ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ನಗರದ ಸುಶಿಕ್ಷಿತ ಹಾಗೂ ಪ್ರತಿಷ್ಠಿತ ಕುಟುಂಬಕ್ಕೆ ಸೇರಿದ ಹಿಂದೂ ಯುವತಿಯೊಬ್ಬಳು ಬಿಹಾರ್ ಮೂಲದ ಓರ್ವ ಮುಸ್ಲಿಂ ಕ್ಷೌರಿಕನೊಂದಿಗೆ ಮದುವೆಯಾಗಿ ಬೆಂಗಳೂರಿಗೆ ಹಾರಿಹೋಗಿರುವ ವಿಷಯ ನಗರದಲ್ಲಿ ಹರಿದಾಡುತ್ತಿದೆ.

ನಗರದ ಪ್ರಸಿದ್ಧ ಆಭರಣ ವ್ಯಾಪಾರಿಯ ಮಗಳನ್ನ ಬಿಹಾರಿ ಮುಸ್ಲಿಂ ಯುವಕ ಮದುವೆಯಾದ ವಿಚಾರ ತಿಳಿದು ಆಘಾತಗೊಂಡ ಯುವತಿಯ ತಂದೆ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಬಿಹಾರಿ ಯುವಕ ಬೆಂಗಳೂರಿನ ಹೇರ್ ಕಟಿಂಗ್ ಸಲೂನ್ ಒಂದರಲ್ಲಿ ಕ್ಷೌರಿಕ ಕೆಲಸ ಮಾಡುತ್ತಿದ್ದ,ಎನ್ನಲಾಗಿದ್ದು, ಯುವತಿ ಬೆಂಗಳೂರಿನಲ್ಲಿ ಸ್ನಾತಕ್ಕೋತ್ತರ ಪದವಿಯ ಅಭ್ಯಾಸಕ್ಕಾಗಿ ಉಳಿದುಕೊಂಡಿದ್ದಳು. ಅಲ್ಲಿ ಅವರಿಬ್ಬರಿಗೂ ಪರಿಚಯವಾಗಿದೆ. ಪರಿಚಯ ನಿಧಾನವಾಗಿ ಪ್ರೇಮಕ್ಕೆ ತಿರುಗಿದೆ. ಯುವತಿ ತನ್ನ ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಕಾರವಾರಕ್ಕೆ ವಾಪಸ್ ಬಂದಾಗ ಯುವಕ ಆಕೆಯ ಬೆನ್ನು ಬಿಡದೆ ತಾನೂ ಸಹ ಬೆಂಗಳೂರಿನಿಂದ ಕಾರವಾರಕ್ಕೆ ಆಗಮಿಸಿ ಅಲ್ಲಿ ತನ್ನದೇ ಧರ್ಮದ ಉತ್ತರಭಾರತ ಮೂಲದ ಹೇರ್ ಸಲೂನ್‌ವೊಂದರಲ್ಲಿ ಕೆಲಸಕ್ಕೆ ನಿಂತಿದ್ದಾನೆ.

ಯುವಕ ಬೈಕ್ ಮೇಲೆ ತಿರುಗುತ್ತಾ, ದುಬಾರಿ ಬಟ್ಟೆ ಧರಿಸಿ ಶೋಕಿ ಮಾಡುತ್ತಿದ್ದ ಎನ್ನಲಾಗಿದೆ. ಈತನಿಗೆ ಹಣವನ್ನು ಯಾರೋ ಕೊಡುತ್ತಿದ್ದ ಸಂಶಯವಿದ್ದು ಇದು ಸಹ ‘ಲವ್ ಜಿಹಾದ್’ ಇರಬಹುದು ಎಂಬ ಆರೋಪ ಕೇಳಿ ಬಂದಿದೆ.ಯುವತಿ ಈತನನ್ನು ಸುಮಾರು 6 ತಿಂಗಳ ಕಾಲ ಕಾರವಾರದಲ್ಲಿ ಭೇಟಿಯಾಗುತ್ತಿದ್ದರೂ ಆಕೆಯ ಮನೆಯವರಿಗೆ ತಿಳಿದಿರಲಿಲ್ಲ ಎನ್ನಲಾಗಿದೆ. ಒಂದು ದಿನ ಈಕೆ ತಾನು ಬಿಹಾರಿ ಮುಸ್ಲಿಂ ಕ್ಷೌರಿಕ ಯುವಕನನ್ನು ಮದುವೆಯಾಗುವುದಾಗಿ ತಿಳಿಸಿದಾಗ ಆಕೆಯ ಕುಟುಂಬದವರು ಹೌಹಾರಿ ವಿರೋಧಿಸಿದ್ದಾರೆ.

ಆತನಿಗೆ ಹೊಟ್ಟೆಪಾಡಿಗೆ ಸರಿಯಾದ ಉದ್ಯೋಗವಿಲ್ಲ. ಆತ ಇನ್ನೊಬ್ಬರ ಅಂಗಡಿಯಲ್ಲಿ ಕ್ಷೌರಿಕ ಕೆಲಸ ಮಾಡುತ್ತಿದ್ದಾನೆ.ನಿನ್ನಂತಹ ಶ್ರೀಮಂತ ಹಿನ್ನಲೆಯ ಯುವತಿ ಆತನನ್ನು ಮದುವೆಯಾದರೆ ಮುಂದೆ ಜೀವನ ನಡೆಸುವುದು ನಿನಗೆ ಕಷ್ಟವಾಗಬಹುದು. ಅದರಲ್ಲೂ ಅನ್ಯ ಧರ್ಮೀಯನ ಜೊತೆ ಮದುವೆ ಬೇಡವೇ ಬೇಡ ಎಂದು ಮನೆಯವರು ಪಟ್ಟು ಹಿಡಿದರು ಎನ್ನಲಾಗಿದೆ. ಪ್ರೇಮದಲ್ಲಿ ಕುರುಡಾಗಿದ್ದ ಯುವತಿ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.ಮಾತವಲ್ಲ ಆಕೆ ತನ್ನ ಕುಟುಂಬದವರ ಮಾತಿಗೆ ಸೊಪ್ಪು ಹಾಕಿಲ್ಲ ಎನ್ನಲಾಗಿದೆ. ಈ ನಡುವೆ ಇಬ್ಬರೂ ಮದುವೆಯಾಗಿ ಬೆಂಗಳೂರಿಗೆ ತೆರಳಿದ್ದಾಳೆ. ಅಲ್ಲಿ ಆಕೆ ಯಾವುದೇ ಕೆಲಸಕ್ಕೆ ಸೇರದಿದ್ದರೂ ಯುವಕ ಅಲ್ಲಿನ ಹೇರ್ ಕಟಿಂಗ್ ಸಲೂನ್ ನಲ್ಲಿ ಮತ್ತೆ ಕ್ಷೌರಿಕ ವೃತ್ತಿಯನ್ನು ಮುಂದುವರಿಸಿದ್ದಾನೆ ಎನ್ನಲಾಗಿದೆ.ಪ್ರೀತಿ ಕುರುಡು ಎಂಬಂತೆ ಯುವತಿ ಮಾತ್ರ ಗೊತ್ತಿದ್ದೋ, ಗೊತ್ತಿಲ್ಲದೆಯೋ ಬಿಹಾರಿ ಯುವಕನ ಜಾಲಕ್ಕೆ ಬಲಿಯಾಗಿದ್ದಾಳೆ ಎಂಬ ಮಾತು ಹರಡಿದೆ.

ಇದನ್ನೂ ಓದಿ