ಸುದ್ದಿಬಿಂದು ಬ್ಯೂರೋ ವರದಿ
Goa/ಗೋವಾ : ಹೊರ ರಾಜ್ಯ ಹಾಗೂ ದೇಶ ವಿದೇಶಗಳ ಪ್ರವಾಸಿಗರಿಂದ ತುಂಬಿರುತ್ತಿದ್ದ ಗೋವಾ ರಾಜ್ಯದಲ್ಲಿ ಈಗ ಪ್ರವಾಸಿಗರ ಸಂಖ್ಯೆಯಲ್ಲಿ ಕ್ಷೀಣವಾಗುತ್ತಿದೆ ಎನ್ನಲಾಗಿದೆ.
ಏಪ್ರಿಲ್-ಮೇ ತಿಂಗಳು ಬಂದರೆ ಕರ್ನಾಟಕದಿಂದಲ್ಲೂ ಹೆಚ್ಚಿನ ಸಂಖ್ಯೆ ಪ್ರವಾಸಿಗರು ಗೋವಾದತ್ತ ಹೋಗುವುದು ಸಾಮಾನ್ಯವಾಗಿ ಕಂಡು ಬರುತ್ತಿತ್ತು. ಆದರೆ ಗೋವಾ ಸರಕಾರ ಇತ್ತೀಚೆ ಹೊಸ ನಿಮಯ ಜಾರಿ ಮಾಡಿರುವುದು ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವುದು ಕಂಡು ಬರುತ್ತಿದೆ ಎನ್ನಲಾಗಿದೆ.ಗೋವಾಕ್ಕೆ ಯಾರೆ ಪ್ರವಾಸಿಗರು ಬರುವುದಾದರೂ ಯಾರೂ ಕೂಡ ರಸ್ತೆ ಬದಿಯಲ್ಲಿ ಅಡುಗೆ ಮಾಡಿ ಊಟ ಮಾಡುವಂತಿಲ್ಲ, ಗೋವ ರಾಜ್ಯಕ್ಕೆ ಪ್ರವೇಶಿಸುವ ಪ್ರವಾಸಿಗರ ವಾಹನದಲ್ಲಿ ಅಡಗೆ ಅನಿಲ,ಪಾತ್ರೆ,ಸಾಮಗ್ರಿಗಳು ಕಂಡು ಬಂದರೆ ಅಂತಹ ವಾಹನವನ್ನ ರಾಜ್ಯದ ಗಡಿಯಲ್ಲೆ ಸೀಜ್ ಮಾಡುವುದಾಗಿ ಸಿಎಂ ಪ್ರಮೋದ್ ಸಾವಂತ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸಿಎಂ ಈ ಹೇಳಿಕೆ ಬಳಿಕ ಗೋವಾ ಪ್ರವಾಸಕ್ಕೆ ಬರುವವರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ ಎನ್ನಲಾಗಿದೆ.ಈ ಹಿಂದೆ ಇಡ್ಲಿ ಸಾಂಬರ್ ತಿಂಡಿಯಿಂದಾಗಿ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ ಎಂದು ಬಿಜೆಪಿ ಶಾಸಕ ಮೈಕೆಲ್ ಲೋಬೊ ಹೇಳಿಕೆ ನೀಡಿದ್ದರು. ಆದರೆ ಇದೀಗ ಇಲ್ಲಿಗೆ ಬರುವ ಪ್ರವಾಸಿಗರು ರಸ್ತೆ ಬದಿಯಲ್ಲಿ ಅಡುಗೆ ಮಾಡಿ ಊಟ ಮಾಡುವಂತಿಲ್ಲ ಎಂದು ಹೇಳಿಕೆ ನೀಡಿದ ಬೆನ್ನಲೆ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಾಣುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ