suddibindu.in
ಕಾರವಾರ : ಸಂವಿಧಾನ ತಿದ್ದುಪಡಿ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಹಾಲಿ ಸಂಸದ ಅನಂತಕುಮಾರ ಹೆಗಡೆ ಎಸೆದಿರುವ ಸಾವಾಲು ಈ ಲೋಕಸಕಭಾ ಟಿಕೆಟ್‌ ಗಿಟ್ಟಿಸಿಕೊಳ್ಳಲು ಮುಳ್ಳಾಗಲಿದೇಯೇ ಎನ್ನುವ ಪ್ರಶ್ನೆ ಬಿಜೆಪಿ ಕಾರ್ಯಕರ್ತರಲ್ಲೆ ಹುಟ್ಟಿಕೊಂಡಿದ್ದು, ಟಿಕೆಟ್‌ಗಾಗಿ ತಿಣುಕಾಟ ನಡೆಸಬೇಕಾದ ಪರಿಸ್ಥಿತಿ ಎದುರಾಗಿರುವಂತಿದೆ.

ಹೌದು ಉತ್ತರಕನ್ನಡ ಸಂಸದರಾಗಿರುವ ಅನಂತಕುಮಾರ ‌ಹೆಗಡೆ ಈ ಕ್ಷೇತ್ರದಲ್ಲಿ ಏಳು ಭಾರಿ ಸ್ಪರ್ಧೆ ಮಾಡಿ ಆರು ಬಾರಿ ಸಂಸದರಾಗಿದ್ದಾರೆ. ಅಷ್ಟೆ ಅಲ್ಲದೆ ಮೋದಿ ಸರಕಾರದಲ್ಲಿ ಅಲ್ಪ ತಿಂಗಳುಗಳ‌ ಕಾಲ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ.ಅವರು ಸಂಸದರಾಗಿರುವ ಸಂದರ್ಬದಲ್ಲಿಯೇ ಸಂವಿಧಾನ ಬದಲಾವಣೆ ಮಾಡುವ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಕಾರಣಕ್ಕೆ ಅಂದು ಸಚಿವ ಸಂಪುಟದಿಂದ ಕಿತ್ತೆಸೆಯಲಾಗಿತ್ತು.

ಇದನ್ನೂ ಓದಿ:-

ಆದರೆ ಇದೀಗ ಲೋಕಸಭಾ ಚುನಾವಣಾ ಸಂದರ್ಭದಲ್ಲಿಯೇ ಮತ್ತೆ ಸಂವಿಧಾನ‌ ಬದಲಾವಣೆ ಮಾಡುವ ವಿವಾದಾತ್ಮಕ ಹೇಳಿಕೆ ಬಿಜೆಪಿಗೆ ಮುಜುಗರ ತರುವಂತೆ ಮಾಡಿದ್ದಾರೆ.ಅಷ್ಟೆ ಅಲ್ಲದೇ ರಾಜ್ಯ ಬಿಜೆಪಿಯೇ ಅನಂತಕುಮಾರ ಈ ಹೇಳಿಕೆಯನ್ನ ತಳ್ಳಿ ಹಾಕಿದೆ, ಅವರ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ, ಅದು ಅವರ ವೈಯಕ್ತಿಕ ಹೇಳಿಕೆ ಎನ್ನುವ ಮೂಲಕ ಅಂತರ ಕಾಯ್ದುಕೊಂಡಿದೆ. ದೂರವಿಟ್ಟಿರುವಂತೆ ಬಿಜೆಪಿಯ ಅನೇಕ‌ ನಾಯಕರುಗಳು ಪ್ರತಿಕ್ರಿಯಿಸಿದ್ದಾರೆ.

ಇನ್ನೂ ಇತ್ತಿಚೆಗೆ ಭಟ್ಕಳದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿಯೇ ನನ್ನ ಎದುರು ಚುನಾವಣೆ ಸ್ಪರ್ಧೆ ಮಾಡುವ ಬಿಜೆಪಿ ಆಕಾಂಕ್ಷಿಗಳಿದ್ದರೆ ಬನ್ನಿ ಈಗಲೆ ಬನ್ನಿ ಧಮ್ ಇದ್ರೆ ಬನ್ನಿ ಎಂದು ಕುರ್ಚಿ ಎತ್ತಿ ಹಿಡಿದಿದು ಕಾರ್ಯಕರ್ತರ ದೈರ್ಯವನ್ನ ಪ್ರಶ್ನಿಸಿದ್ದರು. ಇಲ್ಲಿಗೆ ತಮ್ಮ‌ ಪೌರುಷದ ಮಾತುಗಳನ್ನ ನಿಲ್ಲಿಸದ ಹೆಗಡೆ ಮಾಧ್ಯಮದವರಿಗೂ ಸಹ ಮಾತನಾಡಿರುವುದು ರಾಜ್ಯಾದ್ಯಂತ ಮಾಧ್ಯಮದವರನ್ನ ಕೆರಳಿಸುವಂತೆ ಮಾಡಿದೆ. ಇವರ ಈ ಹೇಳಿಕೆಯನ್ನ ಖಂಡಿಸಿ ಮಾಧ್ಯಮದವರ ಈಗಾಗಲೇ ಈ ವಿಚಾರವನ್ನ ಸಹ ಬಿಜೆಪಿ ಹೈಕಮಾಂಡ ಗಮನಕ್ಕೆ ತಂದಿದ್ದಾರೆ. ಇವರ ಪ್ರತಿಯೊಂದು ಹೇಳಿಕೆಗಳು ಪಕ್ಷಕ್ಕೆ ಲಾಭ ಆಗೋದಕ್ಕಿಂತ ನಷ್ಟವೇ ಹೆಚ್ಚು ಎನ್ನುವ ತೀರ್ಮಾನಕ್ಕೆ ನಾಯಕರ ಬಂದು ನಿಂತಿದ್ದಾರೆ.

ಮೋದಿ ಅವರ ಮೇಲೆ ಇವರು ಈಗ ತೋರಿಸುತ್ತಿರುವ ಅಭಿಮಾನ ಅಂದು ಮೋದಿ ಅವರು ಜಿಲ್ಲೆಗೆ ಬಂದಾಗ ಆ ಅಭಿಮಾನ ಎಲ್ಲಿ ಹೋಗಿತ್ತು ಎನ್ನುವುದು ಅವರದ್ದೆ ಪಕ್ಷದ ‌ಕಾರ್ಯಕರ್ತರಿಂದ ಹಿಡಿದು ನಾಯಕರ‌ ಪ್ರಶ್ನೆಯಾಗಿದೆ. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನ ಗೆಲ್ಲಿಸಲು ಪ್ರಯತ್ನಿಸಿರುವುದಕ್ಕಿಂತ ಅವರನ್ನ ಸೋಲಿಸಲು ಪ್ರಯತ್ನಿಸಿರುವುದೇ ಹೆಚ್ಚು ಎನ್ನುವುದು ಪಕ್ಷದಲ್ಲಿಯೂ ಗುಟ್ಟಾಗಿ ಉಳಿದಿಲ್ಲ.ತಮ್ಮ ಪರವಾಗಿ ಪ್ರಚಾರ ಮಾಡಲು ತಾವು ಬಂದಿದ್ದರೆ ಸೋಲುತ್ತಿರಲ್ಲ ಎಂದು ಕಾರವಾರದ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ನಿನ್ನೆಯಷ್ಟೆ ಅನಂತಕುಮಾರ ಹೆಗಡೆ ಎದುರೆ ತಮ್ಮ ಅಸಮಧಾನ ಹೊರಹಾಕಿದ್ದಾರೆ.

ಇವರಿಗೆ ಬೇಕಾದಂತೆ ಪಕ್ಷದ ನಾಯಕರ ಹಾಗೂ ಕಾರ್ಯಕರ್ತರ ವಿರುದ್ದ ಇದುವರೆಗೂ ಇವರು ನಡೆಸಿಕೊಂಡು ಬಂದ ನಡಾವಳಿ ಈ ಬಾರಿಯ ಚುನಾವಣೆ ಸಮಯದಲ್ಲಿ ಅನಾವರಣಗೊಳ್ಳುವಂತಾಗಿದೆ. ಇವರ ರಾಜಕೀಯ ಜೀವನದಲ್ಲಿ ಪ್ರತಿ ಬಾರಿಯೂ ಸಹ ಮೊದಲ ಇಲ್ಲವೇ ಎರಡನೇ ಪಟ್ಟಿಯಲ್ಲಿಯೇ ಇವರ ಹೆಸರು ಘೋಷಣೆ ಆಗುತ್ತಲೆ ಬಂದಿದೆ. ಆದರೆ ಕ್ಷೇತ್ರದಲ್ಲಿನ ಅಭಿವೃದ್ಧಿ ಬಗ್ಗೆ ಸ್ವಲ್ಪವೂ ತಲೆ ಕೆಡಿಸಿಕೊಳ್ಳದೆ.ಅದು ತನ್ನ ಕಾರ್ಯವ್ಯಾಪ್ತಿಗೆ ಬರಲ್ಲ‌‌. ಇದು ತನ್ನ ಕೆಲಸವಲ್ಲ ಎಂದು ಹೇಳಿಕೊಂಡೆ ಬಂದಿರುವ ಇವರಿಗೆ ಈ ಭಾರಿ ಟಿಕೆಟ್ ಗಿಟ್ಟಿಸಿಕೊಳ್ಳಲು ತಿಣುಕಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿರೋದು ಮಾತ್ರ ಸತ್ಯ. ಆದರೆ ಕೊನೆಯ ಪಟ್ಟಿಯಲ್ಲಾದ್ದೂ ಟಿಕೆಟ್ ಘೋಷಣೆ ಮಾಡತ್ತಾ ಇಲ್ಲ ದೂರ ಇಡತ್ತಾ ಅನ್ನೊದನ್ನ ಟಿಕೆಟ್ ಘೋಷಣೆ ಆಗೋವರಗೆ ಕಾದು ನೋಡಬೇಕಾಗಿದೆ.