ಸುದ್ದಿಬಿಂದು ಬ್ಯೂರೋ
ಬನವಾಸಿ : ಅರಣ್ಯ ಪ್ರದೇಶವೊಂದರಲ್ಲಿ ಅಪರಿಚಿತ ಪುರುಷನೋರ್ವನ ಶವ ಪತ್ತೆಯಾಗಿದ್ದು,ಕೊಲೆ ಮಾಡಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗುತ್ತಿದೆ,ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯ ವಡ್ಡಿನಕೊಪ್ಪ ಬಳಿ ಈ ಘಟನೆ ನಡೆದಿದೆ.

ಶವವಾಗಿ ಪತ್ತೆಯಾಗಿರುವ ವ್ಯಕ್ತಿಗೆ ಸುಮಾರು 45 ರಿಂದ 50 ವರ್ಷ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಶವದ ಮೇಲೆ ಗೋಣಿಚೀಲ ಹಾಕಿ ಸೊಪ್ಪಿನಿಂದ ಮುಚ್ಚಿಡಲಾಗಿದೆ. ಇನ್ನೂ ಮೃತ ವ್ಯಕ್ತಿಯ ತಲೆ ಹಾಗೂ ಮುಖಕ್ಕೆ ಗಂಭೀರವಾಗಿರುವ ಗಾಯವಾಗಿದೆ. ಸದ್ಯದ ಪರಿಸ್ಥಿತಿ ಗಮನಿಸಿರುವ ಸ್ಥಳೀಯರು ಹಾಗೂ ಪೊಲೀಸರು ಯಾರೋ ಕೊಲೆ ಮಾಡಿ ಎಸೆದು ಹೋಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಸಿಪಿಐ ರಾಮಚಂದ್ರ ನಾಯಕ,ಬನವಾಸಿ ಠಾಣಾ ಪಿಎಸ್ಐ ಚಂದ್ರಕಲಾ ಪತ್ತಾರ ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರ ತನಿಖೆ ಬಳಿಕ ಇದು ಕೊಲೆಯೋ..? ಅಥವಾ ಸಹಜ ಸಾವೋ..? ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿ ಹೊರಬರಬೇಕಿದೆ.