ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ :ಪಟ್ಟಣದಲ್ಲಿ ನಡೆಯುತ್ತಿದ್ದ ಮಟ್ಕಾ ಸಂಘದ ಚುನಾವಣೆಯಲ್ಲಿ ಈ ಭಾರಿ “ವೃಕ್ಷ ಪ್ರೇಮಿ” ತಂಡದ ಸದಸ್ಯರು ಕಳೆದ ಅನೇಕ ವರ್ಷಗಳಿಂದ ಈ ಸಂಘವನ್ನು ಕಟ್ಟಿಕೊಂಡು ಬೆಳಸಿಕೊಂಡು ಬಂದಿದ್ದರು. ಹಿಂದೆಲ್ಲಾ ಅವಿರೋಧವಾಗಿ ಆಯ್ಕೆ ಆಗುತ್ತಿದ್ದ “ವೃಕ್ಷ ಪ್ರೇಮಿ” ತಂಡ ಈ ಭಾರಿ ಚುನಾವಣೆ ಎದುರಿಸಿ ಗೆದ್ದುಕೊಂಡಿದೆ.
ಮಟ್ಕಾ ಸಂಘಕ್ಕೂ ಉಳಿದ ಸಂಘಕ್ಕೂ ತುಂಬಾ ವ್ಯತ್ಯಾಸ ಇದೆ. ರಾಜಕಾರಣಿಗಳು ಚುನಾವಣಾ ಪೂರ್ವದಲ್ಲಿ ಮತದಾರರನ್ನ ಸೆಳೆಯಲು ಹಣ ಹಂಚಿದ್ದರೆ . ಮಟ್ಕಾ ಸಂಘದ “ಮಂಜಾದಾಸರು” ಕ್ಷೇತ್ರವನ್ನ ಗಟ್ಟಿಮಾಡಿಕೊಳ್ಳಲು ಹಾಗೂ ತಮ್ಮ ಸಂಘಕ್ಕೆ ಹೆಚ್ಚು ಬುಕ್ಕಿದಾರರನ್ನ ಮಾಡಿಕೊಳ್ಳಲು ಆಯಾ ಕಟ್ಟಿನ ಖುರ್ಚಿಯಲ್ಲಿ ಕುಳಿತವರನ್ನ ಒಲಿಸಿಕೊಳ್ಳಲು ತಿಂಗಳಿಗೆ ಒಂದಿಷ್ಟು ಪುಡಿಕಾಸು ನೀಡಬೇಕಾಗುತ್ತಯಂತೆ. ಕ್ಷೇತ್ರದಲ್ಲಿ ಮಟ್ಕಾ ಸಂಘದ ಸ್ಥಾನ ಭದ್ರ ಮಾಡಿಕೊಳ್ಳಲು, ಈ “ಮಂಜಾದಾಸರು” ಕಳೆದ ಅನೇಕ ದಿನಗಳಿಂದ ಸಾಕಷ್ಟು ಪ್ರಯತ್ನ ನಡೆಸಿದ್ದಾರೆನ್ನಲಾಗಿದ್ದು, ಅದು ಇಂದು ಯಶ್ವಿಯಾಗಿದೆ ಎನ್ನಲಾಗಿದೆ.
ಈ “ಮಂಜಾದಾಸರ” ಮಟ್ಕಾ ಸಂಘದ ಸದ್ಯರು ಹೆಚ್ಚಾಗಿ ಸಣ್ಣಪುಟ್ಟ ಅಂಗಡಿಗಳ ಮಾಲೀಕರು ಎನ್ನಲಾಗಿದೆ. ಇವರು ಬೆಳಿಗ್ಗೆಯಾದ ತಕ್ಷಣ “ರಾಜ ರಾಣಿ ಮಾರ್ನಿಂಗ್, ‘ಶ್ರೀದೇವಿ, ಕಲ್ಯಾಣಿ, ಮಹಾರಾಣಿ ಹೀಗೆ ಹತ್ತು ಹಲವು ಹೆಸರಿನಲ್ಲಿ ಕರೆಯಲಾಗುವ ಆಟ ಆಡಿಸಿ ರಾತ್ರಿ ತನಕ ಮೇನ್ ಬಜಾರ್ ವರಗೆ ಹೋಗಿ ನಿಲ್ಲುತ್ತಾರೆ. ಇಂದಿನಿಂದ ಅಂಕೋಲಾ ಪಟ್ಟಣದಲ್ಲಿ ಈ ಮಂಜಾದಾಸರ ದರ್ಬಾರ್ ಆಂಭವಾಗಿದ್ದು, ಇಷ್ಟು ದಿನ ಕದ್ದಿ, ಮುಚ್ಚಿ ಮಟ್ಕಾ ಸಂಘಕ್ಕೆ ಆಡಲು ಬರುತ್ತಿದ್ದ ಸದಸ್ಯರು “ವೃಕ್ಷ ಪ್ರೇಮಿ” ತಂಡಕ್ಕೆ ಜಯ ಸಿಕ್ಕಿರುವುದರಿಂದ ಇಷ್ಟು ದಿನ ಭಯದಿಂದ ಆಟಕ್ಕೆ ಬರುತ್ತಿದ್ದವರು ಇಂದಿನಿಂದ ಭಕ್ತಿಯಿಂದ ಕೈ ಮುಗಿದು ಬರಲಿದ್ದಾರೆಂದು ಅಂಕೋಲಿಯ ಪಟ್ಟಣದಲ್ಲಿ ಭಾರೀ ಚರ್ಚೆಯಲಿದೆ..
ಈ ಚುನಾವಣಾ ವಿಶ್ಲೇಷಣೆ ಮುಂದುವರೆಯುವುದು.
ಇದನ್ನೂ ಓದಿ/“ಬಡವರು, ರೈತರು, ಮೀನುಗಾರರ ಪರ ನಿಂತ ಕೇಂದ್ರ ಬಜೆಟ್” : ರೂಪಾಲಿ ನಾಯ್ಕ ಶ್ಲಾಘನೆ


