ಸುದ್ದಿಬಿಂದು ಬ್ಯೂರೋ
SIRSI:ಶಿರಸಿ: ಉತ್ತರಕನ್ನಡ ಜಿಲ್ಲೆಯ ಶಾಲ್ಮಲಾ‌ ನದಿಯಲ್ಲಿ ಆಟವಾಡುತ್ತಿದ್ದ ಮಗುವನ್ನ ರಕ್ಷಣೆ ಮಾಡಲು ಹೋಗಿ ನದಿಯಲ್ಲಿ ಮುಳುಗಡೆಯಾಗಿದ್ದ ಐವರ ಶವ ಪತ್ತೆಯಾಗಿದೆ‌.

ಶಿರಸಿ ತಾಲೂಕಿನ ಶಾಲ್ಮಲಾ ನದಿಯ ತಟದಲ್ಲಿ ಒಂದೇ ಕುಟುಂಬದ 25ಮಂದಿ ಸೇರಿ ಪಿಕ್ನಿಕ್ ಗೆ ಹೋಗಿದ್ದರು. ಈ ವೇಳೆ ನದಿಯಲ್ಲಿ ಆಟವಾಡಲು ಹೋಗಿದ್ದ ವೇಳೆ ಓರ್ವ ಮಗು ನದಿಯಲ್ಲಿ ಮುಳುಗಡೆಯಾಗಿದ್ದು, ಆಕೆಯನ್ನ ರಕ್ಷಣೆ ಮಾಡಲು ಹೋದ ಐವರು ಮಗು ರಕ್ಷಣೆಯನ್ನ ಮಾಡಿದ್ದಾರೆ. ಆದರೆ ಮಗು ಹೊರತು ಪಡಿಸಿ ಉಳಿದ ಐವರು ನದಿಯಲ್ಲಿ ಮುಳುಗಡೆಯಾಗಿದ್ದು, ಎಲ್ಲರೂ ನದಿಯಲ್ಲಿ ಮುಳುಗಿ ಮೃತಟ್ಟಿದ್ದರು. ಇದೀಗ ಮೃತ ಪಟ್ಟಿರುವ ಐವರ ಶವ ಸಹ ಪತ್ತೆಯಾಗಿದೆ.

ರಾಮನಬೈಲಿನ ಮೌಲಾನ ಮಹಮ್ಮದ್ ಸಲೀಮ್ ಕಲೀಲ್ ರೆಹಮಾನ್ (44), ನಬೀಲ್(22),ಉಮರ್ ಸಿದ್ದಿಕ್(20) ಸೇರಿ ಇಬ್ಬರು ಯುವತಿಯರಾದ ಮಿಸ್ಬಾ ತಬಸುಮ್ (21),ನಾಬೀಯಾ ಶೇಕ್(20) ಶವವಾಗಿ ಪತ್ತೆಯಾಗಿದ್ದಾರೆ.
ನಿರಂತರ ಆರು‌ ತಾಸುಗಳ ಕಾಲ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಮತ್ತು ಮುಳುಗು ತಜ್ಞರು. ಮೃತರ ಶವ ಹೊರ ತೆಗೆದಿದ್ದಾರೆ.ಶಿರಸಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಮೃತರ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.