www.suddibindu.in
ಶಿರಸಿ : ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಬಸ್ನಲ್ಲಿದ್ದ ಸುಮಾರು 25ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿ ನಗರದ ಕುಮಟಾ ರಸ್ತೆಯಲ್ಲಿ ನಡೆದಿದೆ.

ಈ ಬಸ್ಸು ಮುರುಡೇಶ್ವರದಿಂದ ಶಿರಸಿ ಮಾರ್ಗವಾಗಿ ಹುಬ್ಬಳ್ಳಿ ಮೂಲಕ ಅಥಣಿಗೆ ಚಲಿಸುತ್ತಿದ್ದ ವೇಳೆ ಬೆಂಕಿ ಶಿರಸಿ ನಗರದಲ್ಲಿ ಬಸ್ ಹಿಂಬದಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಪ್ರಯಾಣಿಕರು ಒಂದು ಕ್ಷಣ ಭಯಭೀತರಾಗಿದ್ದು, ತಕ್ಷಣ ಬಸ್ ಚಾಲಕ ಸ್ಥಳದಲ್ಲೇ ಬಸ್ ನಿಲ್ಲಿಸಿದ್ದು, ತಕ್ಷಣ ಬಸ್ ನಲ್ಲಿದ್ದ ಪ್ರಯಾಣಿಕರು ಬಸ್ ಇಳಿದಿದ್ದು, ಇದರಿಂದಾಗಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಯಾಣಿಕರು ಬಸ್ ನಿಂದ ಕೇಳಗೆ ಇಳಿಯುತ್ತಿದ್ದಂತೆ ಹಿಂಬದಿ ಟೈಯರ್ ಸ್ಪೋಟಗೊಂಡಿದೆ.
ಇದನ್ನೂ ಓದಿ
- ಕಲ್ಲಮಠದ ಜೀರ್ಣೋದ್ಧಾರ ಸಮಿತಿಗೆ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ನಿಂದ 5ಲಕ್ಷ ದೇಣಿಗೆ
- ಧರ್ಮಸ್ಥಳದ ಸುತ್ತಾ ನೂರಾರು ಶವಗಳು : ನ್ಯಾಯಾಲಯದ ಎದುರು ಬೆಚ್ಚಿ ಬೀಳಿಸುವ ಹೇಳಿಕೆ
- ರಾಮತೀರ್ಥ ಗುಹೆಯಲ್ಲಿ ವಾಸವಿದ್ದ ರಷ್ಯಾ ಮಹಿಳೆ, ಮಕ್ಕಳ ರಕ್ಷಣೆ:ಗೋಕರ್ಣದಲ್ಲಿ ಅಚ್ಚರಿ ಘಟನೆ
ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದು,ಪ್ರಯಾಣಿಕರನ್ನ ಬೇರೆ ಬಸ್ ನಲ್ಲಿ ಕಳುಹಿಸಲಾಗಿದೆ.