ಸುದ್ದಿಬಿಂದು ಬ್ಯೂರೋ
ಗೋಕರ್ಣ : ಉತ್ತರಕನ್ನಡ ಜಿಲ್ಲೆಯ ಗೋಕರ್ಣ ರಥಬೀದಿಯ ಅಹಲ್ಯಾ ಬಾಯಿ ಹೊಳ್ಕರ ಛತ್ರದಲ್ಲಿ ಯಂಗ್ ಸ್ಟಾರ್ ಕ್ಲಬ್ ನ ಪ್ರತಿಷ್ಠಾಪಿಸಿರುವ ಗಣಪತಿ ಸನ್ನಿಧಿಯಲ್ಲಿ ಚಂದ್ರಯಾನ-3ರ ರೂಪಕ ಎಲ್ಲರ ಗಮನ ಸೆಳೆಯುವಂತಾಗಿದೆ
.

ಚಂದ್ರನಲ್ಲಿ ವಿಕ್ರಮ್ ಲ್ಯಾಂಡರ್ ಇಳಿಯುವ ದೃಶ್ಯ, ಆಕಾಶಕಾಯಗಳು, ಉಪಗ್ರಹ ಉಡಾವಣೆ ರಾಕೆಟ್ ದೃಶ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ..
ಗೋಪಾಲ ಜಂಬೆ, ಸುಪ್ರಸನ್ನ ಅಂಬೇಕರ, ಗಣಪತಿ ಅಡಿ, ಸುಬ್ರಾಯ ನಿರ್ವಾಣೇಶ್ವರ ಇವರ ಮಾರ್ಗದರ್ಶನದಲ್ಲಿ, ರಾಜಶೇಖರ ಗೌಡ ಸಂಗಡಿಗರು ಈ ರೂಪಕವನ್ನು ನಿರ್ಮಣ ಮಾಡಿದ್ದು, ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದು, ಗಣಪನ ಜೊತೆ ಚಂದ್ರಯಾನ-3ರ ರೂಪಕ ನೋಡಲು ಸಾರ್ವಜನಿಕರು ಆಗಮಿಸುತ್ತಿದ್ದು,ಮೊಬೈಲ್ ನಲ್ಲಿ ಪೋಟೋ ಕ್ಲಿಕಿಸಿಕೊಳ್ಳುತ್ತಿದ್ದಾರೆ.