ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಪಟ್ಟಣದ ಪ್ರತಿಷ್ಠಿತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಡಿಗಾರಗಲ್ಲಿ ಇದರ ವಾರ್ಷಿಕೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ಗುಡಿಗಾರಗಲ್ಲಿ ಶಾಲೆಯಲ್ಲಿ ಅನೇಕ ವರ್ಷಗಳ ಕಾಲ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಶಾಲಾ ಮಕ್ಕಳ ಏಳ್ಗೆ ಮತ್ತು ಶಾಲಾಭಿವೃದ್ಧಿಗೆ ಶ್ರಮಿಸಿ ಜನರ ಮನಸ್ಸಿನಲ್ಲಿ ಅಜರಾಮರರಾದ ದಿವಂಗತ  ಬಂಗಾಲಿ ಮಾಸ್ತರ್ ಹೆಸರಲ್ಲಿ ಅವರ ಹಿರಿಯ ಮಗ (ನಿವೃತ್ತ ಇಂಜಿನಿಯರ್) ಗಜಾನನ ಬಂಗಾಲಿ ಅವರು ಹಿಂದುಳಿದ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಿಧಿ ಸ್ಥಾಪಿಸಿದ್ದು, ಈ ಬಾರಿ ಪ್ರತಿಭಾವಂತ ವಿದ್ಯಾರ್ಥಿ ಪ್ರಶಸ್ತಿ ಮತ್ತು ಬಹುಮಾನವನ್ನು 7ನೇ ತರಗತಿ ವಿದ್ಯಾರ್ಥಿಗಳಾದ ಕುಮಾರಿ ನಯನಾ ತುಕಾರಾಮ್ ನಾಯ್ಕ ಮತ್ತು ಕುಮಾರ ಶ್ರೇಯಸ್ ಪ್ರಕಾಶ್ ಭಂಡಾರಿ ಎನ್ನುವವರು ಪಡೆದಿರುತ್ತಾರೆ.

ವೇದಿಕೆ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಈಶ್ವರ ನಾಯ್ಕ, ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುವ ಶಿಕ್ಷಣ ಪ್ರೇಮಿ ಹಾಗೂ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಆಡಳಿತ ಮೋಕ್ತೆಸರರಾದ ಕೃಷ್ಣ ಬಾಬಾ ಪೈ, ಗುಡಿಗಾರಗಲ್ಲಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಲಕ್ಷ್ಮಣ ಮಾದೇವ ನಾಯ್ಕ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ಶಿಕ್ಷಕರು ಹಾಗೂ ಇನ್ನೂ ಅನೇಕ ಗಣ್ಯರು ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿಗಳು ವೈವಿಧ್ಯಮಯ ಕಲೆ, ನೃತ್ಯರೂಪಕಗಳ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸುವ ಜೊತೆಗೆ ನೆರೆದ ಪಾಲಕರು ಮತ್ತು ನಾಗರಿಕರನ್ನು ರಂಜಿಸಿದರು.

ಇದನ್ನೂ ಓದಿ/ಅಂಕೋಲಾದಲ್ಲಿ ಮಟ್ಕಾ ಸಂಘದ ಚುನಾವಣೆ :  “ವೃಕ್ಷ ಪ್ರೇಮಿ” ತಂಡಕ್ಕೆ ಭರ್ಜರಿ ಜಯ, ಇಂದಿನಿಂದ ಆಟ‌ ಆರಂಭ..!