ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ : ಶಾಸಕ ಭೀಮಣ್ಣ ನಾಯ್ಕ ಅವರ ಪ್ರಯತ್ನದಿಂದಾಗಿ ಬಿ ಹಾಗೂ ಇ ಖಾತಾ ನೋಂದಾವಣೆಗೆ ಉಂಟಾದ ಸಮಸ್ಯೆ ನಿವಾರಣೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ವಿಶೇಷ ಆದೇಶ ಹೊರಡಿಸಲಾಗಿದೆ.
ರಾಜ್ಯಾದ್ಯಂತ ಬಿ ಹಾಗೂ ಇ ಖಾತೆಯ ಪಟ್ಟಾ ವಿತರಣೆ ಕಾರ್ಯವನ್ನು ಪೌರಾಡಳಿತ ಇಲಾಖೆಯ ವತಿಯಿಂದ ಭರದಿಂದ ಸಾಗುತ್ತಿದ್ದು, ಬಿ ಹಾಗೂ ಇ ಖಾತೆಯ ಪಟ್ಟಾವನ್ನು ಪಡೆದ ಫಲಾನುಭವಿಗಳಿಗೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಬಿ ಹಾಗೂ ಇ ಖಾತೆಯನ್ನು ನೋಂದಣಿಗೆ ಸಮಸ್ಯೆ ಉಂಟಾಗುತ್ತಿತ್ತು.
ಶಾಸಕರಾದ ಭೀಮಣ್ಣ ನಾಯ್ಕ ಅವರು ಈ ಸಮಸ್ಯೆ ಕುರಿತು ಫಲಾನುಭವಿಗಳಿಂದ ಮಾಹಿತಿಯನ್ನು ಪಡೆದುಕೊಂಡು ದಿನಾಂಕ 11.03.2025 ರಂದು ಕಂದಾಯ ಸಚಿವರಾದ ಶ್ರೀ ಕೃಷ್ಣ ಭೈರೇಗೌಡ ಅವರನ್ನು ಭೇಟಿಯಾಗಿ ಈ ಸಮಸ್ಯೆ ಕುರಿತು ವಿಸ್ತೃತವಾಗಿ ವಿವರಿಸಿ ಸಮಸ್ಯೆ ಪರಿಹರಿಸುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.
ಶಾಸಕರ ಮನವಿಯನ್ನು ಸ್ವೀಕರಿಸಿದ ಸಚಿವರು ಉಪ ನೋಂದಣಿ ಕಚೇರಿಯಲ್ಲಿ ಉಲ್ಬಣಿಸಿದ ಸಮಸ್ಯೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ವಿಶೇಷ ಸುತ್ತೋಲೆಯನ್ನು ತಂದು ” ಪೌರಾಡಳಿತ ಇಲಾಖೆಯಿಂದ ಬಿ ಹಾಗೂ ಇ ಖಾತೆಯನ್ನು ಪಟ್ಟಾವನ್ನು ಪಡೆದ ಫಲಾನುಭವಿಗಳ ಬಗ್ಗೆ ಇ – ತಂತ್ರಾಂಶದಿಂದ ಮಾಹಿತಿಯನ್ನು ಪಡೆದು ಬಿ ಹಾಗೂ ಇ ಖಾತೆ ಇದ್ದರೂ ಸಹ ನೋಂದಾಣಿ ಮಾಡಲು ಸೂಚಿಸಿ ” ಇಂದು ವಿಶೇಷ ಆದೇಶವನ್ನು ಹೊರಡಿಸಿದ್ದಾರೆ.
ಇದನ್ನೂ ಓದಿ
- ಹೊನ್ನಾವರ ಬಂಗಾರದ ಆಭರಣ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು; ₹17.08 ಲಕ್ಷ ಮೌಲ್ಯದ ಚಿನ್ನ ಜಪ್ತಿ, ಇಬ್ಬರ ಬಂಧನ
- ಲಾರಿ ಕಳ್ಳತನ ಪ್ರಕರಣದ ಬೆಳಗಾವಿ ಮೂಲದ ಆರೋಪಿ ಬಂಧನ; ಹಳಿಯಾಳ ಪೊಲೀಸರ ಕಾರ್ಯಾಚರಣೆ
- ಶಿರಸಿಯಲ್ಲಿ ಜೂನ್ 16ರಂದು ಅಕ್ರಮ ಸಾರಾಯಿ, ಡ್ರಗ್ಸ್ ವಿರುದ್ಧ ಪ್ರತಿಭಟನೆ
- ಹೈಟೆಕ್ ತಂತ್ರಕ್ಕೆ ಸಿಕ್ಕಿಬಿದ್ದ ಜೂಜುಕೋರರು; ಡ್ರೋಣ್ ಮೂಲಕ ಪತ್ತೆಯಾದ ಇಸ್ಪೀಟ್ ಅಡ್ಡೆ

