ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು: ರಾಜ್ಯ ಅಬಕಾರಿ ಇಲಾಖೆಯಲ್ಲಿ ಕಳೆದ ಆರು ದಿನಗಳ ಹಿಂದೆ 34ಮಂದಿ ಅಬಕಾರಿ ಸಬ್ಇನ್ಸ್ಪೆಕ್ಟರ್ಗಳಿಗೆ ಅಬಕಾರಿ ಇನ್ಸ್ಪೆಕ್ಟರ್ ಆಗಿ ಪದೋನ್ನತಿ ನೀಡಿ ಅಬಕಾರಿ ಉಪ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಆದೇಶವಾಗಿ ಆರು ದಿನ ಕಳೆದರು ಇದುವರೆಗೂ ಪದೋನ್ನತಿ ಹೊಂದಿದ್ದ ಅಧಿಕಾರಿಗಳನ್ನ ಆಯಾ ಸ್ಥಳಗಳಿಗೆ ನಿಯೋಜಿಸಿಕೊಳ್ಳದೆ ಇರುವುದು ಸರಕಾರದ ಕಾರ್ಯವೈಖರಿ ಮೇಲೆ ಅನುಮಾನ ಹುಟ್ಟಿಸಿದೆ.
ರಾಜ್ಯದಲ್ಲಿ ಖಾಲಿ ಇದ್ದ ಸುಮಾರು 34ಅಬಕಾರಿ ನಿರೀಕ್ಷಕರ ಹುದ್ದೆಗಳಿಗೆ ಪದೋನ್ನತಿ ನೀಡಿ ಅಬಕಾರಿ ಕಮಿಷನರ್ ಜೆ.ರವಿಶಂಕರ (Excise Commissioner Ravi Shankar) ಆದೇಶ ಹೊರಡಿಸಿದ್ದರು. ಸರಕಾರದ ಯಾವುದೇ ಇಲಾಖೆಯಲ್ಲಿ ವರ್ಗಾವಣೆ ಅಥವಾ ಪದೋನ್ನತಿ ಹೊಂದಿದ ಅಧಿಕಾರಿ ಇಲಾಖೆ ಇಲ್ಲವೆ ಸಿಬ್ಬಂದಿ ಆದೇಶ ಹೊರಡಿಸಿದ ಒಂದೇರಡು ದಿನದಲ್ಲಿ ಕರ್ತವ್ಯಕ್ಕೆ ಹಾಜರಾಗುವುದು ಸರ್ವೆ ಸಾಮಾನ್ಯ,ಆದರೆ ರಾಜ್ಯ ಅಬಕಾರಿ ಆಯುಕ್ತ ಜೆ. ರವಿಶಂಕರ ಅವರು ತಮ್ಮ ಇಲಾಖೆಯ 34ಅಧಿಕಾರಿಗಳಿಗೆ ಪದೋನ್ನತಿ ನೀಡಿ ಆರು ದಿನ ಕಳೆದರು ಇದುವರೆಗೆ ಕರ್ತವ್ಯಕ್ಕೆ ಹಾಜರಾಗಲು ಅಡ್ಡಿ ಪಡಿಸಲಾಗುತ್ತಿದೆ.
ಆದೇಶ ಹೊರಡಿಸಿದ ಬೆನ್ನಲ್ಲೇ ಸಚಿವರು ಹಿರಿಯ ಅಧಿಕಾರಿಗಳಿಗೆ ಯಾರಿಗೂ ಬಿಡುಗಡೆ ನೀಡಬಾರದು, ವರದಿ ಮಾಡಿಸಿಕೊಳ್ಳಬಾರದು ಎಂದು ಸೂಚನೆ ನೀಡಿದ್ದಾರೆನ್ನಲಾಗಿದೆ.ಅಲ್ಲದೆ ಪತ್ರದ ಮುಖಾಂತರ ಮುಂದಿನ ಆದೇಶದವರೆಗೂ ಪದೋನ್ನತಿ ತಡೆ ಹಿಡಿಯಲು ಸೂಚನೆ ನೀಡಿದ್ದಾರೆನ್ನಲಾಗಿದೆ. ಈಗಾಗಲೇ ಪದ್ನೋನತಿ ಹೊಂದಿರುವ ಅಧಿಕಾರಿಗಳನ್ನ ಕರ್ತವ್ಯಕ್ಕೆ ಹಾಜರು ಪಡಿಸಿಕೊಳ್ಳದೆ ವಿಳಂಬ ಮಾಡುತ್ತಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಬಳಿ ದೂರು ನೀಡಲು ಪದೋನ್ನತಿಗೊಂಡ ಅಧಿಕಾರಿಗಳ ತಂಡ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ಪದೋನ್ನತಿಗೊಂಡ ಅಧಿಕಾರಿಗಳನ್ನ ಶೀಘ್ರದಲ್ಲಿ ಕರ್ತವ್ಯಕ್ಕೆ ಹಾಜರು ಪಡಿಸಿಕೊಳ್ಳದೆ ಇದ್ದಲ್ಲಿ. ರಾಜ್ಯ ಅಬಕಾರಿ ಇಲಾಖೆಯ ಸಚಿವರ ವಿರುದ್ದ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ..
ಪದ್ನೋನತಿ ನೀಡಿದ ಕಮೀಷನರ್ ವರ್ಗಾವಣೆ.
ಈಗಾಗಲೇ ಕಳೆದ ಆರು ದಿನಗಳ ಹಿಂದೆ ರಾಜ್ಯ ಅಬಕಾರಿ ಇಲಾಖೆಯಲ್ಲಿ 34ಮಂದಿ ಸಿಬ್ಬಂದಿಗಳಿಗೆ ಪದೋನ್ನತಿ ನೀಡಿ ರಾಜ್ಯ ಅಬಕಾರಿ ಕಮಿಷನರ್ ಡಾ. ರವಿಶಂಕ ಆದೇಶ ಹೊರಡಿಸಿದ್ದು, ಆದೇಶ ಹೊರಡಿಸಿದ ಮರುದಿನವೆ ಡಾ.ರವಿಶಂಕರ ಅವರನ್ನ ಅಬಕಾರಿ ಇಲಾಖೆಯಿಂದ ಕೃಷಿ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಈ ಎಲ್ಲಾ ಬೆಳವಣಿಗೆಯನ್ನ ಗಮನಿಸಿದರೆ. ಇದರ ಹಿಂದೆ ರಾಜ್ಯ ಅಬಕಾರಿ ಇಲಾಖೆಯ ಸಚಿವರ ಕೈವಾಡ ಇದೆ ಎನ್ನುವುದು ಮೋಲ್ನೋಟಕ್ಕೆ ಕಂಡುಬರುತ್ತಿದೆ.
ಗಮನಿಸಿ