.suddibindu.in
ಕಾರವಾರ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ಅವ್ಯವಹಾರ ಖಂಡಿಸಿ ಇಂದು ಕಾರವಾರದ ಜಿಲ್ಲಾಧಿಕಾರಿ ಕಚೇರಿ ಎಡರುಗಡೆ ಜಿಲ್ಲಾ ಬಿ.ಜೆ.ಪಿ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಗಿದ್ದು, ಈ ಸಂದರ್ಭಗಳಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರನ್ನು ಪೋಲಿಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಬಿಜೆಪಿ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ವಾಲ್ಮಿಕಿ ಅಭಿವೃದ್ಧಿ ನಿಗಮದ ಅಧಿಕಾರಿ ಲೆಕ್ಕಾಧಿಕಾರಿ ಚಂದ್ರಶೇಖರ ಅವರ ಆತ್ಮಹತ್ಯೆಯ ಸಮಗ್ರ ತನಿಖೆಗೆ ರಾಜ್ಯಸರ್ಕಾರ ಎಸ್.ಐ.ಟಿ ರಚಿಸಿ ಕೈ ತೊಳೆದು ಕೊಂಡಿದೆ.
ಇದನ್ನು ಓದಿ
- ಇಂದಿನ ರಾಶಿಫಲ ಹಾಗೂ ನಿತ್ಯದ ಪಂಚಾಂಗ
- ಮಗನಿಗೆ ಬಾತ್ರೂಮ್ನಲ್ಲಿ ಕೂಡಿ ಹಾಕಿ ತಂದೆಯಿಂದ ಚಿತ್ರಹಿಂಸೆ : ಹೆಗಡೆಯಲ್ಲಿ ಘಟನೆ
- ಕಾಂಡ್ಲಾ ವನಗಳು ಸಾಗರ ತೀರಗಳ ರಕ್ಷಾ ಕವಚ: ಎ.ಸಿ.ಎಫ್ ಕೃಷ್ಣೇ ಗೌಡ
ಅವ್ಯವಹಾರಕ್ಕೆ ಮುಖ್ಯ ಕಾರಣೀಕರ್ತರು ಸರ್ಕಾರದ ಭಾಗವಾಗಿ ಇರುವುದರಿಂದ ಎಸ್.ಐ.ಟಿ ತನೆಖೆಯಲ್ಲಿ ನ್ಯಾಯ ದೊರಕುವ ಸಾಧ್ಯತೆ ಕಡಿಮೆ ಇದೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಹಸ್ತಕ್ಷೇಪ ಎದ್ದು ಕಾಣುತ್ತಿದ್ದು, ಈ ಕೂಡಲೇ ಮುಖ್ಯಮಂತ್ರಿಗಳು ರಾಜಿನಾಮೆ ನೀಡಬೇಕು ಎಂದು ಬಿ.ಜೆ.ಪಿ ಮುಖಂಡರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಮ್.ಎಲ್.ಸಿ ಗಣಪತಿ ಉಳ್ವೇಕರ್, ಬಿ.ಜೆ.ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ, ಎಸ್.ಸಿ. ಎಸ್.ಟಿ ಮೋರ್ಚಾದ ಪದಾದಿಕಾರಿಗಳು ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.







