suddibindu.in
ಕಾರವಾರ : ಯುವತಿ ಓರ್ವಳನ್ನ ವಿವಾಹವಾಗುವುದಾಗಿ ಹೇಳಿದ ಪೊಲೀಸ್ ಕಾಸ್ಸ್ಟೇಬಲ್ ಓರ್ವ ಆಕೆಯಿಂದಲ್ಲೆ 20ಲಕ್ಷ ಹಣ ಕಿತ್ತುಕೊಂಡು ವಿವಾಹವು ಆಗದೆ ತೆಗೆದುಕೊಂಡ ಹಣ ವಾಪಸ್ ನೀಡದೆ ಪಂಗನಾಮ ಹಾಕಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ನಡೆದಿದೆ.
ಮುಂಡಗೋಡು ಠಾಣೆಯ ಕಾನ್ಸ್ಟೇಬಲ್ ಗಿರೀಶ್ .ಎಸ್.ಎಮ್ ಎಂಬಾತ ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣ ಮೂಲದ ಸುಚಿತ್ರ ಎಂಬಾಕೆಯೇ ವಂಚನೆಗೊಳಗಾಗಿ ದೂರು ನೀಡಿದವರಾಗಿದ್ದಾರೆ. ಈ ಹಿಂದೆ ಸುಚಿತ್ರಾ ರವರು ಮದುವೆಯಾಗುವುದಾಗಿ ನಂಬಿಸಿದ್ದ, ವಂಚಿಸಿರುವ ಬಗ್ಗೆ ಯುವತಿ ಎಸ್.ಪಿ ವಿಷ್ಣುವರ್ಧನ್ ರವರಿಗೆ ದೂರು ನೀಡಿದ್ದರು.ದೂರು ಹಿನ್ನಲೆಯಲ್ಲಿ ಆತನನ್ನು ಕರೆಯಿಸಿ ತನಿಖೆ ಕೈಗೊಂಡಾಗ ಹಣ ಪಡೆದಿದ್ದು ಹಣ ಮರಳಿಸುತ್ತೇನೆ ಎಂದು ಒಪ್ಪಿಕೊಂಡಿದ್ದ. ಆದರೇ ಮದುವೆಯಾಗಲು ನಿರಾಕರಿಸಿದ್ದ.
ಇದನ್ನೂ ಓದಿ
- Sirsi/ಇಸಳೂರಿನಲ್ಲಿ ದುರಂತ: ಹಸುವಿನ ರಕ್ಷಣೆಗೆ ಇಳಿದ ಬಾಲಕ ನೀರಿನಲ್ಲಿ ಮುಳುಗಿ ಸಾವು
- ಪರಿಸರ ಸಂರಕ್ಷಣೆಗೆ ವಿದ್ಯಾರ್ಥಿಗಳ ಪ್ರತಿಜ್ಞೆ: ಬರ್ಗಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
- ಉತ್ತರ ಕನ್ನಡ ಸೇರಿ ಐದು ಜಿಲ್ಲೆಗಳಿಗೆ ರೆಡ್ ಅಲರ್ಟ್: ಜೂನ್ 9-10ರಂದು ಭಾರೀ ಮಳೆ ಸಾಧ್ಯತೆ
ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಅವರ ಎದುರು ಒಪ್ಪಿಕೊಂಡಂತೆ ಆ ಯುವತಿಯೆ ಹಣ ವಾಪಸ್ ಮಾಡಿರಲಿಲ್ಲ ಹಣ ಮರಳಿಸದೇ ಇರುವುದರಿಂದ ಯುವತಿ ಕಾಸ್ಸ್ಟೇಬಲ್ ವಿರುದ್ದ ಮುಂಡಗೋಡು ಠಾಣೆಯಲ್ಲಿ ವಂಚನೆ ದೂರು ನೀಡಿದ್ದು ಮುಂಡಗೋಡು ಪೊಲೀಸರು ಕಲಂ 420 ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.




