suddibindu.in
ಬಳ್ಳಾರಿ:ಪರಿಶಿಷ್ಟ ವರ್ಗದ ಅಭಿವೃದ್ಧಿ ಇಲಾಖೆಯ ಮಾಜಿ ಸಚಿವ ಬಿ.ನಾಗೇಂದ್ರ ಅವರ ಬಳ್ಳಾರಿ ನಿವಾಸದ ಮೇಲೆ ಇಂದು ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ.
ರಾಜ್ಯ ವಾಲ್ಮೀಕಿ ನಿಗಮದ 94 ಕೋಟಿ ರೂಗಳ ಅಕ್ರಮ ವರ್ಗಾವಣೆ ಪ್ರಕರಣದ ಸಂಬಂಧ ಬೆಂಗಳೂರಿನಿಂದ ಎಂಟು ಜನರ ಇಡಿ ಅಧಿಕಾರಿಗಳ ತಂಡ ಇಲ್ಲಿನ ನೆಹರು ಕಾಲೋನಿಯಲ್ಲಿರುವ ನಾಗೇಂದ್ರ ಅವರ ಮನೆಗೆ ಮುಂಜಾನೆಯೇ ಆಗಮಿಸಿ ಪರಿಶೀಲನೆ ನಡೆಸಿದೆ.
ಇದನ್ನೂ ಓದಿ
- ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗಕ್ಕೆ ಅಧಿಸೂಚನೆ: ರೂಪಾಲಿ ನಾಯ್ಕ ಸ್ವಾಗತ
- ಬರ್ಗಿ ಬಳಿ ರಸ್ತೆ ಅಪಘಾತ : ಕುಮಟಾ ಮೂಲದ ಮಹಿಳೆ ಸಾವು
- ರೌಡಿಶೀಟರ್ಗಳ ಜಗಳ ಬಿಡಿಸಲು ಹೋದ ಪೊಲೀಸರಿಗೇ ಚಾಕು ಇರಿತ : ಮುರುಡೇಶ್ವರದಲ್ಲಿ ತಡರಾತ್ರಿ ಘಟನೆ
ನಾಗೇಂದ್ರ ಮತ್ತವರ ಮನೆಯವರು ಇಲ್ಲಿ ಇರದ ಕಾರಣ ಮನೆಯಲ್ಲಿನ ಸಿಬ್ಬಂದಿ ಮತ್ತು ಅವರ ಆಪ್ತರಿಂದ ಮಾಹಿತಿ ಸಂಗ್ರಹಿಸುತ್ತಿದೆ. ಮನೆಯಲ್ಲಿರುವ ದಾಖಲೆಗಳನ್ನು ಪರಿಶೀಲಿಸುತ್ತಿದೆ.
ಸ್ಥಳೀಯ ಪೊಲೀಸರ ನೆರವು ಪಡೆಯದ ಇಡಿ. ಸಿಆರ್ ಪಿಎಫ್ ಸಿಬ್ಬಂದಿಯಿಂದ ಭದ್ರತೆ ಪಡೆದು ದಾಳಿ ನಡೆಸಿದೆ.




