suddibindu.in
ಕೊಪ್ಪಳ: ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದ ಕಾರಣಕ್ಕೆ ಯುವಕನ ಮನೆಯವರು ವಿವಾಹಿತೆಗೆ ವಿಷಉಣಿಸಿ ಕೊಲೆ ಮಾಡಿರುವ ಘಟನೆ ಗಂಗಾವತಿ ತಾಲೂಕಿನ ವಿಠಲಾಪುರ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಮರಿಯಮ್ಮ ಹನುಮಯ್ಯ ನಾಯಕ ಗಟಾಲಿ (20) ಮೃತಪಟ್ಟ ನವ ವಿವಾಹಿತೆಯಾಗಿದ್ದಾಳೆ.ಈಕೆ ಕನಕಗಿರಿ ತಾಲೂಕಿನ ವಿಠಲಾಪುರ ಗ್ರಾಮದ ಹನಮಯ್ಯ ಅನ್ನೋ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ ಮರಿಯಮ್ಮ, ದಲಿತ ಸಮುದಾಯಕ್ಕೆ ಸೇರಿದ್ದರೆ, ಹನಮಯ್ಯ, ನಾಯಕ ಜಾತಿಗೆ ಸೇರಿದ್ದ. ಹೀಗಾಗಿ ಇಬ್ಬರ ಮನೆಯಲ್ಲಿ ಒಪ್ಪಿಗೆ ಸಿಕ್ಕಿರಲಿಲ್ಲ. ಹೀಗಾಗಿ ಇಬ್ಬರೂ ಸಹ ಮನೆ ಬಿಟ್ಟು ಹೋಗಿದ್ದರು.
ಇನ್ನೂ ಯುವತಿ ವಿವಾಹವಾಗಿರುವುದಕ್ಕೆ ಆಕೆಯ ಮನೆಯವರು ಸಹ ದೂರು ನೀಡಲು ಮುಂದಾಗಿದ್ದರು. ಆದರೆ ಇಬ್ಬರು ಕೂಡಾ ಪ್ರಾಪ್ತವಯಸ್ಸಿನವರಾಗಿರುವ ಕಾರಣಕ್ಕೆ ದೂರು ದಾಖಲಿಸಲು ಸಾಧ್ಯವಾಗಿರಲಿಲ್ಲ. ನಂತರದಲ್ಲಿ ಮರಿಯಮ್ಮ ಮತ್ತು ಹನುಮಯ್ಯ, ಗಂಗಾವತಿ ಸಬ್ ರಿಜಸ್ಟರ್ ಕಚೇರಿಯಲ್ಲಿ ವಿವಾಹವಾಗಿದ್ದರು.
ಬಳಿಕ ಈ ಎರಡು ಕುಟುಂಬದವರು ಸೇರಿ ದೇವಸ್ಥಾನದಲ್ಲಿ ಸರಳ ವಿವಾಹ ಮಾಡಿದ್ದರು.ಅದಾದ ನಂತರ ಯುವತಿಯ ಮನೆಯವರಿಗೆ ಯುವಕನ ಮನೆಯವರು ತಮ್ಮ ಮನೆ ಕಡೆಗೆ ಬರಬೇಡಿ ಎಂದು ಹೇಳಿದ್ದರಿ. ಇದಕ್ಕೆ ಯುವತಿಯ ಮನೆಯವರು ಯುವಕನ ಮನೆಗೆ ಹೋಗದೆ ಸುಮ್ಮನಾಗಿದ್ದರು.
ಆಗಸ್ಟ್ 27 ರಂದು ಮರಿಯಮ್ಮಳ ಕುಟುಂಬದವರಿಗೆ ಕನಕಗಿರಿ ಪೊಲೀಸರು ಮರಿಯಮ್ಮ ವಿಷಕುಡಿದಿರುವುದಾಗಿ ತಿಳಿಸಿದ್ದಾರೆ. ಆಗಲೆ ಆಕೆಯನ್ನ ಕೊಪ್ಪಲ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು..ಆದರೆ ಚಿಕಿತ್ಸೆ ಫಲಿಸದೆ ಮರಿಯಮ್ಮ ಸಾವನಪ್ಪಿದ್ದಾಳೆ.
ಮಗಳಿಗೆ ಕೆಳ ಜಾತಿಯವಳು ಅಂತ ಕಿರುಕುಳ ನೀಡುತ್ತಿದ್ದರು. ವರದಕ್ಷಿಣೆ ತರುವಂತೆ ಕಿರುಕುಳ ಸಹ ನೀಡುತ್ತಿದ್ದರು ಆಕೆಯನ್ನ ಸಣ್ಣ ಜೋಪಡಿಯಲ್ಲಿಟ್ಟಿದ್ದರಂತೆ. ಈ ಕಾರಣಕ್ಕೆ ಹನಮಯ್ಯನ ಕುಟುಂಬದವರು ಕಿರುಕುಳ ನೀಡಿದ್ದಲ್ಲದೆ, ವಿಷ ಕುಡಿಸಿ ಕೊಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಸದ್ಯ ಮರಿಯಮ್ಮಳ ಸಾವಿನ ಬಗ್ಗೆ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ