ಸುದ್ದಿಬಿಂದು ನ್ಯೂಸ್ ಡೆಸ್ಕ್
ಕಾರವಾರ : ರಾಜಕೀಯವಾಗಿ ಒಂದು ಕಾಲದಲ್ಲಿ ಉತ್ತರಕನ್ನಡ ಜಿಲ್ಲೆ ಸಂಪೂರ್ಣವಾಗಿ ಕಾಂಗ್ರೆಸ್ ನ ಭದ್ರಕೋಟೆಯಾಗಿತ್ತು. ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲಿ ನಾಮಧಾರಿ (ಈಡಿಗ) ಸಮುದಾಯಕ್ಕೆ ಸೇರಿದ ಆಕಾಂಕ್ಷಿಯನ್ನ ಅಭ್ಯರ್ಥಿ ಎಂದು ಘೋಷಣೆ ಮಾಡದೆ ಇರುವುದು ನಾಮಧಾರಿ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.
ಉತ್ತರಕನ್ನಡ ಜಿಲ್ಲೆಯ ಕುಮಟಾ,ಶಿರಸಿ ಹಾಗೂ ಭಟ್ಕಳ ಈ ಮೂರು ಕ್ಷೇತ್ರದಲ್ಲಿಯೂ ನಾಮಧಾರಿ ಮತದಾರರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಷ್ಟೆ ಅಲ್ಲದೆ ಜಿಲ್ಲೆಯಲ್ಲೆ ನಾಮಧಾರಿ ಸಮಾಜ ಬಹುಸಂಖ್ಯಾತರಾಗಿದ್ದು, ಮೊದಲ ಪಟ್ಟಿಯಲ್ಲಿಯೇ ನಾಮಧಾರಿ ಸಮುದಾಯಕ್ಕೆ ಸೇರಿದ್ದ ಕನಿಷ್ಠ ಇಬ್ಬರೂ ಅಭ್ಯರ್ಥಿಗಳ ಹೆಸರನ್ನ ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಘೋಷಣೆ ಮಾಡಿದ್ದರೆ. ಉಳಿದ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಈಗಾಗಲೆ ಮತ್ತಷ್ಟು ಚುರುಕುಗೊಳ್ಳುತ್ತಿತ್ತು. ಆದರೆ ಮೊದಲ ಪಟ್ಟಿಯಲ್ಲಿ ಈಡಿಗ ಸಮುದಾಯಕ್ಕೆ ಸೇರಿದ್ದವರನ್ನ ಅಭ್ಯರ್ಥಿ ಎಂದು ಘೋಷಣೆ ಮಾಡದೆ ಇರುವುದು ಜಿಲ್ಲೆಯ ಬಹುತೇಕ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಸಂಘಟನೆಗೆ ದೊಡ್ಡ ಹಿನ್ನಡೆ ಉಂಟಾದಂತಾಗಿದೆ.
ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪ ಅವರ ಕಾಲದಲ್ಲಿ ಜಿಲ್ಲೆಯಲ್ಲಿ ಎರಡರಿಂದ ಮೂವರು ನಾಮಧಾರಿ ಸಮುದಾಯಕ್ಕೆ ಸೇರಿದ್ದವರೆ ಶಾಸಕರು ಹಾಗೂ ಒಬ್ಬರು ಸಂಸದರನ್ನ ಜಿಲ್ಲೆಯಿಂದ ಆಯ್ಕೆ ಆಗಿರುವುದನ್ನ ಇಂದಿಗೂ ಯಾರು ಕೂಡ ಮರೆತಿರುವಂತಿಲ್ಲ. ನಾಮಧಾರಿ ಸಮಾಜಕ್ಕೆ ಸೇರಿದ ದೇವರಾಯ ನಾಯ್ಕ ಅವರು ನಿರಂತರವಾಗಿ ಐದು ಬಾರಿ ಸಂಸದರಾಗಿ ಈ ಕ್ಷೇತ್ರದಿಂದಲ್ಲೆ ಸಂಸದರಾದವರು. ಇನ್ನೂ ಕಾಂಗ್ರೆಸ್ ಸೇರಿದಂತೆ ಉಳಿದ ಎಲ್ಲಾ ಪಕ್ಷಗಳು ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದರಿಂದ ಎರಡು ಕ್ಷೇತ್ರದಲ್ಲಿ ನಾಮಧಾರಿ ಸಮುದಾಯಕ್ಕೆ ಸೇರಿದ್ದ ಒಬ್ಬರಿಗೆ ಮೊದಲ ಪಟ್ಡಿಯಲ್ಲೆ ಟಿಕೇಟ್ ಘೋಷಣೆ ಮಾಡಿ ಪಕ್ಷ ಸಂಘಟನೆಗೆ ಅನುಕೂಲ ವಾತಾವರಣ ಮಾಡಿಕೊಟ್ಡಿದೆ.
ಈ ಮೊದಲು ಕಾಂಗ್ರೆಸ್ ಸಹ ಮೊದಲ ಪಟ್ಟಿಯಲ್ಲಿಯೇ ನಾಮಧಾರಿ ಸಮುದಾಯಕ್ಕೆ ಸೇರಿದವರ ಹೆಸರನ್ನ ಘೋಷಣೆ ಮಾಡಿ ಪಕ್ಷ ಸಂಘಟನೆಗೆ ಪೂರಕ ವಾತಾವರಣ ನಿರ್ಮಾಣ ಮಾಡಿಕೊಂಡು ಬರುತ್ತಲೆ ಇತ್ತು.ಆದರೆ ಅದು ಯಾಕೋ ಈ ಬಾರಿ ಮಾತ್ರ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲಿ ನಾಮಧಾರಿ ಸಮುದಾಯಕ್ಕೆ ಸೇರಿರುವ ಕನಿಷ್ಠ ಇಬ್ಬರ ಹೆಸರನ್ನ ಘೋಷಣೆ ಮಾಡದೆ ಹಾಗೆ ಉಳಿಸಿಕೊಂಡಿರುವುದು, ವಿರೋಧಕ್ಕೆ ಕಾರಣವಾಗುತ್ತಿದೆ.
ಜಿಲ್ಲೆಯ ಎರಡು ಕ್ಷೇತ್ರದಲ್ಲಿ ನಾಮಧಾರಿ ಸಮಾಜಕ್ಕೆ ಸೇರಿದ ಆಕಾಂಕ್ಷಿಗಳಿಗೆ ಸ್ಪರ್ಧೆ ಮಾಡಲು ಅವಕಾಶ ನೀಡದೆ ಹೋದರೆ ಉಳಿದ ಐದು ಕ್ಷೇತ್ರದ ಮೇಲೆ ಇದರ ದೊಡ್ಡ ಪರಿಣಾಮ ಉಂಟಾಗುತ್ತದೆ. ಕಾರವಾರ ಹಾಗೂ ಯಲ್ಲಾಪುರ ಕ್ಷೇತ್ರದಲ್ಲಿಯೂ ಸಹ ನಾಮಧಾರಿ ಮತದಾರರೆ ನಿರ್ಣಾಯಕರಾಗಿದ್ದಾರೆ. ಎನ್ನುವುದು ಪಕ್ಷದ ನಾಯಕರಿಗೆ ಗೋತ್ತಿರುವ ಸಂಗತಿ. ಇದು ಕೇವಲ ಉತ್ತರಕನ್ನಡ ಜಿಲ್ಲೆಗೆ ಸಿಮೀತವಾಗಿರುವ ರಾಜಕಾರಣವಲ್ಲ.ಪಕ್ಕದ ಶಿವಮೊಗ್ಗ, ದಕ್ಷಿಣಕನ್ನಡ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಡಿಗ ಸಮುದಾಯ ಹೊಂದಿದ್ದು, ಈಗಾಗಲೇ ಕಾಂಗ್ರೆಸ್ ಈಡಿಗ ಸಮುದಾಯಕ್ಕೆ ಸೇರಿರುವವರನ್ನ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡದೆ ಇರುವುದು ಈಡಿಗ ಸಮುದಾಯದವರ ಆಕ್ರೋಶಕ್ಕೆ ಕಾರಣವಾಗಿರೋದು ಮಾತ್ರ ಸುಳ್ಳಲ್ಲ.
ಈ ಬಗ್ಗೆ ಈಗಾಗಲೇ ದೆಹಲಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಈಡಿಗ ಸಮುದಾಯದ ಪ್ರಣವನಂದ ಸ್ವಾಮಿಜೀ ಅವರು ಉತ್ತರನ್ನಡ ಜಿಲ್ಲೆಯಲ್ಲಿ ನಾಮಧಾರಿ ಸಮುದಾಯದ ಮತದಾರರ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅದರಲ್ಲೂ ಕುಮಟಾ, ಶಿರಸಿ, ಭಟ್ಕಳ ಈ ಮೂರು ಕ್ಷೇತ್ರದಲ್ಲಿ ನಾಮಧಾರಿ ಮತದಾರರೆ ಬಹುಸಂಖ್ಯಾತರಾಗಿದ್ದಾರೆ. ಅಷ್ಟೆ ಅಲ್ಲದೆ ಇನ್ನೂ ಇಳಿದ ಕಾರವಾರ ಹಾಗೂ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿಯೂ ಸಹ ನಾಮಧಾರಿ,ಈಡಿಗ ಸಮುದಾಯದ ಮತಗಳೆ ನಿರ್ಣಾಯಕ ಪಾತ್ರವಹಿಸಲಿದೆ.
ಇನ್ನೂ ಜಿಲ್ಲಾದ್ಯಂತ ಈಡಿಗ ಮತದಾರರನ್ನ ಹೊಂದಿದ್ದರೂ ಸಹ ಕಾಂಗ್ರೆಸ್ ತನ್ನ ಮೊದಲಪಟ್ಟಿಯಲ್ಲಿ ಈಡಿಗರಿಗೆ ಟಿಕೇಟ್ ಘೋಷಣೆ ಮಾಡದೆ ಇರೋದು ಬೇಸರ ಉಂಟುಮಾಡಿದೆ. ಜಿಲ್ಲೆಯ ಕನಿಷ್ಠ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಈಡಿಗರಿಗೆ ಟಿಕೇಟ್ ನೀಡಬೇಕು. ಈ ಬಗ್ಗೆ ನಾನು ಸಹ ಕಾಂಗ್ರೆಸ್ ನ ಹೈಕಮಾಂಡ ಮೇಲೆ ಒತ್ತಡ ಹೇರುವುದಾಗಿ ಪ್ರಣವನಾಂದ ಸ್ವಾಮಿಜೀ ಹೇಳಿಕೆ ನೀಡಿದ್ದಾರೆ.