ಕಾರವಾರ : ಅರಣ್ಯದಲ್ಲಿ ಟ್ರಚ್ (ಕಾಲುವೆ) ತೆಗೆಯುವ ನೆಪದಲ್ಲಿ ಅಪರೂಪದ ಔಷಧಿ ಸಸ್ಯಗಳು  ಜೊತೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಗಿಡ-ಮರಗಳ ಮಾರಣಹೋಮ ಮಾಡಿರುವ ಘಟನೆ ಕುಮಟಾ ತಾಲೂಕಿನ ಹಿರೇಗುತ್ತಿ ಅರಣ್ಯ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಹಿರೇಗುತ್ತಿ ಫಾರೇಸ್ಟ್ ರೇಂಜ್ ಗೆ ಒಳಪಟ್ಟಿರುವ ಸರ್ವೆ ನಂಬರ್ 111ರಲ್ಲಿರುವ  ನಾಗೂರು ಗ್ರಾಮದ ಖಂಡಗಾರ ರಸ್ತೆಯ ಬದಿಯ ಮುಗ್ವೆಖಾನದಿಂದ ಹುಳಸೆ ಗ್ರಾಮದವರೆಗೆ. ಸುಮಾರು ಐದು ಕಿಲೋಮೀಟರ್ ಗೂ ಅಧಿಕ  ಅರಣ್ಯ ವ್ಯಾಪ್ತಿಯಲ್ಲಿ ಟ್ರಚ್ ತೆಗೆಯಲಾಗಿದೆ. ಆದರೆ ಟ್ರಚ್ ತೆಗೆಯಲು ಜೆಸಿಬಿ ಯಂತ್ರಗಳನ್ನ ಬಳಸಲಾಗಿದ್ದು.ಜೆಸಿಬಿ ಬಳಸಿ ಟ್ರಚ್ ತೆಗೆಯುವ ವೇಳೆ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಇರುವ  ಔಷಧಿ ಸಸ್ಯಗಳು ಸೇರಿ ಬೆಲೆಬಾಳುವ ಹೊನಗಲು, ಸಾಗವಾನಿ, ನಂದಿ, ಭರಣಗಿ, ಹಾಗೂ ಅಪರೂಪದ ಬೆತ್ತದ ಗಿಡಗಳು ನಾಶವಾಗಿದೆ.

ಯಾವುದೆ ಒಂದು ಗಿಡ-ಮರಗಳಿಗೆ ಹಾನಿಯಾದ ರೀತಿಯಲ್ಲಿ ಟ್ರಚ್ ತೆಗೆಯಬೇಕು ಎನ್ನುವ ನಿಯಮಾವಳಿ ಇದೆ. ಆದರೆ ಈ ವೇಳೆ ದಟ್ಟ ಅರಣ್ಯದಲ್ಲಿ ಬೃಹತ್ ಜೆಸಿಬಿ ಯಂತ್ರವನ್ನ ಮನಸೋ ಇಚ್ಚೆ ನುಗ್ಗಿಸಿ ಟ್ರಚ್ ತೆಗೆಯಲಾಗಿದೆ. ಈ ಕಾಮಗಾರಿಗಾಗಿ ಅರಣ್ಯದಲ್ಲಿರುವ ಔಷಧಿ ಸಸ್ಯಗಳ ಜೊತೆಗೆ ಬೆಲೆ ಬಾಳುವ ಮರಗಳನ್ನ ನಾಶ ಮಾಡಿ ಎಂದು ಸರಕಾರದ ಯಾವ ಆದೇಶದಲ್ಲಿ ಇದೆ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

ಟ್ರಚ್ ತೆಗೆಯುವ ಬೆಳೆ ನಾಶವಾದ ಗಿಡ-ಮರಗಳನ್ನ ದಿಬ್ಬದ ಮೇಲೆ ಮಣ್ಣು ಹಾಕಿ ಮುಚ್ಚಲಾಗಿದೆ. ಮರಗಳನ್ನ  ಜೆಸಿಬಿ ಯಂತ್ರದ ಮೂಲಕ ನಾಶ ಮಾಡುತ್ತಿರುವ ವಿಡಿಯೋ ಸಹ ಲಭ್ಯವಿದೆ. .ಇಲ್ಲಿನ ಅಧಿಕಾರಿಗಳು ಸರಕಾರಕ್ಕೆ ಅದು ಯಾವ ರೀತಿಯಲ್ಲಿ ಮಾಹಿತಿ ನೀಡಿ ಈ ಕಾಮಗಾರಿಗೆ ಮಂಜೂರಿ ಪಡೆದುಕೊಂಡಿದ್ದಾರೆ ಎನ್ನುವ ಬಗ್ಗೆ ಸಹ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡಿಲ್ಲ.

ಪ್ರತಿಯೊಬ್ಬರು ಕೂಡ ಜಾರಿಕೊಳ್ಳುವ ಪ್ರಯತ್ನದಲ್ಲಿರುವಂತೆ ಕಾಣುತ್ತಿದೆ. ಅರಣ್ಯ ಇಲಾಖೆಯಲ್ಲಿ ನಡೆಯುತ್ತಿರುವ ಪ್ರತಿಯೊಂದು ಅವ್ಯವಹಾರದ ಬಗ್ಗೆ ತನಿಖೆ‌ ನಡೆಸಲು ಸರಕಾರ ವಿಶೇಷ ತನಿಖಾ ತಂಡಗಳನ್ನ ರಚಿಸಬೇಕಿದೆ. ಮುಂದಿನ ದಿನದಲ್ಲಿ ಅರಣ್ಯ ಇಲಾಖೆಯಲ್ಲಿ ನಡೆಯುತ್ತಿರುವ ಮತಷ್ಟು ಬ್ರಹ್ಮಾಂಡ ಭೃಷ್ಟಾಚಾರದ ವರದಿಗಳನ್ನ ಬಯಲಿಗೆಳಯಲಾಗುವುದು..

ಅರಣ್ಯ ನಾಶವಾಗುತ್ತಿರುವುದು ಅರಣ್ಯವಾಸಿಗಳಿಂದಲ್ಲ..!

ಅರಣ್ಯ ನಾಶವಾಗುತ್ತಿರುವುದು ಅರಣ್ಯವಾಸಿಗಳಿಂದಲ್ಲ. ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ, ಅರಣ್ಯದ ಅಭಿವೃದ್ಧಿ ಎನ್ನುವ ನೆಪದಲ್ಲಿ ಕಳೆದ ಐದು ವರ್ಷದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಗಿಡ ಮರಗಳ‌ನಾಶವಾಗಿದೆ. ವಿವಿಧ ರೀತಿಯ ಕಾಲುವೆ ಹೊಡೆಯುವುದರಿಂದ, ಬೃಹತ್ ಗಾತ್ರ ಇಂಗುಗುಂಡಿ ಹೊಡೆಯುವ ಮೂಲಕ ಅಪರೂಪದ ಔಷಧಿ ಸಸ್ಯಗಳ ಜೊತೆಗೆ ಬೆಲೆಬಾಳುವ ಮರಗಳ ನಾಶ ಮಾಡಲಾಗುತ್ತಿದೆ.

ಈ ರೀತಿ ಟ್ರಚ್ ಹಾಗೂ ಇಂಗುಗುಂಡಿ ತೆಯುವ ಸಮಯದಲ್ಲಿ  ಕಡೆದ ಗಿಡ-ಮರಗಳನ್ನ ದಡಕ್ಕೆ ಹಾಕಿ ಮಣ್ಣಿನಿಂದ ಮುಚ್ಚಲಾಗುತ್ತದೆ. ಈ ಘಟನೆ ನಮ್ಮ ಗಮನಕ್ಕೂ ಬಂದಿದೆ. ಜಿಲ್ಲೆಗೆ ಸಿ ಎಂ ಬಂದಾಗ ಅವರ ಗಮನಕ್ಕೂ ತಂದಿದ್ದೆನೆ. ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತವಾಗಿರುವ ಕಾನೂನು ರೀತ್ಯಾ ಕ್ರಮವಾಗಬೇಕು.ಇದರಲ್ಲಿ ಸರಕಾರ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ ಕೂಡ ಇದೆ.  ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಜಿಲ್ಲಾಧ್ಯಕ್ಷರಾಗಿರುವ ರವೀಂದ್ರನಾಥ ನಾಯ್ಮ ತಿಳಿಸಿದ್ದಾರೆ.