ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ತಾಲೂಕಿನ ಬರ್ಗಿಯ ಸರ್ಕಾರಿ ಪ್ರೌಢಶಾಲೆ, ವಿದ್ಯಾರ್ಥಿ ಕು ಆಕಾಶ್ ಉದಯ ಹರಿಕಾಂತ 2025 ನೇ ಸಾಲಿನ SSLC ಪರೀಕ್ಷೆಯಲ್ಲಿ 625ಕ್ಕೆ 619 ಅಂಕ ಪಡೆದು ರಾಜ್ಯಕ್ಕೆ 7ನೇ ರ್ಯಾಂಕ್ ಪಡೆದಿದ್ದು, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ..
ಆಕಾಶ್ ಉದಯ್ ಹರಿಕಾಂತ ಕುಮಟಾ ತಾಲೂಕಿನ ಬರ್ಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಕಿಮಾನಿ ಗ್ರಾಮದ ನಿವಾಸಿಯಾಗಿದ್ದು,ಉದಯ ಹರಿಕಾಂತ ಹಾಗೂ ಹೇಮಾ ಹರಿಕಾಂತ ಇವರ ಪುತ್ರನಾಗಿದ್ದಿರುವ ಆಕಾಶ್ ಬಾಲ್ಯದಲ್ಲೇ ತಂದೆಯನ್ನ ಕಳೆದುಕೊಂಡು ಕೊಂಡು ಬಡತನದಲ್ಲೆ ಶಿಕ್ಷಣ ಕಲಿತ ಆಕಾಶ್ ತಾಯಿ ಹಾಗೂ ಸಂಬಂಧಿಕರ ಆಶ್ರಯಲ್ಲಿ ಶಿಕ್ಷಣ ಮುಂದುವರಿಸಿ ಇದೀಗ ಈ ಭಾರೀಯ ಎಸ್ ಎಸ್ ಎಲ್ಸಿ ಪರೀಕ್ಷೇಯಲ್ಲಿ ರಾಜ್ಯಕ್ಕೆ 7ನೇ ರ್ಯಾಂಕ್ ಪಡೆದುಕೊಳ್ಳುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಸರಕಾರಿ ಶಾಲೆಯಲ್ಲಿ ಈತ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.
ವಿದ್ಯಾರ್ಥಿಯ ಸಾಧನೆಗೆ ತಾಯಿ ಹೇಮಾ ಹರಿಕಾಂತ ಹಾಗೂ ಆತನ ಸಂಬಂಧಿಕರಿ ಸಂತಸ ವ್ಯಕ್ತಪಡಿಸಿದ್ದು,ಸ್ಥಳೀಯ ಮುಖಂಡರಾಗಿರುವ ಶಿವರಾಮ ಹರಿಕಾಂತ ಅವರು ವಿದ್ಯಾರ್ಥಿಯ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದು, ವಿದ್ಯಾರ್ಥಿ ಆಕಾಶ್ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ ಎಂದು ಹಾರೈಸಿದ್ದಾರೆ.
ಇನ್ನೂ ಅದೆ ರೀತಿ ಇದೆ 625ಕ್ಕೆ 611 ಅಂಕ ಪಡೆದ ಬರ್ಗಿ ಸರಕಾರಿ ಪ್ರೌಢ ಶಾಲೆಯ ನಾಗಶ್ರೀ ನಾಗೇಶ್ ಹರಿಕಂತ್ರ,ಹಾಗೂ 625ಕ್ಕೆ 610 ಅಂಕಗಳನ್ನು ಪಡೆದ ನಿತೇಶ್ ಸದಾನಂದ ಪಟಗಾರ ತೃತೀಯ ಸ್ಥಾನ ಪಡೆದ ಎನ್ ನಾಗಲಕ್ಷ್ಮಿ, ಸಂಜನಾ ಮಂಜುನಾಥ ಹರಿಕಂತ್ರ ಐದನೆಯ ಸ್ಥಾನ ಪಡೆದ ನವ್ಯ ಸುರೇಶ ಗಾವಡಿ ಆರನೇ ಸ್ಥಾನ ಪಡೆದ ಸಿಂಚನ ನಾಗೇಶ ಗಾವಡಿ, 7ನೇ ಸ್ಥಾನ ಪಡೆದ ಅಶ್ವಿನಿ ವಿನಾಯಕ ಹರಿಕಂತ್ರ, 8ನೇ ಸ್ಥಾನದಲ್ಲಿ, 501 ಅಂಕಗಳನ್ನು ಪಡೆದ ನವ್ಯ ಬಾಬಾನಂದ ಹರಿಕಂತ್ರ 9ನೇ ಸ್ಥಾನದಲ್ಲಿ ಹಾಗೂ 496 ಅಂಕಗಳನ್ನು ಪಡೆದ ಶ್ರೇಯಾ ರಾಮ ನಾಯ್ಕ ಹತ್ತನೆಯ ಸ್ಥಾನ ಪಡೆದಿದ್ದು,ಎಲ್ಲಾ ವಿದ್ಯಾರ್ಥಿಗಳಿಗೆ ಬರ್ಗಿ ಸೇವಾ ಸಹಕಾರಿ ಸಂಘದ ಸದ್ಯರಾದ ಗೋವಿಂದ ಆರ್ ನಾಯಕ, ನಿವೃತ್ತ ಶಿಕ್ಷಕರಾದ ದೇವರಾಯ್ ನಾಯಕ ಎಸ್ ಎಸ್ ಎಲ್ಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.
ಇದನ್ನೂ ಓದಿ….
- ಹಿಂದೂಗಳ ಮೇಲೆ ದಾಳಿಗೆ ಸಂಚು: ಕುಕ್ಕರ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿಗೆ 10 ವರ್ಷ ಶಿಕ್ಷೆ
- Accident News /ಮರಕ್ಕೆ ಡಿಕ್ಕಿ ಹೊಡೆದ ಕಾರು : ಓರ್ವ ಗಂಭೀರ
- Kumta News/“ಮೀನುಗಾರಿಕೆ ಮೇಲೆ ನಿರ್ಬಂಧ, ಟೂರಿಸಂಗೆ ಸಡಿಲಿಕೆ—ಇದು ಯಾವ ನ್ಯಾಯ..?”
- Uttara kannada/ಉತ್ತರ ಕನ್ನಡದಲ್ಲಿ ಸಿಡಿಲಿಗೆ ಮೊದಲ ಬಲಿ
.



