suddibindu.in
ಹೊನ್ನಾವರ: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪ್ರಯಾಣಿಕನೋರ್ವ ಹೃದಯಾಘದಿಂದ ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕವಲಕ್ಕಿಯಿಂದ ಹೊನ್ನಾವೆಕ್ಕೆ ಚಲಿಸುತ್ತಿದ್ದ ಬಸ್‌ನಲ್ಲಿ ನಡೆದಿದೆ

ಕೃಷ್ಣ ಶೆಟ್ಟಿ ಹಡಿನಬಾಳ(ಅವಲ್ಕಿ ಮಿಲ್ ಮಾಲೀಕ) ಎಂಬಾತನೆ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವ ಪ್ರಯಾಣಿಕನಾಗಿದ್ದಾನೆ‌. ಪ್ರಯಾಣಿಕ ಬಸ್‌ನಲ್ಲಿ ಕುಸಿದು ಬಿದ್ದ ತಕ್ಣಣ ಬಸ್ ಚಾಲಕ ಮೋಹನ್ ನಾಯ್ಕ ಅವರು
ಎಲ್ಲಾ ಪ್ರಯಾಣಿಕರನ್ನ ಅರ್ಧದಲ್ಲೆ‌ ಇಳಿಸಿ ನೇರವಾಗಿ ಬಸ್‌ನ್ನ ಹೊನ್ನಾವರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾನೆ.

ಇದನ್ನೂ ಓದಿ

ಆಸ್ಪತ್ರೆಗೆ ಹೋದ ಬಳಿಕ ಹೃದಯಾಘಾತಕ್ಕೆ ಒಳಗಾದ ಪ್ರಯಾಣಿಕನ್ನ ವೈದ್ಯರು ತಪಾಸಣೆ ಮಾಡಿದ್ದು, ಅಷ್ಟರಲ್ಲೆ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.