suddibindu.in
ಕುಮಟಾ : ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ಎದುರಿಗೆ ಬಂದ ಆಕಳ ಕರು ತಪ್ಪಿಸಲು ಹೋಗಿ ಬೈಕ್ ಪಲ್ಟಿಯಾಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ದೀವಳ್ಳಿಯಲ್ಲಿ ನಡೆದಿದೆ.
ಕೆಕ್ಕಾರದ ರತ್ನಾಕರ ರಾಮ ಗೌಡ (27) ಗಂಭೀರವಾಗಿ ಗಾಯಗೊಂಡ ಯುವಕನಾಗಿದ್ದಾನೆ. ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಎದುರಿನಿಂದ ಆಕಳು ಕರು ಒಂದು ಅಡ್ಡ ಬಂದಿದೆ. ಈ ವೇಳೆ ಬೈಕ್ ಸವಾರ ಆಕಳು ಕರುವನ್ನ ತಪ್ಪಿಸಲು ಪ್ರಯತ್ನಿಸಿದ್ದಾನೆ.
ಇದನ್ನೂ ಓದಿ
- ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗಕ್ಕೆ ಅಧಿಸೂಚನೆ: ರೂಪಾಲಿ ನಾಯ್ಕ ಸ್ವಾಗತ
- ಬರ್ಗಿ ಬಳಿ ರಸ್ತೆ ಅಪಘಾತ : ಕುಮಟಾ ಮೂಲದ ಮಹಿಳೆ ಸಾವು
- ರೌಡಿಶೀಟರ್ಗಳ ಜಗಳ ಬಿಡಿಸಲು ಹೋದ ಪೊಲೀಸರಿಗೇ ಚಾಕು ಇರಿತ : ಮುರುಡೇಶ್ವರದಲ್ಲಿ ತಡರಾತ್ರಿ ಘಟನೆ
ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರನಿಗೆ ತಕ್ಷಣ ಕುಮಟಾ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.




