suddibindu.in
ಕಾರವಾರ: ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಬೈತಖೋಲ್ ಮೀನುಗಾರಿಕೆ ಬಂದರಿನ ಬಳಿ ಕುಂದಾಪುರ ಮೂಲದ ವ್ಯಕ್ತಿ ಓರ್ವನ ಶವ ಪತ್ತೆಯಾಗಿದೆ.
ಕುಂದಾಪುರ ಮೂಲದ ಯೋಗೇಶ ಟಿ.ಆರ್ (23) ಮೃತ ವ್ಯಕ್ತಿಯಾಗಿದ್ದಾನೆ. ಇಂದು ಬೆಳಿಗ್ಗೆ ಸಮುದ್ರದಲ್ಲಿ ಮೃತ ದೇಹ ತೆಲುತ್ತಿರುವುದನ್ನ ಕಂಡ ಸ್ಥಳೀಯ ಮೀನುಗಾರರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.ಬಳಿಕ ಸ್ಥಳಕ್ಕೆ ಬಂದ ಕಾರವಾರ ನಗರ ಠಾಣೆಯ ಪೊಲೀಸರು ಮೃತ ದೇಹವನ್ನ ಸಮುದ್ರದಿಂದ ಮೇಲಕ್ಕೆತ್ತಿ ಪರಿಶೀನೆ ನಡೆಸಿದ್ದಾರೆ.
ಇದನ್ನೂ ಓದಿ
- ಮಹಿಳೆಯರ ಸ್ವಾವಲಂಬನೆಗೆ ರೋಟರಿ ನೆರವು ಶ್ಲಾಘನೀಯ : ಶಾಸಕ ಭೀಮಣ್ಣ ನಾಯ್ಕ
- ಚಾಂಪಿಯನ್ ಆಗಿ ಹೊರಹೊಮ್ಮಿದ ರಂಜನ್ ಚಾಲೆಂಜರ್ಸ್ ಭಟ್ಕಳ
- ಪಿಎಸ್ಐ ಖಾದರ್ ಬಾಷಾ ವಿರುದ್ಧ ಅಕ್ರಮ ದಂಡ ವಸೂಲಿ ಆರೋಪ : ಕ್ರಮಕ್ಕೆ ಮಂಜುನಾಥ ನಾಯ್ಕ ಆಗ್ರಹ
ಈತ ಕುಂದಾಪುರದ ವ್ಯಕ್ತಿ ಎನ್ನುವುದು ಪತ್ತೆಯಾಗಿದೆ. ಈತ ನಾಪತ್ತೆ ಆಗಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಜೂನ್ 19ರಂದು ಪ್ರಕರಣ ದಾಖಲಾಗಿತ್ತು. ಇದೀಗ ಮೃತ ದೇಹ ಪತ್ತೆಯಾಗಿರುವ ಬಗ್ಗೆ ಕಾರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.




