suddibindu.in
Karwar:ಕಾರವಾರ : ಸಮುದ್ರದಲ್ಲಿ ಕಪ್ಪಚಿಪ್ಪು (ಚಿಪ್ಪಿಕಲ್ಲು) ತೆಗೆಯಲು ಹೋಗಿದ್ದ ತಾಯಿ ಮಗಳು ಇಬ್ಬರೂ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬೈತಖೋಲ್ ಬ್ರೇಕ್ವಾಟರ್ ಬಳಿ ನಡೆದಿದೆ.
ಘಟನೆಯಲ್ಲಿ ರೇಣುಕಾ ಗೌಡ (ತಾಯಿ), ಹಾಗೂ ಸುಜಾತ ಗೌಡ(ಮಗಳು), ಎಂಬುವವರೆ ಮೃತ ಪಟ್ಟಿರುವ ತಾಯಿ,ಮಗಳಾಗಿದ್ದಾರೆ. ಇಬ್ಬರೂ ಬೆಳಿಗ್ಗೆ ಕಪ್ಪೆಚಿಪ್ಲು(ಚಿಪ್ಪಿಕಲ್ಲು) ತೆಗೆಯಲು ಹೋಗಿದ್ದರು, ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರದಲ್ಲಿ ಮುಳುಗಡೆಯಾಗಿ ಇಬ್ಬರೂ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ
- ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವಂತೆ ಅದೇಶ
- ಮುಂದಿನ ಮೂರು ದಿನ ಉತ್ತರ ಕನ್ನಡ ಸೇರಿದ ರಾಜ್ಯದ ಹಲವೆಡೆ ಭಾರೀ ಮಳೆ
- ಕಾರವಾರದ ರಾಘವೇಂದ್ರ ಮಠದ ಬಳಿ ಗುಡ್ಡ ಕುಸಿತ: ಸ್ಥಳೀಯ ನಿವಾಸಿಗಳ ಸ್ಥಳಾಂತರ
ಈಗಾಗಲೇ ಇಬ್ಬರ ಮೃತ ದೇಹವನ್ನ ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು ದಡಕ್ಕೆ ತಂದಿದ್ದಾರೆ. ಘಟನೆಯ ಸುದ್ದಿ ತಿಳಿದ ಕಾರವಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರವಾರ ನಗರ ಠಾಣೆಯಲ್ಲಿ ಪ್ರಕರಣ.