ಸುದ್ದಿಬಿಂದು ಬ್ಯೂರೋ ವರದಿ
Sirsi/ಶಿರಸಿ: ನಗರದಲ್ಲಿ‌ ಮನೆಯೊಂದನ್ನ ಕಳ್ಳತನ ಮಾಡಿ ತಪ್ಪಿಸಿಕೊಂಡಿದ ಆರೋಪಿಯನ್ನ ಮಾರ್ಕೇಟ್ ಠಾಣೆಯ ಪೊಲೀಸರು ಬಂಧಿಸಿ‌ ನಗದು ಹಾಗೂ ಚಿನ್ನಾಭರಣವನ್ನ ವಶಕ್ಕೆ ಪಡೆದಿದ್ದಾರೆ.

ಖಾಲಿದ್ ಶರೀಪಸಾಬ್ ಕನವಳ್ಳಿ ಎಂಬಾತನೆ ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ ಸುಮಾರು 85,000 ನಗದು ಹಾಗೂ 60,000 ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಶಿರಸಿಯ ಕರೆಗುಂಡಿ ರಸ್ತೆಯಲ್ಲಿರುವ‌ ಮನೆ ಬಾಗಿಲು ಒಡೆದು ಮನೆಯೊಳಗಿದ್ದ ನಗದು ಹಾಗೂ ಚಿನ್ನಾಭರಣ ಕಳ್ಳತನ ಪರಾರಿಯಾಗಿದ್ದ. ಬಗ್ಗೆ Market ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿತ್ತು. ಪ್ರಕರಣ‌‌ ದಾಖಲಾಗುತ್ತಿದ್ದಂತೆ ಪೊಲೀಸರು‌ ತನಿಖೆಗೆ‌ ಚುರುಕುಗೊಳಿಸಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯಿಂದ ಮೂರು ಸ್ಕೂಟಿಗಳು ವಶಕ್ಕೆ ಪಡೆಯಲಾಗಿದೆ. ಆರೋಪಿಯು ಶಿರಸಿ ತಾಲೂಕಿನ ಆರೆಕೊಪ್ಪ ಹಾಲಿ ಇಂದಿರಾ ನಗರದ ನಿವಾಸಿಯಾಗಿದ್ದಾನೆ.

ಡಿವೈಸಿಪಿ ಗೀತಾ ಪಾಟೀಲ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಶಶಿಕಾಂತ ವರ್ಮಾ ಅವರ ನೇತೃತ್ವದಲ್ಲಿ ಮುಂದುವರಿಸಲಾಯಿತು. ತಂಡದಲ್ಲಿ ಪಿಎಸ್‌ಐ ರಾಜಕುಮಾರ ಉಕ್ಕಲಿ, ಪಿಎಸ್‌ಐ ರತ್ನಾ ಕುರಿ, ಮತ್ತು ಸಿಬ್ಬಂದಿಗಳಾದ ಬಸವರಾಜ ಮ್ಯಾಗೇರಿ, ಮಂಜುನಾಥ ಕೆಂಚರೆಡ್ಡಿ, ಪ್ರಸಾದ್, ಸಂದೀಪ ನಿಂಬಾಯಿ, ರಾಕೇಶ್ ಎನ್. ಎಚ್., ನರೇಂದ್ರ ಎನ್., ದಯಾನಂದ, ದರ್ಶನ ಮತ್ತು ಖಾದರ್ ಪಾಲ್ಗೊಂಡಿದ್ದರು.