರವವನ್ನು ನೀಡಿ ಪುರಸ್ಕರಿಸಿದೆ.ಇದರಿಂದ ಗೋದಾವರಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ರಾಘವೇಂದ್ರ ಡಿ. ನಾಯಕರವರಿಗೆ ಜಾಗತಿಕ ಮಟ್ಟದ ಗೌರವ ದೊರೆತಂತಾಗಿದೆ.ಮೊದಲು ಗೋಕರ್ಣದಲ್ಲಿ ತನ್ನ ಪ್ರಧಾನ ಕಚೇರಿಯನ್ನು ಪ್ರಾರಂಭಿಸಿದ ಈ ಸಂಸ್ಥೆ ದಿನದಿಂದ ದಿನಕ್ಕೆ ದಾಪುಗಾಲಿಟ್ಟು ತಾಲೂಕ ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ, ಜಿಲ್ಲಾ ಮಟ್ಟದಿಂದ ವಿಭಾಗಿಯ ಮಟ್ಟಕ್ಕೆ ವಿಸ್ತರಣೆಯಾಗಿ ಈಗ ರಾಜ್ಯ ಮಟ್ಟಕ್ಕೆ ತನ್ನ ಕಂಪನ್ನು ಪಸರಿಸುತ್ತಿರುವುದು ಇದರ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಕರ್ತವ್ಯ ಬದ್ಧತೆ, ಮತ್ತು ಇವರು ಗ್ರಾಹಕರೊಂದಿಗೆ ಹೊಂದಿರುವ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ.
ತಮ್ಮ ಸಹಕಾರಿ ಸಂಸ್ಥೆಯ ವ್ಯವಹಾರ ವಹಿವಾಟು. ಮತ್ತು ಸಹಕಾರಿ ಇಲಾಖೆಗೆ ಸಂಬಂಧಿಸಿದಂತೆ ನಿಯಮಗಳನ್ನು ಪಾಲಿಸಿ ಸಹಕಾರಿ ತತ್ವದಡಿಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿರುವ ಗೋದಾವರಿ ಸೌಹಾರ್ದ ಸಹಕಾರಿ ಸಂಸ್ಥೆಗೆ ರಾಜ್ಯಮಟ್ಟದಲ್ಲಿಯೂ ತನ್ನ ವ್ಯವಹಾರ.ವಹಿವಾಟನ್ನು ವಿಸ್ತರಿಸಲು ಶಾಖೆಗಳನ್ನು ತೆರೆಯಲು ಅವಕಾಶ ಕಲ್ಪಿಸಿಕೊಟ್ಟ ರಾಜ್ಯ ಸಹಕಾರ ಇಲಾಖೆಗೆ ಗೋದಾವರಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ರಾಘವೇಂದ್ರ ಡಿ ನಾಯಕ, ಹಾಗೂ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳು, ಕೃತಜ್ಞತೆ ಅರ್ಪಿಸಿದ್ದಾರೆ.
ಸಹಕಾರಿಯ ದುಡಿಯುವ ಬಂಡವಾಳ ಹಾಗೂ ವಾರ್ಷಿಕ ವಹಿವಾಟು 620 ಕೋಟಿಗೂ ಮೇಲ್ಪಟ್ಟಿದ್ದು ಸಮಗ್ರವಾಗಿ ಪರಿಶೀಲಿಸಲಾಗಿ ಸಹಕಾರಿಯ ಆರ್ಥಿಕ ಸ್ಥಿತಿ,ಕಾಯ್ದಿಟ್ಟ ನಿಧಿಗಳು ಲೆಕ್ಕಪರಿಶೋಧನೆಯಲ್ಲಿ ಕಳೆದ 5 ವರ್ಷಗಳಿಂದ ಯಾವುದೇ ಉಲ್ಲಂಘನೆಗಳು ಇಲ್ಲದಿರುವುದು ಸಮಗ್ರವಾಗಿ ಸಹಕಾರಿಯ ಕಾನೂನು ಪರಿಪಾಲನೆ ಶಿಸ್ತುಬದ್ಧವಾಗಿ ಮಾಡುತ್ತಾ ಬಂದಿದ್ದು, ಸಂಸ್ಥೆಯು ಆರ್ಥಿಕವಾಗಿ ಅತ್ಯಂತ ಭದ್ರತೆಯಿಂದ ಕೂಡಿದ್ದು ವರ್ಷದಿಂದ ವರ್ಷಕ್ಕೆ ಪ್ರಗತಿಯನ್ನು ಸಾಧಿಸುತ್ತಿದ್ದು ಈ ಮೇಲ್ಕಂಡ ಎಲ್ಲಾ ಅಂಶಗಳನ್ನು ಮನಗಂಡು ಸಹಕಾರಿಗೆ ರಾಜ್ಯ ಮಟ್ಟದ ಸಹಕಾರಿಯ ಆದೇಶವನ್ನು ಮಾಡಿದೆ.ರಾಜ್ಯದ ಕೆಲವೇ ಕೆಲವು ಸಹಕಾರಿಗಳು ರಾಜ್ಯ ಮಟ್ಟದ ಪರವಾನಿಗೆಯನ್ನು ಪಡೆದುಕೊಂಡಿದ್ದು ಈಗ ಗೋದಾವರಿ ಸೌಹಾರ್ದ ಸಹಕಾರಿ ರಾಜ್ಯಕ್ಕೆ ಪಾದರ್ಪಣೆ ಮಾಡಿದೆ.
ಎಲ್ಲರ ಸಹಕಾರವೇ ಸಹಕಾರಿಯ ಪ್ರಗತಿಗೆ ಸ್ಫೂರ್ತಿ
ನಮ್ಮ ಗೋದಾವರಿ ಕ್ರೆಡಿಟ್ ಸೌಹಾರ್ದ ಸಹಕಾರಿ ಗೋಕರ್ಣದಲ್ಲಿ ಪ್ರಥಮವಾಗಿ ಪ್ರಧಾನ ಕಚೇರಿಯನ್ನು ಆರಂಭಿಸಿ ಈಗ 620 ಕೋಟಿಗಿಂತಲೂ ಅಧಿಕ ವಾರ್ಷಿಕ ವಹಿವಾಟನ್ನು ಹೊಂದಿರುವುದು ನಮ್ಮ ಸಹಕಾರಿಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಕರ್ತವ್ಯ ಬದ್ಧತೆ ಹಾಗೂ ಗ್ರಾಹಕರು ನಮ್ಮ ಸಹಕಾರಿಯ ಮೇಲೆ ಇಟ್ಟಿರುವ ನಂಬಿಕೆ ವಿಶ್ವಾಸಕ್ಕೆ ಸಾಕ್ಷಿಯಾಗಿದೆ.

ಮೊದಲು ತಾಲೂಕ ಮಟ್ಟ ನಂತರ ಜಿಲ್ಲಾ ಮಟ್ಟ ಹಾಗೂ ವಿಭಾಗಿಯ ಮಟ್ಟಕ್ಕೆ ಪರವಾನಿಗೆ ಪಡೆದ ನಮ್ಮ ಸಹಕಾರಿ ಈಗ ರಾಜ್ಯ ಮಟ್ಟದಲ್ಲಿ ನಮ್ಮ ಸಹಕಾರಿಯನ್ನು ವಿಸ್ತರಿಸಲು ಅನುಮೋದಿಸಿರುವುದು ನಮ್ಮ ಸಹಕಾರಿಯ ಕರ್ತವ್ಯ ಭದ್ಧತೆ ಮತ್ತು ಶ್ರೇಷ್ಠತೆಗೆ ಸಾಕ್ಷಿಯಾಗಿದೆ. ಪಾರದರ್ಶಕವಾದ ವ್ಯವಹಾರ, ಠೇವಣಿ ಸ್ವೀಕಾರ, ಸಾಲ ನೀಡುವುದು, ಸಾಲ ಮರುಪಾವತಿ, ಮತ್ತು ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಮ್ಮ ಸಹಕಾರಿ ಹಮ್ಮಿಕೊಳ್ಳುತ್ತಿದ್ದು ಸಹಕಾರಿಯ ನಡೆ ಮತ್ತು ವ್ಯವಹಾರ ವಹಿವಾಟನ್ನು ನೋಡಿ ನಮಗೆ ಈ ಅವಕಾಶವನ್ನು ಸಹಕಾರ ಇಲಾಖೆ ನೀಡಿದೆ. ಈ ಹಿಂದಿನ ಸಹಕಾರವೇ ನಮ್ಮ ಸಹಕಾರಿಯ ಪ್ರಗತಿಗೆ ಸ್ಫೂರ್ತಿ.
ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಗೋದಾವರಿ ಸೌಹಾರ್ದ ಸಹಕಾರಿ. ಪ್ರಧಾನ ಕಚೇರಿ.
ಇದನ್ನೂ ಓದಿ