suddibindu.in
ಕಾರವಾರ : ರಾಜ್ಯದಲ್ಲಿ ಸದ್ದು ಮಾಡಿರುವ ಪ್ರಜ್ಚಲ್ ರೇವಣ್ಣ,ಅಶ್ಲೀಲ್ ವಿಡಿಯೋ ಪ್ರಕರಣ ರಾಜಕಾರಣದಲ್ಲಿ ವ್ಯಾಪಕ ಚರ್ಚೆ ಆಗತ್ತಿದೆ. ಈ ಬಗ್ಗೆ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ದೇಶದಲ್ಲಿ ಉಜ್ವಲ ಯೋಜನೆ ಬದಲಿಗೆ ಪ್ರಜ್ವಲ ಯೋಜನೆ ಬಂದಿದೆ ಎಂದು ಟೀಕಿಸಿದ್ದಾರೆ.
ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಕಾರವಾರದ ಪ್ರಚಾರದ ವೇಳೆ ಮಾತನಾಡಿದ ಅವರು ದೇಶದಲ್ಲಿ ಉಜ್ವಲ್ ಯೋಜನೆ ಮೂಲಕ ಗ್ಯಾಸ್ ಸಿಲಿಂಡರ್ ನೀಡಿ ಸಬ್ಸಿಡಿ ಹಾಕುವುದಾಗಿ ಹೇಳಿದ್ದರು, ಯೋಜನೆ ಆರಂಭವಾದ ಮೂರ ನಾಲ್ಲು ತಿಂಗಳು ಮಾತ್ರ ಸಬ್ಸಿಡಿ ಕೊಟ್ಟು ನಂತರ ಕೈ ಬಿಡಲಾಗಿದೆ. ಬಿಜೆಪಿ ಅಂದು ಕೊಂಡದಂತೆ ನಡೆದುಕೊಂಡಿಲ್ಲ, ಉಜ್ವಲ್ ಹೋಗಿ ಪ್ರಜ್ವಲ ಯೋಜನೆ ಆಗಿದೆ.
ಇದನ್ನೂ ಓದಿ
- ಗೋವಾಕ್ಕೆ ತೆರಳುತ್ತಿದ್ದ ಪ್ರವಾಸಿಗರ ವಾಹನ ಪಲ್ಟಿ : ಚಾಲಕ ಗಂಭೀರ
- ಕೆಡಿಸಿಸಿ ಬ್ಯಾಂಕ್ ಚುನಾವಣೆ ಶಿವರಾಮ ಹೆಬ್ಬಾರ್ ಎಚ್ಚರಿಕೆ ಹೆಜ್ಜೆ, ಮಂಕಾಳ ವೈದ್ಯರಿಗೆ ಅಧ್ಯಕ್ಷ ಸ್ಥಾನ ಸಾಧ್ಯತೆ
- ಉತ್ತರಕನ್ನಡದಲ್ಲಿ ಸಹಾಯಕ ಕಮಿಷನರ್ ಅಧಿಕಾರಿಗಳ ಕೊರತೆ: ಸಂಕಷ್ಟದಲ್ಲಿ ಸಿಲುಕಿರುವ ಜನತೆ
ಇನ್ನೂ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಲ್ಲಿ ಮಹಿಳೆಯರಿಗೆ ಉಜ್ವಲ ಯೋಜನೆ ಗ್ಯಾಸ್ ಬದಲಾಗಿದೆ ಪ್ರಜ್ವಲ ಯೋಜನೆ ಸಿಕ್ಕಿದೆ ಎಂದು ಪರೋಕ್ಷವಾಗಿ ಪ್ರಜ್ವಲ ರೇವಣ್ಣನ ಅಶ್ಲೀಲ ವಿಡಿಯೋ ವೈರಲ್ ಆಗಿರುವ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.




