ಸುದ್ದಿಬಿಂದು ನ್ಯೂಸ್ ಡೆಸ್ಕ್
ನವದೆಹಲಿ : ಮುಂಬೈ ಅಟ್ಯಾಕ್, ಚಿನ್ನಸ್ವಾಮಿ ಕ್ರೀಡಾಂಗಣ ಬ್ಲಾಸ್ಟ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಭಟ್ಕಳ ಮೂಲದ ಉಗ್ರಗಾಮಿ ಕೋರ್ಟ್ ರಿಲೀಪ್ ನೀಡಿದೆ.
ಅಬ್ದುಲ್ ವಾಯಿದ್ ಸಿದ್ದಿಬಪ್ಪ ಗೆ ಬಂಧಿತನಾಗಿದ್ದ, ಭಯೋತ್ಪಾದಕ ಚಟುವಟಿಕೆಗೆ ಹವಾಲಾ ಹಣ ವರ್ಗಾವಣೆ ಆರೋಪ ಸಾಭೀತಾಗದ ಹಿನ್ನಲೆಯಲ್ಲಿ ಪ್ರಕರಣ ರದ್ದಾಗಿದೆ. ದೆಹಲಿಯ ಪಟಿಯಾಲ ಕೋರ್ಟ ನಿಂದ ಆದೇಶ ಹೊರಬಂದಿದೆ. ಮೇ. 20 2016ರಲ್ಲಿ ದೆಹಲಿಯಲ್ಲಿ ಆತನಿಗೆ ಬಂಧನ ಮಾಡಲಾಗಿತ್ತು.

ಈತ ಭಟ್ಕಳ ಮೂಲದವನಾಗಿದ್ದ,NIAದಾಖಲಿಸಿದ್ದ ದೂರಿನಲ್ಲಿ ಸಾಕ್ಷಿ ಕೊರತೆ ಹಿನ್ನಲೆಯಲ್ಲಿ ಪ್ರಕರಣ ರದ್ದು ಪಡಿಸಲಾಗಿದೆ. ನಿನ್ನೆ ಯೆ ಈ ಪ್ರಕರಣ ರದ್ದುಮಾಡಿ ಕೋರ್ಟ್ ಆದೇಶ ಹೊರಡಿಸಿದೆ. ಇಂಡಿಯನ್ ಮುಜಾಹಿದ್ದಿನ್ (ಸಿಮಿ) ಸಂಘಟನೆಗೆ ಅಕ್ರಮ ಹಣಕಾಸು ವ್ಯವಹಾರ ,ಹವಾಲಾ ದಂದೆ ಕುರಿತು NIA ಪ್ರಕರಣ ದಾಖಲಿಸಿತ್ತು.
ಮುಂಬೈ ಅಟ್ಯಾಕ್, ಚನ್ನಸ್ವಾಮಿ ಕ್ರೀಡಾಂಗಣ ಬ್ಲಾಸ್ಟ್ ನಲ್ಲಿ ಸಹ ಈತನ ಕೈವಾಡ ಇರುವ ಕುರಿತು NIA ಪ್ರಕರಣ ದಾಖಲಿಸಿತ್ತು. ಸಾಕ್ಷಿ ಕೊರತೆಯಿಂದ ಸೋಮವಾರ(ನಾಳೆ) ಬಿಡುಗಡೆಯಾಗಲಿದ್ದಾನೆ.
ಮುಂಬೈ ಮತ್ತು ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣ ಪ್ರಕರಣದಲ್ಲಿ NIA ಮತ್ತೊಮ್ಮೆ ಬಂಧಿಸಲಿದೆ.