ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಉಪ ತಹಸೀಲ್ದಾರ ಹಾಗೂ ಶಿರಸ್ತೇದಾರರ ಕೇಂದ್ರ ಸಂಘ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಕುಮಟಾ ತಹಸಿಲ್ದಾರ ಕಚೇರಿಯ ಶಿರಸ್ತೇದಾರರಾದ ಜಗದೀಶ್ ಪೂಜಾರಿ ಅವರನ್ನು ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆ ಆಗಿದ್ದು
ಈ ನಿಟ್ಟಿನಲ್ಲಿ ಕುಮಟಾ ತಾಲೂಕು ಕಚೇರಿಯಲ್ಲಿ ಶಿರಸ್ತೇದಾರರಾದ ಜಗದೀಶ್ ಪೂಜಾರಿ ಅವರನ್ನು ಕಂದಾಯ ನೌಕರರ ಸಂಘ, ತಾಲೂಕು ನೌಕರರ ಸಂಘ, ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರೇಡ್ 2ತಹಶಿಲ್ದಾರ ಸತೀಶ ಗೌಡ, ತಾಲೂಕು ನೌಕರರ ಸಂಘದ ಅಧ್ಯಕ್ಷ ವಿನಾಯಕ ಭಂಡಾರಿ, ಶಿರಸ್ತೆದಾರ ಟಿ.ಎಸ್ ಗಾಣಿಗೇರ್, ಸಾಮಂತ, ಉಷಾ ನಾಯ್ಕ, ಸಿಬ್ಬಂದಿಗಳಾದ ಶಿವಾನಂದ ಹಳೊಳ್ಳಿ , ಲಕ್ಷ್ಮಣ ಪಾವಸ್ಕರ್, ತುಳಸಿ ಸೇರಿದಂತೆ ಇತರರು ಇದ್ದರು.
ಇದನ್ನೂ ಓದಿ
- ಹೊನ್ನಾವರ ಬಂಗಾರದ ಆಭರಣ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು; ₹17.08 ಲಕ್ಷ ಮೌಲ್ಯದ ಚಿನ್ನ ಜಪ್ತಿ, ಇಬ್ಬರ ಬಂಧನ
- ಲಾರಿ ಕಳ್ಳತನ ಪ್ರಕರಣದ ಬೆಳಗಾವಿ ಮೂಲದ ಆರೋಪಿ ಬಂಧನ; ಹಳಿಯಾಳ ಪೊಲೀಸರ ಕಾರ್ಯಾಚರಣೆ
- ಶಿರಸಿಯಲ್ಲಿ ಜೂನ್ 16ರಂದು ಅಕ್ರಮ ಸಾರಾಯಿ, ಡ್ರಗ್ಸ್ ವಿರುದ್ಧ ಪ್ರತಿಭಟನೆ
- ಹೈಟೆಕ್ ತಂತ್ರಕ್ಕೆ ಸಿಕ್ಕಿಬಿದ್ದ ಜೂಜುಕೋರರು; ಡ್ರೋಣ್ ಮೂಲಕ ಪತ್ತೆಯಾದ ಇಸ್ಪೀಟ್ ಅಡ್ಡೆ

