ಸುದ್ದಿಬಿಂದು ಬ್ಯೂರೋ ವರದಿ

ಅಂಕೋಲಾಃ :ತಾಲ್ಲೂಕಿನ ವಂದಿಗೆಯ ಶ್ರೀ ಸರ್ವೇಶ್ವರ ದೇವಸ್ಥಾನದ ಬಳಿ ನಿರ್ಮಿಸಿದ ನೂತನ ಹೆಬ್ಬಾಗಿಲನ್ನ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಉದ್ಘಾಟಿಸಿದರು

ಉದ್ಘಾಟನೆ ನೆರವೇರಿಸಿದ ಬಳಿಕ ಶ್ರೀದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ, ಸರ್ವೇಶ್ವರ ದೇವರ ಕೃಪೆಯಿಂದ ಊರಿನ ಜನತೆಗೆ ಆರೋಗ್ಯ, ಉನ್ನತಿ ಲಭಿಸುವಂತಾಗಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಸಂಜಯ ನಾಯ್ಕ, ಜಗದೀಶ್ ನಾಯಕ ಮೊಗಟಾ, ಚಂದ್ರಕಾಂತ ನಾಯ್ಕ, ಸೂರಜ ನಾಯ್ಕ, ಶ್ರೀಧರ್ ನಾಯ್ಕ, ಪ್ರವೀಣ್ ನಾಯ್ಕ, ನಿಲೇಶ್ ನಾಯ್ಕ, ಸಂದೀಪ್ ಗಾಂವಕರ, ದಾಮೋದರ ರಾಯ್ಕರ್, ಸುಬ್ರಹ್ಮಣ್ಯ ಗಾಂವಕರ, ಬಾಲಕೃಷ್ಣ ನಾಯ್ಕ, ಗಣಪತಿ ನಾಯ್ಕ, ವಾಮನ ನಾಯ್ಕ, ಯುವ ನಾಯಕರಾದ ಪರ್ಬತ್ ಎಸ್. ನಾಯ್ಕ ಮತ್ತು ಪ್ರಮುಖರು ಉಪಸ್ಥಿತರಿದ್ದರು.

ಇದನ್ನೂ ಓದಿ//ಬರ್ಗಿ–ಕಿಮಾನಿ ರಸ್ತೆಗೆ ಬೆಳಕು ಕೊಡಿ; ದಾರಿ ದೀಪ ದುರಸ್ತಿಗೆ ಗ್ರಾಮಸ್ಥರ ಒತ್ತಾಯ