ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ :ಪ್ರಖ್ಯಾತ ಜ್ಯೋತಿಷಿ ಎಂದು ಪರಿಚಿತನಾಗಿರುವ ಕಮಲಾಕರ ಭಟ್ ಹಾಗೂ ಸುಚಿತ್ರ ರಾಸಲೀಲೆ ಬಗ್ಗೆ ನಡೆಸಿದ ಸಂಭಾಷಣೆ ಎನ್ನಲಾಗಿರುವ ಆಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ಭಾರೀ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ/ಮಟ್ಕಾ ಸಂಘಕ್ಕೆ ಭರ್ಜರಿ ಆದಾಯ : ಯಶಸ್ವಿ ಕಾಣುತ್ತಿರುವ ‘ಮಂಜ,ದಾಸರ ತಂಡ’

ವೈರಲ್ ಆಗಿರುವ ಆಡಿಯೋದಲ್ಲಿ ಅಸಭ್ಯ ಹಾಗೂ ಕೆಟ್ಟ ಪದಗಳ ಬಳಕೆ ಕೇಳಿಬರುತ್ತಿದ್ದು, ಜ್ಯೋತಿಷ್ಯದ ವಿಚಾರ ಕೇಳಲು ಸಂಪರ್ಕಿಸಿದ ಮಹಿಳೆಯೊಂದಿಗಿನ ಸಂಭಾಷಣೆಯ ವೇಳೆ, ಭಟ್ ಮತ್ತು ಸುಚಿತ್ರ ತಮ್ಮದೇ ಅನೈತಿಕ ಸಂಬಂಧದ ಬಗ್ಗೆ ಯಾವುದೇ ಮುಜುಗರವಿಲ್ಲದೆ ಮಾತನಾಡಿರುವುದು ಕೇಳಿಬರುತ್ತದೆ ಎನ್ನಲಾಗಿದೆ.

ಆಡಿಯೋದಲ್ಲಿ ಸುಚಿತ್ರ, “ಮಗಳು ಇಲ್ಲದಿದ್ದರೆ ನಮ್ಮ ಸುಖಕ್ಕೆ ಯಾವುದೇ ಅಡ್ಡಿಯೇ ಇಲ್ಲ” ಎಂಬ ರೀತಿಯ ಹೇಳಿಕೆ ನೀಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದಾಗಿ, ಇವರ ಅನೈತಿಕ ಸಂಬಂಧಕ್ಕೆ ಮಕ್ಕಳು ಅಡ್ಡಿಯಾಗಿದ್ದಾರೆಯೇ? ಎಂಬ ಅನುಮಾನಗಳು ಮೂಡಿವೆ.

ಇದೇ ವೇಳೆ, ಈ ಆಡಿಯೋ ಹಿನ್ನೆಲೆ ಮಗಳ ಸುರಕ್ಷತೆ ಕುರಿತಾಗಿ ಗಂಭೀರ ಪ್ರಶ್ನೆಗಳು ಎದ್ದಿದ್ದು, ಕೆಲವರು ಮಕ್ಕಳನ್ನೇ ಕೊಲೆ ಮಾಡಲು ಸುಚಿತ್ರಾ ಹಾಗೂ ಕಮಲಾಕತ ಭಟ್ ಸಂಚು ರೂಪಿಸಿದ್ದಾರೆಯೇ? ಎಂಬ ಶಂಕೆಯನ್ನು ವ್ಯಕ್ತಪಡಿಸುವಂತಾಗಿದೆ..ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಸ್ಪೋಟಕ ಮಾಹಿತಿಗಳು ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ..ಈ ಬಗ್ಗೆ ಪೊಲೀಸರು ಯಾವ ರೀತಿಯಾಗಿ ತನಿಖೆ‌ ನಡೆಸಲಿದ್ದಾರೆ ಎನ್ನುವುದನ್ನ ಕಾದು ನೋಡಬೇಕಿದೆ.

ಇದನ್ನೂ ಓದಿ/ಮನೆಯೊಳಗೇ ಕೊಲೆ ಮಾತುಕತೆ..! ಮಹೇಶ  ನಾಯ್ಕ್ ಕೊಲೆಗೆ ಮೂರು ತಿಂಗಳ ಹಿಂದೆ ನಡೆದಿತ್ತು ಸಂಚು : ಸ್ಪೋಟಕ ಸತ್ಯ ಬಹಿರಂಗ