ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ: ಸ್ನೇಹಿತರೊಂದಿಗೆ ಉತ್ತರಕನ್ನಡ ಜಿಲ್ಲೆಗೆ ಆಗಮಿಸಿದ್ದ ಭಾರತೀಯ ಕ್ರಿಕೇಟರ್ ಮನೀಶ್ ಪಾಂಡೆ (Cricketer Manish Pandey)ಇಂದು ಶನಿವಾರ ಮುರುಡೇಶ್ವರದ ನೇತ್ರಾಣಿ ಐಲೆಂಡ್ ನಲ್ಲಿ ಆಕ್ವಾ ರೈಡ್ ಸಂಸ್ಥೆಯ ಬೋಟ್ ಮೂಲಕ ತೆರಳಿ ಸ್ಕೂಬಾ ಡೈವಿಂಗ್..
ಸದಾ ಕ್ರಿಕೆಟ್ನಲ್ಲಿ ಬ್ಯೂಜಿಯಾಗಿರುತ್ತಿದ್ದ ಭಾರತ ತಂಡದ ಕ್ರಿಕೆಟ್ ಆಟಗಾರ ಮನೀಶ್ ಪಾಂಡೆ ಸ್ಕೂಬಾ ಡೈವಿಂಗ್ ಮಾಡೋದಕ್ಕಾಗಿಯೇ ಮುರುಡೇಶ್ವರಕ್ಕೆ ಆಗಮಿಸಿ, ಆಕ್ವಾ ರೈಡ್ ಸಂಸ್ಥೆಯ ಬೋಟ್ ಮೂಲಕ ನೇತ್ರಾಣಿ ದ್ವೀಪಕ್ಕೆ ತೆರಳಿ ಸುಮಾರು ಅರ್ಧಗಂಟೆಗೂ ಹೆಚ್ಚಿನ ಸಮಯ ಸ್ಕೂಬಾ ಡೈವಿಂಗ್ ಮಾಡಿ ಸಮುದ್ರದ ಆಳದ ಜಲಚರಗಳನ್ನು ಮನೀಶ್ ಪಾಂಡೆ ಕಣ್ತುಂಬಿಕೊಂಡು,ಎಂಜಾಯ್ ಮಾಡಿದ್ದಾರೆ.ಇನ್ನೂ ಆಕ್ವಾ ರೈಡ್ ಸಂಸ್ಥೆ ಅತ್ಯುತ್ತಮವಾದ ವ್ಯವಸ್ಥೆಯೊಂದಿಗೆ ಸ್ಕೂಬಾ ಡೈವಿಂಗ್ ಮಾಡಿಸಿರುವ ಬಗ್ಗೆ ಆ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗಮನಿಸಿ
- ಸಮುದ್ರದಲ್ಲಿ ಮುಳುಗಿ ಪ್ರವಾಸಿಗ ಸಾವು; ಕುಮಟಾ ಕಡ್ಲೆ ಸಮುದ್ರ ತೀರದಲ್ಲಿ ದುರ್ಘಟನೆ
- ಮಾರಿ ಹೊರೆ ಸ್ಥಳಾಂತರ ವೇಳೆ ಗಲಾಟೆ; ವ್ಯಕ್ತಿಯ ಕುತ್ತಿಗೆ ಹಿಸುಕಿ ಕೊಲೆ ಯತ್ನ, ಕುಮಟಾ ಠಾಣೆಯಲ್ಲಿ ಪ್ರಕರಣ
- ಹೊನ್ನಾವರ ಬಂಗಾರದ ಆಭರಣ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು; ₹17.08 ಲಕ್ಷ ಮೌಲ್ಯದ ಚಿನ್ನ ಜಪ್ತಿ, ಇಬ್ಬರ ಬಂಧನ
- ಲಾರಿ ಕಳ್ಳತನ ಪ್ರಕರಣದ ಬೆಳಗಾವಿ ಮೂಲದ ಆರೋಪಿ ಬಂಧನ; ಹಳಿಯಾಳ ಪೊಲೀಸರ ಕಾರ್ಯಾಚರಣೆ

