ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ನಗರದ ಮಾಲಾದೇವಿ ಮೈದಾನ ಸಮೀಪದ ಮಹಾಲಕ್ಷ್ಮಿ ಎಲೆಕ್ಟ್ರಾನಿಕ್ಸ್ ಮಳಿಗೆಯ ಬೃಹತ್ ಟಿವಿಯಲ್ಲಿ ಮಂಗಳವಾರ ನಡೆದ ಐಪಿಎಲ್ ಫೈನಲ್ ಪಂದ್ಯವನ್ನು ಪ್ರದರ್ಶಿಸಿದ್ದು, ಈ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಪ್ರೇಕ್ಷಕರು ನಿಂತು ಪಂದ್ಯಾಟವನ್ನು ಕಣ್ತುಂಬಿಕೊಂಡರು.
ಆರ್ಸಿಬಿ ಮತ್ತು ಪಂಜಾಬ್ ತಂಡಗಳ ನಡುವಿನ ಈ ರೋಚಕ ಸೆಣಸಾಟವನ್ನು ರಸ್ತೆಯಲ್ಲೇ ನಿಂತು ಕಣ್ತುಂಬಿಕೊಂಡ ಕ್ರಿಕೆಟ್ ಅಭಿಮಾನಿಗಳು ಟಿವಿ ಸ್ಕ್ರೀನ್ ಮುಂದೆ ಜಮಾಯಿಸಿದ್ದರು. ತೀವ್ರ ಸೆಣಸಾಟವನ್ನು ಪ್ರದರ್ಶಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್ ತಲುಪಿದ್ದು, ಅದರ ಅಭಿಮಾನಿ ಬಳಗ ಐಪಿಎಲ್ ಕಪ್ ಗೆಲ್ಲುವ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದರು. ಈ ನಿಟ್ಟಿನಲ್ಲಿ ಫೈನಲ್ ಪಂದ್ಯಾಟವನ್ನು ಪ್ರದರ್ಶಿಸಿ ಎಲೆಕ್ಟ್ರಾನಿಕ್ಸ್ ಮಳಿಗೆ ಮಾಲೀಕರು ಸಹ ಕ್ರೀಡಾ ಪ್ರೇಮವನ್ನು ಮೆರೆದಿದ್ದಾರೆ.
ಈ ಸಂದರ್ಭದಲ್ಲಿ, ಆ ಮಾರ್ಗದಲ್ಲಿ ಸಾಗುತ್ತಿದ್ದ ವಾಹನಗಳ ಸವಾರರು ಕೂಡ ಕೊಂಚ ನಿಂತು ಪಂದ್ಯದ ಸ್ಕೋರ್ನ್ನು ನೋಡಿ ಮುಂದೆ ಹೋಗುವ ದೃಶ್ಯಗಳು ಕಂಡು ಬಂದವು. ಪಂದ್ಯದ ಉತ್ಸಾಹ ಮತ್ತು ಕುತೂಹಲದೊಂದಿಗೆ ಸ್ಥಳೀಯರು ರಸ್ತೆ ಬದಿ ನಿಂತು ಟಿವಿ ನೋಡುವ ದೃಶ್ಯಗಳು ಅಂತಿಮ ಪಂದ್ಯದ ಮಹತ್ವವನ್ನು ಎತ್ತಿ ತೋರಿಸುವಂತಿತ್ತು.
ಇದನ್ನೂ ಓದಿ
- ಜೂನ್ 3ಕ್ಕೆ ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣವಚನ; ಬೆಳಿಗ್ಗೆ 11ಕ್ಕೆ ಅಧಿಕಾರ ಸ್ವೀಕಾರ
- “ಮುಂದಿನ ಸಿಎಂ ಡಿಕೆ ಶಿವಕುಮಾರ್” — ಸಿಎಲ್ಪಿ ಸಭೆಯಲ್ಲಿ ಸಿದ್ದರಾಮಯ್ಯ ಘೋಷಣೆ
- ಅಂಕೋಲಾ ಬಳಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 20 ಪ್ರಯಾಣಿಕರಿಗೆ ಗಾಯ
- ಅನಾಥ ಮಕ್ಕಳಿಗೆ ಆಸರೆಯಾದ ಸಚಿವ ಮಂಕಾಳ ವೈದ್ಯ
- JDS/ಜೆಡಿಎಸ್ ಯುವ ನಾಯಕಿಯಾಗಿ ಜಾಹ್ನವಿ ಎಂಟ್ರಿ:’ನೀವು ಶಾಸಕಿಯಾಗಬೇಕು’ ಎಂದ ನೆಟ್ಟಿಗರು

