suddibindu.in
Kumta : ಕುಮಟಾ :ಮಿಕ್ಸಿಯಲ್ಲಿ ಮಸಾಲೆ ರುಬ್ಬುಲು ಹೋದವರಿಗೆ ಕಾಳಿಂಗ ಸರ್ಪ ಬಿಡದೆ ಮಸಲೆ ರುಬ್ಬಲು ಹೋದವರೆ ಕಾಳಿಂಗ ಸರ್ಪವನ್ನ ಕಂಡು ಮನೆಯಿಂದ ಓಡಿ ಹೋದ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಯಲವಳ್ಳಿಯಲ್ಲಿ ನಡೆದಿದೆ.
ಕುಮಟಾ ತಾಲೂಕಿನ ಯಲವಳ್ಳಿಯ ಗಣೇಶ್ ಭಟ್ಟ ಅವರ ಮನೆಯ ಅಡುಗೆ ಕೋಣೆಯಲ್ಲಿ ಮಿಕ್ಸರ್ ಮೇಲೆ ಸುರುಳಿ ಸುತ್ತಿ ಮಲಗಿರುವುದು ಕಂಡು ಬಂದಿದೆ. ಚಹ ಮಾಡಲೆಂದು ಅಡುಗೆ ಕೋಣೆ ಬಂದಾಗ ಕಪ್ಪಗಾಗಿರುವ ನೀಳವಾದ ದೇಹವನ್ನು ಕಂಡು ಕೇರೆ ಹಾವೆಂದು ತಿಳಿದು ತುಂಬಾ ಸಮೀಪದಿಂದ ಮನೆಯ ಹೋರಗೆ ಓಡಿಸಲು ಪ್ರಯತ್ನಿಸಿದಾಗ ಹಾವು ಹೆಡೆ ಬಿಚ್ಚಿದೆ.
ಇದನ್ನೂ ಓದಿ
- Murder/200ರೂ ಕೂಲಿ ಹಣಕ್ಕೆ ಬೀದಿಯಲ್ಲಿ ಬಿತ್ತು ಹೆಣ : ಉತ್ತರ ಕನ್ನಡದಲ್ಲಿ ಭೀಕರ ಘಟನೆ
- ಕಡಲತೀರದಲ್ಲಿ ಜಿಂಕೆಯ ಮೃತದೇಹ ಪತ್ತೆ
- ಹಟ್ಟಿಕೇರಿಯಲ್ಲಿ ಗ್ರಾಮೀಣ ಕ್ರೀಡೆಗೆ ಜೀವ ತುಂಬಿದ ಕೇಸರುಗದ್ದೆ ಕ್ರೀಡಾಕೂಟ
10ಅಡಿಯ ಕಾಳಿಂಗ ಸರ್ಪವನ್ನ ಉರಗ ತಜ್ಞರಾದ ಪವನ್ ನಾಯ್ಕ ಆ ಕಾಳಿಂಗ ಸರ್ಪವನ್ನ ಹಿಡಿದು ಸಮೀಪದ ಅರಣ್ಯಕ್ಕೆ ಬಿಡಲಾಗಿದೆ.ಇದರ ಸಂಪೂರ್ಣ ಕಾರ್ಯಾಚರಣೆಯನ್ನು ಹೆಸರಾಂತ ಗೋಪಿ ಜೊಲಿ ಜಾಲಿಯವರು ತಮ್ಮ ಕೆಮರಾದಲ್ಲಿ ಸೆರೆಹಿಡಿದಿದ್ದಾರೆ
.