suddibindu.in
Sirsi:ಶಿರಸಿ: ಉತ್ತರಖಂಡದಲ್ಲಿ ಹವಾಮಾನ ವೈಪರೀತ್ಯದಿಂದ ಸಂಭವಿಸಿದ ಹಿಮಪಾತದಲ್ಲಿ (Death due to snowfall in Uttarakhand)ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಜಾಗನಳ್ಳಿ ಯುವತಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ,

ಉತ್ತರ ಕಾಶಿಯ (uttra kashi) ಮೂವ ಜೊತೆಯಲ್ಲಿ ಸೇರಿಕೊಂಡು ಬೆಂಗಳೂರಿನಿಂದ 18, ಪುಣೆಯಿಂದ ಒಬ್ಬರು ಜೊತೆ ತೆರಳಿದ್ದರು. ಇವರೊಂದಿಗೆ ಜಾಗನಹಳ್ಳಿ ಮೂಲದ ಬೆಂಗಳೂರು ನಿವಾಸಿ, ಗೂಗಲ್ , (Google company employee )ಮಾಡುತ್ತಿದ್ದ ಪದ್ಮನಿ ಹೆಗಡೆ (35)ಅವರು ಮೃತರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ

ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಪದ್ಮಿನಿ ಟ್ರಕಿಂಗ್‌ ಹವ್ಯಾಸ ಹೊಂದಿದವಳಾಗಿದ್ದಾಳೆ ಅವರ ತಂದೆ ಮೃತರಾಗಿದ್ದು,ತಾಯಿ ಶೈಲಜಾ ಮತ್ತು ಸಹೋದರಿ ಮುಂಬೈನಲ್ಲಿ ವಾಸವಾಗಿದ್ದಾರೆ.ರಜಾ ದಿನಗಳಲ್ಲಿ, ಹವ್ಯಾಸಕ್ಕಾಗಿ ತಂಡದೊಂದಿಗೆ ಟ್ರಕಿಂಗ್‌ ಮಾಡುತ್ತಿದ್ದ ಪದ್ಮಿನಿ, ಬೆಂಗಳೂರಿನ ಮೌಂಟೇನಿಯರಿಂಗ್‌ ಫೌಂಡೇಶನ್‌ (Mountaineering Foundation) ಮೇ 29ರಿಂದ ಜೂ.7ರವರೆಗೆ ಆಯೋಜಿಸಿದ್ದ ಭಟವಾಡಿ ಮಲ್ಲಾ ಕುಶಕಲ್ಯಾಣ ಸಹಸ್ತ್ರತಾಲ್‌ ಟ್ರಕಿಂಗ್‌ ನಲ್ಲಿ ಪಾಲ್ಗೊಂಡಿದ್ದರು.

ಅವರೊಂದಿಗೆ ರಾಜ್ಯದ 17ಜನ ಸಹ ತೆರಳಿದ್ದರು ಎನ್ನಲಾಗಿದೆ. ಚಾರಣಕ್ಕೆ ತೆರಳುವ ಬಗ್ಗೆ ಕುಟುಂಬದ ಸದಸ್ಯರಿಗೂ ಪದ್ಮಿನಿ ಹೆಗಡೆ ಹೆಚ್ಚಿನ ಮಾಹಿತಿ ನೀಡಿರಲಿಲ್ಲ. ಪ್ರವಾಹದಲ್ಲಿ ಸಿಲುಕಿದವರಲ್ಲಿ ಅವರೂ ಪ್ರಸ್ತಾಪವಾಗಿರುವುದು ಆತಂಕಕ್ಕೆ ಕಾರಣವಾಗಿದೆ.