suddibindu.in
ಕಾರವಾರ: ಬಿಸಿಲಿನಲ್ಲಿ ತಾಪಮಾನಕ್ಕೆ ಬೇಸತ್ತಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಸೇರಿದಂತೆ ಮಲೆನಾಡು,ಬಯಲು ಸೀಮೆಯ ತಾಲೂಕಿನಲ್ಲಿ ವರುಣನ ಅಬ್ಬರಿಸಿದ್ದಾನೆ, ಜಿಲ್ಲೆಯಲ್ಲಿ ಗಾಳಿ ಸಹಿತ ಮಳೆಯಾಗಿದೆ.
- ಮಹಿಳೆಯರ ಸ್ವಾವಲಂಬನೆಗೆ ರೋಟರಿ ನೆರವು ಶ್ಲಾಘನೀಯ : ಶಾಸಕ ಭೀಮಣ್ಣ ನಾಯ್ಕ
- ಚಾಂಪಿಯನ್ ಆಗಿ ಹೊರಹೊಮ್ಮಿದ ರಂಜನ್ ಚಾಲೆಂಜರ್ಸ್ ಭಟ್ಕಳ
- ಪಿಎಸ್ಐ ಖಾದರ್ ಬಾಷಾ ವಿರುದ್ಧ ಅಕ್ರಮ ದಂಡ ವಸೂಲಿ ಆರೋಪ : ಕ್ರಮಕ್ಕೆ ಮಂಜುನಾಥ ನಾಯ್ಕ ಆಗ್ರಹ
ಬಿಸಿಲಿನ ತಾಪವನ್ನು ಅನುಭವಿಸಿದ್ದ ಜನರಿಗೆ ಮಳೆರಾಯನ ಅಬ್ಬರದಿಂದ ಖುಷಿಯಾಗಿದೆ. ಅದರೇ ಗಾಳಿ ಸಹಿತ ಮಳೆಯಿಂದ ಉತ್ತರ ಕನ್ನಡ ಜಿಲ್ಲೆಯ ಜನರು ಆತಂಕಗೊಂಡಿದ್ದಾರೆ. ಏಕಾಏಕಿ ವರುಣನ ಅಬ್ಬರ ಜೋರಾಗಿದ್ದು, ಬಿಸಿಲಿನ ತಾಪದ ಬೆನ್ನಲ್ಲೇ ಮಳೆರಾಯನ ಅಬ್ಬರ ಜಿಲ್ಲೆಯ ಜನರನ್ನು ತಬ್ಬಿಬ್ಬು ಮಾಡಿದೆ.
ಉತ್ತರ ಕನ್ನಡ ಜಿಲ್ಲಾದ್ಯಂತ ಬಹುತೇಕ ಗುಡುಗು ಸಹಿತ ಮಳೆಯಾಗಿದ್ದು, ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಗಾಳಿ ಮಳೆಗೆ ಅನೇಕ ಕಡೆಯಲ್ಲಿ ಮರಗಳು ನೆಲಕ್ಕುರುಳಿದೆ. ಗಾಳಿ ಮಳೆಗೆ ಹಲವೆಡೆಯಲ್ಲಿ ವಿದ್ಯುತ್ ಕಂಬಗಳಿ ಸಹ ನೆಲ್ಕುರುಳಿದ್ದು, ವಿದ್ಯುತ್ ಕೈಕೊಟ್ಟಿದೆ. ಇನ್ನೂ ಕೆಲವು ಕಡೆಯಲ್ಲಿ ವಿದ್ಯುತ್ ಕಣ್ಣುಮುಚ್ಚಾಲೆ ಉಂಟಾಗಿದೆ.




