suddibindu.in
ಬೆಂಗಳೂರು: ಮಹಿಳೆಯೋರ್ವಳ ಅಪಹರಣ ಮಾಡಲಾಗಿದೆ ಎನ್ನುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಜಾಮೀನು ಸಿಕ್ಕಿದ್ದು,ಆದರೆ ನಾಳೆ ಬಿಡುಗಡೆ ಭಾಗ್ಯ ಸಿಗಲಿದೆ.
- ಬರ್ಗಿಯಲ್ಲಿ ತಪ್ಪಿದ್ದ ಮತ್ತೊಂದು ಬೆಂಕಿ ದುರಂತ
- ನಿವೃತ್ತ PWD ಅಧಿಕಾರಿ ಅಳ್ವೆಕೋಡಿಯ ಜೈಯಂತ ಪಟಗಾರ ವಿಧಿವಶ
- ದೀಪಾವಳಿ ಹಬ್ಬಕ್ಕೆ ಅಂದರ್ ಬಾಹರ್ ಆಟಕ್ಕೆ ಅನುಮತಿ ಕೊಡಿ..!
ಜನಪ್ರತಿನಿಧಿ ನ್ಯಾಯಾಲಯದಲ್ಲಿ ಬೆಳಿಗ್ಗೆಯಿಂದ ನಡೆದ ಕಲಾಪದಲ್ಲಿ ಈಗಷ್ಟೇ ಜಾಮೀನು ನೀಡಿ, ನ್ಯಾಯಾಧೀಶರಾದ ಸಂತೋಷ ಗಜಾನನ ಭಟ್ ಅವರು ಆದೇಶ ನೀಡಿದ್ದಾರೆ. ರೇವಣ್ಣ ಅವರ ಪರವಾಗಿ ಸಿ.ವಿ.ನಾಗೇಶ ಅವರು ವಾದ ಮಂಡಿಸಿದ್ದರು. ಜಾಮೀನು ಸಿಕ್ಕ ನಂತರ ನ್ಯಾಯವಾದಿ ನಾಗೇಶ ಮಾತನಾಡಿ, ಇದು ರಾಜಕೀಯ ದುರುದ್ದೇಶದಿಂದ ಪ್ರಕರಣ ದಾಖಲಾಗಿತ್ತೆಂದು ಹೇಳಿದರು.