suddibindu.in
ಭಟ್ಕಳ : ಹೆದ್ದಾರಿ ದಾಟುತ್ತಿದ್ದ ಬಿಜೆಪಿ ಮುಖಂಡನ ಮೇಲೆ ಕಾಲೇಜು ವಾಹನ ಚಾಲಕನೋರ್ವ ಅನಾವಶ್ಯಕ ಹಲ್ಲೆ ಮಾಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದ ಶಂಸುದ್ದೀನ್ ಸರ್ಕಲ್ ಸಮೀಪ ನಡೆದಿದೆ. ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಿಜೆಪಿ ಹಿಂದುಳಿದ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಮುಚ್ಚಳ್ಳಿ ಮೂಡಭಟ್ಕಳ ನಿವಾಸಿ ರಾಘವೇಂದ್ರ ರಾಮಚಂದ್ರ ನಾಯ್ಕ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದ. ಇವರು ಹಲವು ವರ್ಷಗಳಿಂದ ಟಿ.ವಿ ಕೇಬಲ್ ಅಪರೇಟ‌ರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಂದು ಮಧ್ಯಾಹ್ನ ಗಂಟೆಯ ಸುಮಾರಿಗೆ ತನ್ನ ವೈಯಕ್ತಿಕ ಕೆಲಸ ನಿಮಿತ್ತ ಕಾರವಾರದಿಂದ ಕಾರಿನ ಮೂಲಕ ಬಂದಿದ್ದರು.

ಭಟ್ಕಳ ಶಂಸುದ್ದೀನ್ ಸರ್ಕಲ್ ಬಳಿ ಇಳಿದು ಕೋಲಾ ಪ್ಯಾರಡೈಸ್ ಸಮೀಪವಿದ್ದ ಕೇಬಲ್‌ ಕಚೇರಿಗೆ ಹೋಗಲು ಹೆದ್ದಾರಿ ದಾಟುತ್ತಿದ್ದ ವೇಳೆ ಕೋಲಾ ಪ್ಯಾರಡೈಸ್ ರಸ್ತೆಯಿಂದ ಬಂದ ಕಾಲೇಜಿನ ವಾಹನ ಅತಿವೇಗವಾಗಿ ನನ್ನ ಮೇಲೆ ಬಂತು ಎಂದು ರಾಘವೇಂದ್ರ ದೂರಿದ್ದಾರೆ.ಇದರಿಂದಾಗಿ ನಾನು ರಸ್ತೆ ಪಕ್ಕದಲ್ಲಿ ಬಿದ್ದೆ. ಬಳಿಕ ನಿನಗೆ ಕಣ್ಣು ಕಾಣಿಸುದಿಲ್ಲವ ಎಂದು ವಾಹನ ಚಾಲಕನಿಗೆ ಪ್ರಶ್ನೆ ಮಾಡಿದೆ.

ವಾಹನ ಚಾಲಕ ಬಸ್ ಅನ್ನು ಅಲ್ಲೇ ಮುಂದೆ ನಿಲ್ಲಿಸಿ ಬಂದು ನನ್ನ ಅಡ್ಡಗಟ್ಟಿ ತಡೆದು ಅವಾಚ್ಯ ಶಬ್ದದಿಂದ ಬೈದಿದ್ದು. ರಸ್ತೆ ಮೇಲೆ ತಳ್ಳಿ ಕಾಲಿನಿಂದ ಒದ್ದು ನಿನ್ನನ್ನು ಸುಮ್ಮನೆ ಬಿಡುವುದಿಲ್ಲ.ಕೊಲೆ ಮಾಡುತ್ತೇನೆ ಎಂದು ಹೊಡೆದಿದ್ದಾನೆ. ಅಲ್ಲೇ ಸಮೀಪ ಕರ್ತವ್ಯ ನಿರತ ಪೊಲೀಸರು ಸ್ಥಳಕ್ಕೆ ಬರುತ್ತಿರುವುದನ್ನು ನೋಡಿ ವಾಹನ ಚಾಲಕ ಓಡಿ ಹೋಗಿದ್ದಾನೆ. ನಂತರ ಸ್ನೇಹಿತರು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ ಎಂದು ಹಲ್ಲೆಗೊಳಗಾದ ರಾಘವೇಂದ್ರ ನಾಯ್ಕ ಆರೋಪಿಸಿದ್ದಾರೆ.

ಸದ್ಯ ಕಾಲೇಜು ವಾಹನ ಚಾಲಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಾಲಕನ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ

ರಾಘವೇಂದ್ರ ನಾಯ್ಕ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿಂದೂ ಮುಖಂಡ ಗೋವಿಂದ ನಾಯ್ಕ ಹಾಗೂ ಹಿಂದೂ ಕಾರ್ಯಕರ್ತರು ಆಸ್ಪತ್ರೆಗೆ ಭೇಟಿ ನೀಡಿ ರಾಘವೇಂದ್ರ ನಾಯ್ಕರ ಯೋಗ ಕ್ಷೇಮ ವಿಚಾರಿಸಿದ್ದಾರೆ.

ಇದನ್ನೂ ಓದಿ