ಸುದ್ದಿಬಿಂದು ಬ್ಯೂರೋ
ಅಂಕೋಲಾ
: ಮಂಗಳಮುಖಿ ಎಂದು ಜನರಿಗೆ ನಂಬಿಸಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯೊಬ್ಬನನ್ನು ಅಸಲಿ ಮಂಗಳಮುಖಿಯರು ಹಿಡಿದು ಬಟ್ಟೆ ಬಿಚ್ಚಿಸಿ ಧರ್ಮದೇಟು ನೀಡಿದ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಟ್ಟು ಅಲಿಯಾಸ್ ಕವಿತಾ ಎನ್ನುವ ಪುರಷನೊಬ್ಬ ಮಂಗಳಮುಖಿಯ ವೇಷ ಧರಿಸಿ ಭಿಕ್ಷೆ ಬೇಡುತ್ತ ಹಣವನ್ನು ವಸೂಲಿ ಮಾಡುತ್ತಿದ್ದ. ಹೀಗೆ ಹಣ ವಸೂಲಿ ಮಾಡುತ್ತಿರುವ ವಿಷಯವನ್ಬು ಅಸಲಿ ಮಂಗಳಮುಖಿಯರ ಅಂತರಂಗ ಸಂಘಟನೆಯ ಉಪಾಧ್ಯಕ್ಷೆ ಆಯಿಷಾ ಹೊನ್ನಾವರ ಅವರ ಗಮನಕ್ಕೆ ಸಾರ್ವಜನಿಕರು ತಂದಿದ್ದರು. ತಕ್ಷಣ ಪಟ್ಟಣಕ್ಕೆ ಆಗಮಿಸಿದ ಮಂಗಳಮುಖಿಯರಾದ ಆಯಿಷಾ ಹೊನ್ನಾವರ, ಸುಹಾನಾ ಹಾಗೂ ಪಾರ್ವತಿ ಅವರು ಮಂಗಳಮುಖಿ ವೇಷದಲ್ಲಿದ್ದ ಪುರುಷನನ್ನು ಹಿಡಿದಿದ್ದಾರೆ.

ಈ ವೇಳೆ ಲುಂಗಿಯ ಮೇಲೆ ಸೀರೆ ಉಟ್ಟಿರುವದನ್ನು ಗಮನಿಸಿದ ಅಸಲಿ ಮುಂಗಳಮುಖಿಯರು ಆತನ ಸೀರೆ ಬಿಚ್ಚಿಸಿ, ಲುಂಗಿಯ ಮೇಲೆ ನಿಲ್ಲಿಸಿ ಸರಿಯಾಗಿ ಮಂಗಳಾರತಿ ಮಾಡಿದ್ದಾರೆ. ಜೊತೆಗಿದ್ದ ಇನೊರ್ವ ಸಹ ಅಸಲಿ ಮಂಗಳಮುಖಿಯಾಗಿರಲಿಲ್ಲ. ಆದರೆ ಆದರೆ ಸ್ವಲ್ಪ ವೃದ್ಧನಂತೆ ಕಂಡು ಬಂದಿದ್ದರಿಂದ ಆತನಿಗೆ ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿ ಬಿಟ್ಟಿದ್ದೇವೆ ಎಂದು ಸುಹಾನಾ ತಿಳಿಸಿದರು.

ಪುರುಷನಾಗಿ ದುಡಿದು ತಿನ್ನುವ ಬದಲು ಮಂಗಳಮುಖಿಯಾಗಿ ನಾಟಕವಾಡುತ್ತಿದ್ದಾನೆ. ಇಂತವರಿಂದ ಅಸಲಿ ಮಂಗಳಮುಖಿಯರಿಗೆ ಬೆಲೆ ಇಲ್ಲದಂತಾಗಿದೆ.ಈ ಬಗ್ಗೆ ಪೊಲೀಸರು ಗಂಭೀರವಾಗಿ ಪರಿಗಣಿಸಿ ಕಾರ್ಯಪ್ರವೃತ್ತರಾಗಬೇಕು ಎಂದು ನಾಗರಿಕರು ಆಗ್ರಹಿದ್ದಾರೆ.