suddibindu.in
ಕಾರವಾರ : ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡಕುಸಿತವಾಗಿ ಹತ್ತಕ್ಕೂ ಹೆಚ್ಚು ಮಂದಿಯನ್ನ ಬಲಿ ಪಡೆದ ಬೆನ್ನಲ್ಲೇ ಇದೀಗ ನೇರೆ ರಾಜ್ಯ ಕೇರಳದ ವಯನಾಡು ಜಿಲ್ಲೆಯ ಮೆಪ್ಪಾಡಿ, ಮುಂಡಕ್ಕೈ, ಚೂರಲ್ ಪ್ರದೇಶದಲ್ಲಿ ಗುಡ್ಡಕುಸಿತ ಉಂಟಾಗಿ ನೂರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಈ ಎರಡು ಘಟನೆಗಳು ಕೂಡ ಮಂಗಳವಾರವೆ ನಡೆದಿದ್ದು, ಮಂಗಳವಾರ ಕೇರಳ ಹಾಗೂ ಉತ್ತರಕನ್ನಡ ಜಿಲ್ಲೆಯ ಜನರ ಪಾಲಿಗೆ ‘ಅ’ ಮಂಗಳವಾಗಿದೆ.
ಮಂಗಳವಾರ ಅಂದರೆ ಮಂಗಳಕರವಾದ ವಾರ, ಆದರೆ ಮಂಗಳವಾರವೇ ಶಿರೂರು ಹಾಗೂ ವಯನಾಡಿನಲ್ಲಿ ನಡೆದಿರುವ ಘಟನೆ ಜನರ ಪಾಲಿಗೆ ಮಂಗಳವಾರ ಇದೀಗ ‘ಅ’ ಮಂಗಳವಾರವಾಗಿದೆ. ಶಿರೂರಲ್ಲಿ ಜುಲೈ 16ರಂದು ಮಂಗಳವಾರ ಬೆಳಿಗ್ಗೆ 8-30ರಿಂದ 8-45ರ ಹೊತ್ತಲ್ಲಿ ಗುಡ್ಡಕುಸಿತವಾದರೆ. ವಯನಾಡು ಜಿಲ್ಲೆಯಲ್ಲಿಯೂ ಸಹ ಮಂಗಳವಾರ 1 ಗಂಟೆಯಿಂದ 5ಗಂಟೆಯ ಸಮಯದಲ್ಲಿ ಗುಡ್ಡಕುಸಿತ ಉಂಟಾಗಿದೆ. ಶಿರೂರು ಗುಡ್ಡಕುಸಿತ ಉಂಟಾಗಿ ಅಲ್ಲೆ ಪಕ್ಕದಲ್ಲಿದ್ದ ಲಕ್ಷ್ಮಣ ನಾಯ್ಕ ಹೊಟೇಲ್ ಹಾಗೂ ಅವರದೇ ಕುಟುಂಬದ ಐವರು ಸೇರಿ ಹನ್ನೊಂದು ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಸಹ ಮೂವರ ಮೃತ ದೇಹಗಳು ಪತ್ತೆಯಾಗಬೇಕಿದೆ. ಇನ್ನೂ ಇದೆ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಕೂಡ ಪತ್ತೆಯಾಗಬೇಕಿದೆ. ಆ ಒಂದು ಜೀವಕ್ಕಾಗಿ ನೂರಾರು ಕಿಲೋಮೀಟರ್ ದೂರದಿಂದ ಅಲ್ಲಿನ ಶಾಸಕರು,ಸಂಸದರು, ಸಚಿವರು ಹಾಗೂ ಕೇರಳ ಎಲ್ಲಾ ಮಾಧ್ಯಮದವರು ಅರ್ಜುನ್ ಹುಡುಕಾಟಕ್ಕಾಗಿ ಶಿರೂರಿನಲ್ಲಿರುವಾಗಲೇ ಕೇರಳದಲ್ಲಿ ಶಿರೂರು ಮಾದರಿಯಲ್ಲೇ ಗುಡ್ಡಕುಸಿತ ಉಂಟಾಗಿ ನೂರಾರು ಜೀವಗಳನ್ನ ಬಲಿ ತೆಗೆದುಕೊಂಡಿದೆ.
ಇದನ್ನೂ ಓದಿ
- ಜೂನ್ 25ಕ್ಕೆ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ
- ಅನಂತಕುಮಾರ ಹೆಗಡೆ ಗನ್ ಮ್ಯಾನ್ ಅಮಾನತ್
- ಎಸಿ ಕಾರು ಬಿಟ್ಟು ಪಿಂಕ್ ಆಟೋದಲ್ಲಿ ಡಿಸಿ ಸಂಚಾರ..!
ಶಿರೂರು ಗುಡ್ಡಕುಸಿತಕ್ಕಿಂತ ನೂರು ಪಟ್ಟು ದೊಡ್ಡ ದುರಂತ ಕೇರಳದ ವಯನಾಡು ಜಿಲ್ಲೆಯಲ್ಲಿ ನಡೆದು ಹೋಗಿದೆ. ಅಲ್ಲಿನ ಸುರಿದ ರಣಭೀಕರ ಮಳೆಗೆ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಲೆಕ್ಕಕ್ಕಡ ಸಿಗದಷ್ಟು ಮಂದಿ ಗುಡ್ಡಕುಸಿತದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಇನ್ನೂ ಶಿರೂರು ಸೇದಂತೆ ಉತ್ತರಕನ್ನಡ ಜಿಲ್ಲೆಯ ಕರಾವಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಐಆರ್ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ವಯನಾಡನಲ್ಲಿ ನಡೆದ ಘಟನೆಯ ರೀತಿಯಲ್ಲಿಯೇ ಜಿಲ್ಲೆಯ ಕರಾವಳಿಯಲ್ಲಿ ನಡೆದೆದರು ಅಚ್ಚರಿ ಇಲ್ಲ ಎನ್ನುವಂತಾಗಿದೆ. ಶಿರೂರು ಬಳಿ ಇನ್ನೂ ಸಹ ಗುಡ್ಡಕುಸಿತ ನಡೆಯುತ್ತಲೇ ಇದೆ..
ಈಗಾಗಲೇ ವಯನಾಡು ಘಟನೆಯಲ್ಲಿ ಮೂರಕ್ಕೂ ಹೆಚ್ಚು ಗ್ರಾಮಗಳು ಕೊಚ್ಚಿ ಹೋಗಿವೆ.ಅಂದು ಕಂಡ ಮನೆ,ಮಠ ಎಲ್ಲವೂ ಸಹ ಗುಡ್ಡದ ಮಣ್ಣಿನ ಅಡಿಯಲ್ಲಿ ಸಿಲುಕಿ ಗ್ರಾಮಕ್ಕೆ ಗ್ರಾಮವೇ ಮಣ್ಣುಪಾಲಾಗಿದೆ. ಜನರು ಹೋಗಲಾಗದಂತಹ ಸ್ಥಳದಲ್ಲಿ ಅಪಾಯದಲ್ಲಿ ಸಿಲುಕಿಕೊಂಡವರ ರಕ್ಷಣೆಗೆ ರಕ್ಷಣಾ ತಂಡಗಳು ನುಗ್ಗಿ ಕಾರ್ಯಚರಣೆಗೆ ಇಳಿದಿದೆ. ಘಟನೆಯಲ್ಲಿ ಕನ್ನಡಿಗರೆ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಕೂಡ ಇದೆ. ಘಟನೆಯಿಂದಾಗಿ ಅಲ್ಲಿರುವ ಬಹುತೇಕ ದೇವಾಲಯಗಳು ಚರ್ಚ್ಗಳು ಸಮುದಾಯಭವನಗಳು ಎಲ್ಲವೂ ಆಸ್ಪತ್ರೆಗಳಾಗಿ ಮಾರ್ಪಾಡಾಗಿದೆ..
ವಯನಾಡು ಹಾಗೂ ಶಿರೂರು ಗುಡ್ಡಕುಸಿತವನ್ನ ಕಂಡ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎಚ್ಚೇತ್ತುಕೊಳ್ಳಬೇಕಿದೆ.ಉತ್ತರಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಐಆರ್ಬಿ ಕಂಪನಿಯ ಕನಿಷ್ಠ ಹಾಗೂ ಕಳಪೆ ಮಟ್ಟದ ಕಾಮಗಾರಿಯಿಂದಾಗಿ ಈಗಾಲೇ ನೂರಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ಇನ್ನೂ ಅನೇಕ ಕಡೆಯಲ್ಲಿ ಹೆದ್ದಾರಿ ಕಾಮಗಾರಿಗಾಗಿ ಗುಡ್ಡಕೊರೆದಿರುವ ಕಾರಣ ಅದೆಷ್ಟೋ ಕಡೆಯಲ್ಲ ಗುಡ್ಡ ಬಾಯ್ ತೆರೆದುಕೊಂಡಿದೆ.ಒಂದಾನೊಂದು ವೇಳೆ ಮತ್ತೆ ಗುಡ್ಡಕುಸಿತ ಉಂಟಾದರೆ ವಯನಾಡು ಜಿಲ್ಲೆಯನ್ನೇ ಮಿರಿಸುವಂತ ಘನಘೋರ ಘಟನೆ ಈ ಐಆರ್ಬಿ ಕಂಪನಿಯಿಂದಾಗಿ ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ನಡೆದರೆ ಅಚ್ಚರಿ ಪಡಬೇಕಾಗಿಲ್ಲ.