ಸುದ್ದಿಬಿಂದು ಬ್ಯೂರೋ ವರದಿ

ಧಾರವಾಡ :  ಪತ್ನಿಯನ್ನ ಹತ್ಯೆ ಮಾಡಿ,ಮಗುವಿಗೆ ಚಾಕು ಇರಿದ  ಪ್ರಕರಣ ಇಡೀ ನಗರವನ್ನೇ ಬೆಚ್ಚಿಬೀಳಿಸುಂತೆ ಮಾಡಿದೆ. ಒಂದು ಕೊಠಡಿಯಲ್ಲಿ ಪತಿಯ ಮೃತದೇಹ, ಮತ್ತೊಂದು ಕೊಠಡಿಯಲ್ಲಿ ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದ ಎಂಟು ವರ್ಷದ ಮಗುವಿನ ನರಳಾಟ ಕಂಡ ಪೊಲೀಸರನ್ನೂ ಬೆಚ್ಚಿಬೀಳಿಸುವಂತೆ ಮಾಡಿದೆ.

ಪತ್ನಿಯೇ ತನ್ನ ಪತಿ ಕಿರಣ್ ಹೊನ್ನಣ್ಣವರ್ ಅವರ ಮೇಲೆ ಮನಬಂದಂತೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಹ*ತ್ಯೆ ಮಾಡಿದ್ದಾಳೆ. ಇದೇ ವೇಳೆ ಪುತ್ರ ನೇಹಿತ್ ಮೇಲೂ ಚಾಕುವಿನಿಂದ ದಾಳಿ ನಡೆದಿದ್ದು, ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.  ಹೆತ್ತಮನಿಂದಲ್ಲೆ ಚಾಕು ಇರಿತಕ್ಕೆ ಒಳಗಾಗಿ ಮಗು ನರಳಾಡುತ್ತಿದ್ದರು ಪಾಪಿ ತಾಯಿಗೆ ಮಾತ್ರ ಹೆತ್ತ ಮಗುವಿನ ಬಗ್ಗೆ ಸ್ವಲ್ಪವೂ ಕರುಣೆ ಅನ್ನುವುದು ಬಂದಿರಲಿಲ್ಲ. ತಾನೆ ಮಾಡಿದ ಕೃತ್ಯದಿಂದ ಗಾಯಗೊಂಡ ಮಗು ಉಸಿರಾಡುತ್ತಾ ನರಳುತ್ತಿದ್ದರೂ, ಅದೇ ಕೊಠಡಿಯಲ್ಲಿ ಆರಾಮಾಗಿ ಮೊಬೈಲ್ ಹಿಡಿದು ಕುಳಿತಿದ್ದಾಳೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹುಬ್ಬಳ್ಳಿ–ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಮಗು ಉಸಿರಾಡುತ್ತಿರುವುದನ್ನು ಗಮನಿಸಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ನೇಹಿತ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಕೂಡ ಗಂಭೀರವಾಗಿದೆ.

ಪ್ರಕರಣ ಸಂಬಂಧ ಮೃತರ ಪತ್ನಿ ಪ್ರಿಯಾಂಕಾ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ  ಘಟನೆ ಧಾರವಾಡ ಜಿಲ್ಲೆಯನ್ನಷ್ಟೆ ಅಲ್ಲ ರಾಜ್ಯದ ಜನರೇ ಬೆಚ್ಚಿಬೀಳುವಂತೆ ಮಾಡಿದೆ. ಮೃತ ವೈದ್ಯರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ತನಿಖೆ ಪೂರ್ಣಗೊಂಡ ಬಳಿಕವೇ ಘಟನೆಯ ನಿಖರ ಸತ್ಯಾಂಶ ಹೊರಬೀಳಲಿದೆ.