ಸುದ್ದಿಬಿಂದು ಬ್ಯೂರೋ ವರದಿ
Karwar: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯ ಇಂದು ಮಧ್ಯಾಹ್ನ ತೀರ್ಪು ಪ್ರಕಟಿಸಿದ್ದು,ಕಾರವಾರ ಶಾಸಕ ಸೈಲ್ಗೆ 7ವರ್ಷಗಳ ಕಾಲ ಶಿಕ್ಷೆ ಹಾಗೂ 9 ಕೋಟಿ ದಂಡ ವಿಧಿಸಿದೆ.
14 ವರ್ಷಗಳ ಹಿಂದೆ ಬೇಲೇಕೇರಿ ಬಂದರಿನಿಂದ ಕಬ್ಬಿಣದ ಅದಿರು ಕಳ್ಳತನ ಮತ್ತು ಅಕ್ರಮ ರಫ್ತು ಪ್ರಕರಣದಲ್ಲಿ ಬೆಂಗಳೂರು ನ್ಯಾಯಾಲಯವು ಕಾರವಾರ ಶಾಸಕ ಸತೀಶ್ ಸೈಲ್ ಸೇರಿ ಆರು ಮಂದಿಯನ್ನ ದೋಷಿ ಎಂದು ಪ್ರಕಟಿಸಿತ್ತು. ಕಳೆದ 2010ರಲ್ಲಿ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್ ಸೇರಿ ಏಳು ಮಂದಿಯ ವಿರುದ್ದ ಅಕ್ಟೋಬರ್ 24ರಂದು ಜನಪ್ರತಿನಿಧಿ ನ್ಯಾಯಾಲಯದ ನ್ಯಾ.ಸಂತೋಷ ಗಜಾನನ ಭಟ್ ಅವರು ಏಳು ಮಂದಿಯನ್ನ ದೋಷಿ ಎಂದು ಆದೇಶಿಸಿ ತೀರ್ಪುನ್ನ ಕಾಯ್ದಿರಿಸಲಾಗಿತ್ತು.
ಇಂದು ಶನಿವಾರ ಸತೀಶ ಸೈಲ್ ಸೇರಿ ಇನ್ನೂಳಿದ ಎಲ್ಲಾ ಆರೋಪಿಗಳಿಗೆ 7ವರ್ಷಗಳ ಕಾಲ ಶಿಕ್ಷೆ ಪ್ರಕಟ ಮಾಡಿದೆ.ಇನ್ನೂ ಜನಪ್ರತಿನಿಧಿಗಳ ತೀರ್ಪಿನ ವಿರುದ್ಧ ಶಾಸಕ ಸೈಲ್ ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.ಈ ತೀರ್ಪಿನ ಪ್ರಕಾರ ಶಾಸಕ ಸೈಲ್ ಶಾಸಕ ಸ್ಥಾನದಿಂದ ಅನರ್ಹತೆ ಆದಂತಾಗಿದೆ.
ಗಮನಿಸಿ