ಸುದ್ದಿಬಿಂದು ಬ್ಯೂರೋ
ಕಾರವಾರ : ಖಾಸಗಿ ಬಸ್ ಒಂದರಲ್ಲಿ ಲಕ್ಷಾಂತರ ರೂಪಾಯಿ ಗೋವಾ ಮದ್ಯವನ್ನ ಸಾಗಾಟ ಮಾಡುತ್ತಿದ್ದ ವೇಳೆ ತಪಾಸಣೆ ನಡೆಸಿಸಿದ ಅಬಕಾರಿ ಪೊಲೀಸರು ಚಾಲಕರಿಗೆ ಬಂಧಿಸಿ ಮದ್ಯ ಮತ್ತು ಬಸ್ ವಶಕ್ಕೆ ತೆಗೆದುಕೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿಮ ಮಾಜಾಳಿ ಚೆಕ್ ಪೊಸ್ಟ್ ನಲ್ಲಿ ನಡೆದಿದೆ.
ಬಂಧಿತ ಬಸ್ ಚಾಲಕ ಬಾಗಲಕೋಟೆ ಮೂಲದ ಲಿಂಗನಗೌಡ ಪಾಟೀಲ್ ಬಂಧಿತ ಬಸ್ ಚಾಲಕನಾಗಿದ್ದಾನೆ. ಈ ಬಸ್ ಗೋವಾದಿಂದ ಬೆಂಗಳೂರಿಗೆ ತೆರಳುವಾಗ ಆ ಬಸ್ನಲ್ಲಿ ಲಕ್ಷಾಂತರ ರೂಪಾಯಿ ಗೋವಾ ಮದ್ಯವನ್ನ ಅಡಗಿಸಿಡಲಾಗಿತ್ತು. ಚೆಕ್ ಪೊಸ್ಟ್ ನಲ್ಲಿರುವ ಅಬಕಾರಿ ಪೊಲೀಸರು ಗೋವಾ ಗಡಿ ದಾಟಿ ಬಂದ ಎಸ್ ಆರ್ ಎಸ್ ಬಸ್ ತಪಾಸಣೆ ಮಾಡಿದ್ದಾರೆ. ಈ ವೇಳೆ ಬಸ್ ನಲ್ಲಿ ಗೋವಾ ಮದ್ಯ ಪತ್ತೆಯಾಗಿದೆ. ಗೋವಾದ ವಿವಿಧ ಬ್ರಾಂಡ್ ನ 72 ಲೀಟರ ಗೋವಾ ಮದ್ಯ ಹಾಗೂ ಬಸ್ ನನ್ನು ವಶಕ್ಕೆ ಪಡೆದು ಒಟ್ಟು 25,95000 ಲಕ್ಷ ಮೌಲದ್ಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಖಚಿತ ಮಾಹಿತಿ ಪಡೆದ ಅಬಕಾರಿ ಇಸ್ಸಪೆಕ್ಟರ್ ಸದಾಶಿವ್ ಮಾಜಾಳಿ ಚಕ್ ಪೋಸ್ಟ್ ನಲ್ಲಿ ಬಸ್ ತಡೆದು ತಪಾಸಣೆ ನಡೆಸಿ ವಶಪಡಿಸಿಕೊಂಡಿದ್ದಾರೆ. ಘಟನೆ ಸಂಬಂಧ ಕಾರವಾರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.