suddibindu.in
ಶಿರಸಿ: ಅಂಗನವಾಡಿ(Anganwadi) ಮಕ್ಕಳ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಉತ್ತರ ಕನ್ನಡ (uttar kannada)ಜಿಲ್ಲೆಯ ಶಿರಸಿಯ ಗಣೇಶ ನಗರದಲ್ಲಿ ಏಕಾಂಗಿಯಾಗಿ ಗೌರಿ ನಾಯ್ಕ (Alone Well Gauri Naik),ಎಂಬುವವರು ಬಾವಿ ತೋಡುತಿದ್ದು ಮಕ್ಕಳ ಸುರಕ್ಷತೆ ನೆಪವೊಡ್ಡಿ ಇದೀಗ ಬಾವಿಯನ್ನು ತೋಡದಂತೆ ಶಿರಸಿಯ ತಹಶಿಲ್ದಾರ್ ಸ್ಥಳಕ್ಕಾಗಮಿಸಿ ಹಲಗೆಗಳಿಂದ ಮುಚ್ಚಿ ತಾತ್ಕಾಲಿಕವಾಗಿ ಬಂದ್ ಮಾಡಿಸಿದ್ದಾರೆ.

ಇದನ್ನೂ ಓದಿ: ಮಹಡಿಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ

ಈ ಹಿಂದೆ ಸಹ ಮಕ್ಕಳ ಸುರಕ್ಷತೆ ನೆಪದಲ್ಲಿ ಅನುಮತಿ ಪಡೆದರೂ ಸಹ ಬಾವಿ ತೋಡದಂತೆ ಸೂಚನೆ ನೀಡಿದ್ದರೂ ಗೌರಿ ನಾಯ್ಕ ಬಾವಿ ತೋಡುವುದನ್ನು ಮುಂದುವರೆಸಿದ್ದರು.ಜನರು ಸಹ ಬೆಂಬಲ ಸೂಚಿಸುವ ಜೊತೆಗೆ ಸ್ಥಳೀಯ ದಾನಿಯೊಬ್ಬರು ಅಂಗನವಾಡಿಗೆ ರಸ್ತೆ ಮಾಡಿಸಿಕೊಟ್ಟಿದ್ದು ಮಕ್ಕಳ ಸುರಕ್ಷತೆಗಾಗಿ ಉಚಿತವಾಗಿ ತಮ್ಮ ಹಣದ ಮೂಲಕವೇ ಕಾಂಪೌಂಡ್ ಕಟ್ಟಲು ಮುಂದಾಗಿದ್ದರು

.ಯಾರೂ ಇಲ್ಲದ ವೇಳೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕಾಗಮಿಸಿದ ಶಿರಸಿ ತಹಶಿಲ್ದಾರ್ (Tehsildar) ಶ್ರೀಧರ ರವರು ಬಾವಿಗೆ ಹಲಗೆ ಹಾಕಿಸಿ ತಾತ್ಕಾಲಿಕವಾಗಿ ಮುಚ್ಚಿದ್ದಾರೆ. ಜನವರಿ 30 ರಿಂದ ಗೌರಿರವರು ಫೆಬ್ರವರಿ 18ರ ವರೆಗೂ ಮೂವತ್ತು ಅಡಿಗೂ ಹೆಚ್ಚು ಆಳ ಏಕಾಂಗಿಯಾಗಿ ಬಾವಿ ತೋಡಿದ್ದಾರೆ.ಆದ್ರೆ ಇದೀಗ ಅಧಿಕಾರಿಗಳ ,ಜಿಲ್ಲಾ ಉಸ್ತುವಾರಿ ಸಚಿವರ ಪ್ರತಿಷ್ಟೆಯಿಂದ ಇವರ ಶ್ರಮ ವ್ಯರ್ಥವಾಗುವಂತಾಗಿದೆ.