ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ತಾಲೂಕಿನ ಬರ್ಗಿಯ ಸರ್ಕಾರಿ ಪ್ರೌಢಶಾಲೆ, ವಿದ್ಯಾರ್ಥಿ ಕು ಆಕಾಶ್ ಉದಯ ಹರಿಕಾಂತ 2025 ನೇ ಸಾಲಿನ SSLC ಪರೀಕ್ಷೆಯಲ್ಲಿ 625ಕ್ಕೆ 619 ಅಂಕ ಪಡೆದು ರಾಜ್ಯಕ್ಕೆ 7ನೇ ರ್ಯಾಂಕ್ ಪಡೆದಿದ್ದು, ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಇನ್ನೂ ಅನೇಕ ವಿದ್ಯಾರ್ಥಿಗಳು ಸಾಧನೆ ಮಾಡಿದ್ದು ಎಲ್ಲಾ ವಿದ್ಯಾರ್ಥಿಗಳಿಗೂ ಬರ್ಗಿ ಸೇವಾ ಸಹಕಾರಿ ಸಂಘದ ಸದಸ್ಯರು ಹಾಗೂ ಗ್ರಾ.ಪಂ ಮಾಜಿ ಸದಸ್ಯರಾಗಿರುವ ನಾಗರಾಜ ಕೆ ನಾಯ್ಕ ಬರ್ಗಿ ಎಲ್ಲಾ ವಿದ್ಯಾರ್ಥಿಗಳನ್ನ ಅಂಭಿನಂದಿಸಿದ್ದಾರೆ.
ಆಕಾಶ್ ಉದಯ್ ಹರಿಕಾಂತ ಕುಮಟಾ ತಾಲೂಕಿನ ಬರ್ಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಕಿಮಾನಿ ಗ್ರಾಮದ ನಿವಾಸಿಯಾಗಿರುವ,ಉದಯ ಹರಿಕಾಂತ ಹಾಗೂ ಹೇಮಾ ಹರಿಕಾಂತ ಇವರ ಪುತ್ರನಾಗಿದ್ದಿರುವ ಆಕಾಶ್ ಬಾಲ್ಯದಲ್ಲೇ ತಂದೆಯನ್ನ ಕಳೆದುಕೊಂಡು ಕೊಂಡು ಬಡತನದಲ್ಲೆ ಶಿಕ್ಷಣ ಕಲಿತ ಆಕಾಶ್ ತಾಯಿ ಹಾಗೂ ಸಂಬಂಧಿಕರ ಆಶ್ರಯಲ್ಲಿ ಶಿಕ್ಷಣ ಮುಂದುವರಿಸಿ ಇದೀಗ ಈ ಭಾರೀಯ ಎಸ್ ಎಸ್ ಎಲ್ಸಿ ಪರೀಕ್ಷೇಯಲ್ಲಿ ರಾಜ್ಯಕ್ಕೆ 7ನೇ ರ್ಯಾಂಕ್ ಪಡೆದುಕೊಳ್ಳುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಸರಕಾರಿ ಶಾಲೆಯಲ್ಲಿ ಈತ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.
ವಿದ್ಯಾರ್ಥಿಯ ಸಾಧನೆಗೆ ತಾಯಿ ಹೇಮಾ ಹರಿಕಾಂತ ಹಾಗೂ ಆತನ ಸಂಬಂಧಿಕರು ಸಂತಸ ವ್ಯಕ್ತಪಡಿಸಿದ್ದು ಅದೇ ರೀತಿ ಸಾಧನೆ ಮಾಡಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಬರ್ಗಿಯ ಸೇವಾ ಸಹಕಾರಿ ಸಂಘದ ಸದಸ್ಯರಾಗಿರುವ ನಾಗರಾಜ ನಾಯ್ಕ ಸಹ ಅಭಿನಂದಿಸಿದ್ದಾರೆ.
ಇದನ್ನೂ ಓದಿ