ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಇಲ್ಲಿನ ಕೂರ್ಮಗಡ ದ್ವೀಪದಲ್ಲಿ ಕಳೆದ ಎರಡು ವರ್ಷಗಳಿಗಿಂತಲೂ ಹೆಚ್ಚಿನ ಸಮಯದಿಂದ ಅಕ್ರಮವಾಗಿ ವಾಸವಾಗಿದ್ದ 50ಕ್ಕೂ ಹೆಚ್ಚು ಹೊರ ರಾಜ್ಯದ ಕಾರ್ಮಿಕರನ್ನ ಪೊಲೀಸರು ವಿಚಾರಣೆ ಒಳಪಡಿಸಿದ್ದಾರೆ.
ಕೂರ್ಮಗಡ ದ್ವೀಪದಲ್ಲಿ ಬಾಂಗ್ಲಾ ಸೇರಿದಂತೆ ಹೊರ ರಾಜ್ಯದಿಂದ ಕಳೆದ ಎರಡು ವರ್ಷದಿಂದ 50ಕ್ಕೂ ಅಧಿಕ ಕಾರ್ಮಿಕರು ಅಕ್ರವಾಗಿ ವಾಸವಾಗಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನಲೆಯಲ್ಲಿ ಚಿತ್ತಾಕುಲ ಪೊಲೀಸ್ ಹಾಗೂ ಕರಾವಳಿ ಕಾವಲು ಪಡೆ, ಬಾಂಬ್ ನಿಷ್ಕ್ರೀಯ ತಂಡ ಸಹ ಕೂರ್ಮಗಡ ದ್ವೀಪಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.
ಕೂರ್ಮಗಡ ದ್ವೀಪದಲ್ಲಿರುವ ರೆಸಾರ್ಟ್ ಸೇರಿದಂತೆ ಜಲಸಾಹಸ ಕ್ರೀಡೆ ನಡೆಸಲು ನಾಗಾಲ್ಯಾಂಡ್, ಜಾರ್ಖಾಂಡ, ಬಾಂಗ್ಲಾದಿಂದಲ್ಲೂ ಬಂದಿರುವ ಕಾರ್ಮಿಕರು ಇದ್ದಾರೆ ಎನ್ನಲಾಗಿದೆ. ಇವರೆಲ್ಲರೂ ಕಳೆದ ಎರಡು ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಎರಡು ವರ್ಷದಿಂದ ಕಾರ್ಮಿಕರಾಗಿದ್ದರು ಸಹ ಯಾರು ಕೂಡ ಸರಿಯಾದ ದಾಖಲೆ ಸಲ್ಲಿಕೆ ಮಾಡಿಲ್ಲ ಎನ್ನಲ್ಲಾಗಿದ್ದೂ,ಇನ್ನೂ ರೆಸಾರ್ಟ್ ಮಾಲೀಕರು ಸಹ ತಮ್ಮ ಬಳಿ ಇರುವ ಕಾರ್ಮಿಕರ ಬಗ್ಗೆ ಸಂಬಂಧಿಸಿದ ಇಲಾಖೆಗೆ ಯಾವುದೇ ಮಾಹಿತಿಯನ್ನ ನೀಡದೆ.ಅಕ್ರಮವಾಗಿ ಹೊರ ರಾಜ್ಯದ ಕಾರ್ಮಿಕರನ್ನ ರಾಜ್ಯದೊಳಗೆ ಸೇರಿಕೊಂಡಿದ್ದಾರೆ ಎನ್ನಲಾಗಿದೆ..
ಇನ್ನೂ ಜಲಸಾಹ ಕ್ರೀಡೆ ಸಹ ನಡೆಸಲಾಗುತ್ತಿದ್ದು, ಪ್ರವಾಸೋದ್ಯಮ ಇಲಾಖೆಯಿಂದ ಯಾವುದೇ ಅನುಮತಿಯನ್ನ ಸಹ ಪಡೆಯದೆ ಕಾನೂನು ಬಾಹಿರವಾಗಿ ಜಲಸಾಹ ಕ್ರೀಡೆ ನಡೆಸಲಾಗುತ್ತಿದ್ದು, ಪರಿಣಿತ ಈಜು ತಜ್ಞರು ಸಹ ಇಲ್ಲದೆ ಕೈಯಾಕಿಂಗ್,ಜೆಟ್ಸ್ಕಿ ನಡೆಸಲು ಅನುಮತಿಯನ್ನೆ ಪಡೆದಿಲ್ಲ.ಅಲ್ಲದೆ ಇಲ್ಲಿ ರೆಸಾರ್ಟ್ ನಡೆಸಲು ಕರ್ನಾಟಕ ಟೂರಿಸ್ಟ್ ಡಿಪಾರ್ಟ್ಮೆಂಟ್ ನಿಂದಲ್ಲೂ ಯಾವುದೇ ಅನುಮತಿ ಇಲ್ಲ ಎನ್ನಲಾಗಿದೆ.
ಗಮನಿಸಿ
- ಮೂರು ವರ್ಷದಲ್ಲೇ ಜನಪ್ರಿಯ ನಾಯಕನಾಗಿ ಹೊರಹೊಮ್ಮಿದ ಮಂಕಾಳ್ ವೈದ್ಯ
- ಮೊರಬಾದಲ್ಲಿ ಭಾರೀ ಗಾಳಿಗೆ ತೆಂಗಿನ ಮರ ಬಿದ್ದು ಮನೆ ಜಖಂ: ಪ್ರಾಣಾಪಾಯದಿಂದ ಪಾರು
- ಕರಾವಳಿಯ ಅಭಿವೃದ್ಧಿಗೆ ಮತ್ತೊಂದು ಹೆಜ್ಜೆ: ಡಿಕೆಶಿ ಸಚಿವ ಸಂಪುಟದಲ್ಲಿ ಮಾಂಕಾಳ ವೈದ್ಯರಿಗೆ ಹೊಸ ಜವಾಬ್ದಾರಿ..!
- 11 ಮಂದಿಯ ದುರಂತದ ಸೂತಕದಲ್ಲೂ ಬಿಜೆಪಿ ರಾಜಕೀಯ; ಕಾಂಗ್ರೇಸ ಜಿಲ್ಲಾ ವಕ್ತಾರ ಪ್ರಸನ್ನ ನಾಯ್ಕ ಆಕ್ರೋಶ

