ವಿಜಯಪುರ:ಅಭಿವೃದ್ಧಿ ಪರ, ಸತ್ಯದ ಪರ,ಪ್ರಾಮಾಣಿಕರ, ಬಡವರ, ಹಿಂದೂಪರ ಹೋರಾಟಗಾರ, ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದ ವಿಷಯ ನಮ್ಮ ಮನಸ್ಸಿಗೆ ಅತಿವ ನೋವುಂಟು ಮಾಡಿದ್ದು, ಇದನ್ನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಇದನ್ನು ಖಂಡಿಸಿ ವಿರೋಧಿಸುತ್ತೆನೆ ಎಂದು ಸುಶೀಲ ಕ್ಷತ್ರಿ ಬರಗುಡಿ ಹೇಳಿದರು.

ನೇರ ನುಡಿ, ನಿಷ್ಠೆ, ಪ್ರಾಮಾಣಿಕ ವ್ಯಕ್ತಿತ್ವ ನಿಮ್ಮದು ಯತ್ನಾಳ್ ಜೀ, ಲಕ್ಷಾಂತರ ಜನರು ನಿಮ್ಮ ಜೊತೆಗೆ ಇದ್ದಾರೆ. ಹಿಂದುತ್ವದ ಸಿದ್ದಾಂತದ ಅಡಿಯಲ್ಲಿ ಈಗಿನಿಂದಲೇ ಚುನಾವಣೆಗೆ ಸಿದ್ಧತೆ ನಡೆಸಿ. ನಿಮ್ಮೊಂದಿಗೆ ನಾವಿದ್ದೇವೆ. ಪ್ರಮೋದ್ ಮುತಾಲಿಕ್ ಅವರನ್ನು ಆದಷ್ಟು ಬೇಗ ಭೇಟಿ ಮಾಡಿ. ಅವರನ್ನೂ ಜೊತೆಗೆ ಮುಂಚೂಣಿಗೆ ತನ್ನಿ

ಅಪ್ಪ – ಮಗ ಸೇರಿ ಮುಗಿಸಿದ ನಾಯಕರ ಹೆಸರುಗಳು ಅನಂತಕುಮಾರ್, ಈಶ್ವರಪ್ಪ, ಅನಂತ್‌ಕುಮಾರ್ ಹೆಗ್ಡೆ, ನಳಿನ್ ಕುಮಾರ್ ಕಟೀಲ್, ಸಿಟಿ ರವಿ, ಸೇಡಂಜಿ, ಸದಾನಂದ ಗೌಡ, ಪ್ರತಾಪ್ ಸಿಂಹ, ಜಗದೀಶ್ ಶೆಟ್ಟರ್, ಬಿಎಲ್ ಸಂತೋಷ್, ಪ್ರಲ್ಹಾದ್ ಜೋಶಿ, ಶ್ರೀರಾಮುಲು, ವಿ ಸೋಮಣ್ಣ, ಲಕ್ಷ್ಮಣ್ ಸವದಿ, ಅರುಣ್ ಪುತ್ತಿಲ್,ಬಸನಗೌಡ ಪಾಟೀಲ್ ಯತ್ನಾಳ್.

ಒಬ್ಬ ಬಿಜೆಪಿ ಕಾರ್ಯಕರ್ತನಾಗಿ ಹೇಳುತ್ತಿದ್ದೆನೆ ಉತ್ತರ ಕರ್ನಾಟಕ ಭಾಗದ ಅತೀ ಹೆಚ್ಚು ಜನಪ್ರಿಯತೆ ಮತ್ತು ಅಷ್ಟೇ ಅಭಿವೃದ್ಧಿ ಮತ್ತು ಅಷ್ಟೇ ಬಡವರ ಪರ ಧ್ವನಿ ಎತ್ತುತ್ತಿರುವ ನಾಯಕನನ್ನು ನೀವು ಈ ರೀತಿ ಉಚ್ಚಾಟನೆ ಮಾಡಿರುವುದು ಸರಿಯಲ್ಲ..ಇದರಿಂದ ಖಂಡಿತವಾಗಿಯೂ ಬಿಜೆಪಿ ಪಕ್ಷಕ್ಕೆ‌ ದೊಡ್ಡ ನಷ್ಟ…

ಎದೆ ಗುಂದದಿರಿ ಸರ್…
ನಿಷ್ಠಾವಂತ ಕಾರ್ಯಕರ್ತರು ಸದಾ ನಿಮ್ಮ ಜೊತೆ ಸರ್..
ಸಮಯ ನಿಮಗೂ ಕೂಡಾ ಒಂದು ಅವಕಾಶ ವನ್ನು ಕೊಟ್ಟೆ ಕೊಡುತ್ತದೆ ಈ ರಾಜ್ಯಕ್ಕೆ ನಿಮ್ಮಂತ ನಾಯಕರ ಅವಶ್ಯಕತೆ ತುಂಬಾ ಇದೆ ಸರ್…
ನಿಮ್ಮನ ಭವಿಷ್ಯದ ಸಿಎಂ ಆಗಿ ನೋಡೋ ನಮ್ಮ ಆಸೆ ಈಡೇರಲಿ ಅಂತ ಆ ಭಗವಂತನಲ್ಲಿ ಬೇಡಿಕೊಳ್ಳುತ್ತೇನೆ. ಪಕ್ಷ ಕ್ಕಾಗಿ ಹಗಲಿರುಳು ದುಡಿದವರಿಗೆ ಬೆಲೆ ಇಲ್ಲದಂತಾಗಿದೆ.

ಇದನ್ನೂ ಓದಿ